ಎಡಿಟೋರಿಯಲ್

ಹೆಣದ ಬಾಯಲ್ಲಿ ಬೆಣ್ಣೆ ತಿಂದ ಪೊಲೀಸರು.!

   ದೊಂದು ವರದಕ್ಷಿಣೆ ಕಿರುಕುಳದ ಕೇಸುಮದುವೆಯಾದ ಮೂರೇ ವರ್ಷಕ್ಕೆ ಆ ಹೆಣ್ಣು ಮಗಳು ನೇಣಿಗೆ ಶರಣಾಗಿದ್ದಳುಅದು 1996ನಾನಾಗ ಲಷ್ಕರ್ ಠಾಣೆಯ ಇನ್‌ಸ್ಪೆಕ್ಟರ್ಮಹಿಳಾ ಠಾಣೆಯ ಉಸ್ತುವಾರಿ ಹೊಣೆಯೂ ನನ್ನ ಹೆಗಲೇರಿತ್ತು.

ಹೆಣ ಶವಾಗಾರದಲ್ಲಿತ್ತುಶವದ ಮೇಲಿನ ತನಿಖಾ ಮಹಜರೇನೋ ಮುಗಿದಿತ್ತುಆದರೆ ಮೃತಳ ಬಗ್ಗೆ ರಕ್ತ ಸಂಬಂಧಿಗಳ ಹೇಳಿಕೆ ಇನ್ನೂ ಪಡೆದಿರಲಿಲ್ಲಅದೋ ಶವಾಗಾರದ ಎದುರಿನ ಖಾಲಿಜಾಗಕೂರುವುದಕ್ಕೇ ಆಗದುಇನ್ನು ಬರೆಯುವುದಕ್ಕೆ ಸಾಧ್ಯವೇ? ‘ಇಲ್ಲಿ ಟೇಬಲ್ ಕುರ್ಚಿ ಏನೂ ಇಲ್ಲಬರೆಯಲು ಕಷ್ಟಹೇಳಿಕೆ ಕೊಡುವವರೆಲ್ಲಾ ಮಹಿಳಾ ಠಾಣೆಗೆ ಹೋಗಿಉಳಿದವರು ಇಲ್ಲಿರಲಿಅಷ್ಟರಲ್ಲಿ ಪೋಸ್ಟ್‌ಮಾರ್ಟಂ ಮುಗಿದಿರುತ್ತೆನೀವು ಬೆಂಗಳೂರಿಗೆ ಬೇಗ ಹೋಗಬಹುದು‘ ಎಂದು ಹೇಳಿ ರಕ್ತಸಂಬಂಧಿಗಳನ್ನು ಮಹಿಳಾ ಠಾಣೆಗೆ ಕಳಿಸಿಕೊಟ್ಟೆ.

ಮೃತಳ ಕಡೆಯವರು ಬೆಂಗಳೂರಿನ ಶ್ರೀಮಂತ ಪ್ರಭಾವಿಗಳುಪೋಸ್ಟ್ ಮಾರ್ಟಂ ಆದಮೇಲೆ ಬೆಂಗಳೂರಿನಲ್ಲೇ ಶವಸಂಸ್ಕಾರ ಮಾಡಿಸಬೇಕೆಂದು ತೀರ್ಮಾನಿಸಿದ್ದರುಮೃತಳ ಗಂಡನ ಕಡೆಯವರೊಬ್ಬರೂ ಅಲ್ಲಿರಲಿಲ್ಲ.

ಬೆಂಗಳೂರಿನಿಂದ ಒಂದೇ ಸಮನೆ ಮಂತ್ರಿ ಮಹೋದಯರನಾನಾ ಅಧಿಕಾರಿಗಳ ಕರೆಗಳು ಶುರುವಾದವು.

ಪೋಸ್ಟ್‌ಮಾರ್ಟಂ ಅರ್ಜೆಂಟ್ ಮಾಡಿಸಿ ಕಳಿಸಿಕೊಡಿಬೆಂಗಳೂರಲ್ಲೇ ದಫನ್ ಮಾಡಿಸುತ್ತಾರಂತೆನೆಂಟರಿಷ್ಟರೆಲ್ಲಾ ಇಲ್ಲೇ ಕಾದಿದ್ದಾರೆ

ಶವಾಗಾರದ ಒಳಗೆ ಹೋದರೆ 14-15 ಹೆಣಗಳು ಸಾಲಾಗಿ ಪೋಸ್ ಮಾರ್ಟಂಗಾಗಿ ಕಾದಿವೆಹಿಂದಿನ ದಿನವೇ ಮಾಡಬೇಕಿದ್ದ ಶವಗಳೂ ಹಾಗೇ ಮಲಗಿವೆಇರುವವರೋ ಇಬ್ಬರೇ ಡಾಕ್ಟರುಹೆಣ ಕೊಯ್ಯುವ ಸಿಬ್ಬಂದಿಯ ಕೊರತೆನಮಗೇನೋ ಅರ್ಜೆಂಟ್ ಅಂದರೆ ವೈದ್ಯರು ಅಡ್ಡಾದಿಡ್ಡಿಯಾಗಿ ಪೋಸ್ಟ್‌ಮಾರ್ಟಂ ಮಾಡಲಾದೀತೇಅಡಿಯಿಂದ ಮುಡಿಯವರೆಗೂ ಕತ್ತರಿಸಿ ಕೂಲಂಕಷವಾಗಿ ಪರೀಕ್ಷಿಸಿಸಾವಿಗೆ ನಿಜವಾದ ಕಾರಣವೇನೆಂಬ ವರದಿಯನ್ನು ಅಧಿಕೃತವಾಗಿ ನೀಡಬೇಕುಅದರಲ್ಲಿ ಕೊಂಚ ಎಡವಟ್ಟಾದರೂ ಕುತ್ತಿಗೆಗೆ ಬರುತ್ತದೆಹೂತ ಹೆಣವನ್ನು ಹೊರತೆಗೆಸಿ ಮರುಪರೀಕ್ಷೆ ಮಾಡಿಸುತ್ತೇವೆಂದು ಗಲಾಟೆ ಮಾಡುವವರಿಗೂ ಕೊರತೆ ಇಲ್ಲ.

ಶವಾಗಾರದ ಎದುರಿಗೆ ಗೊಳೋ ಎನ್ನುತ್ತಿದ್ದ ಹತ್ತಾರು ಆಕ್ರಂದನದ ಗುಂಪುಗಳುಸಂಕಟದ ಅಳುಚೀರಾಟ ಕಣ್ಣೀರ ಕೋಡಿ ಹರಿಸಿತ್ತುಸುದ್ದಿ ಕೇಳಿ ಬಂದಿದ್ದ ಜನರೂ ನೂರಾರುಎಲ್ಲರಿಗೂ ಪೋಸ್ಟ್ ಮಾರ್ಟಂನ ಅರ್ಜೆಂಟುನಮ್ಮ ಕೇಸಿನ ಬೆಂಗಳೂರು ಯುವತಿಯ ಶವ ಈಗಿನ್ನೂ ಹನ್ನೊಂದು ಗಂಟೆಗೆ ಬಂದಿದೆಸರದಿ ಬಿಟ್ಟು ನಮ್ಮದನ್ನು ಮೊದಲು ಮಾಡಿಸಲು ಹೋದರೆಬೇರೆ ಹೆಣಗಳ ಸಂಬಂಧಿಕರ ಆಕ್ರೋಶ ಎದುರಿಸುವುದು ಕಷ್ಟ.

ಶವಾಗಾರದ ಒಳಗಡೆ ಹೋಗಿ ವೈದ್ಯರನ್ನು ಕಂಡು ಪರಿಸ್ಥಿತಿ ವಿವರಿಸಿ ವಿನಂತಿಸಿದೆ.

ನೀವೇ ನೋಡ್ತಿದ್ದೀರಿಇನ್ನೂ ಹದಿಮೂರು ಹೆಣಗಳಿವೆನಾನಿರೋದು ಒಬ್ಬಇನ್ನೊಬ್ಬ ಡಾಕ್ಟರ್ ಈವತ್ತೇ ರಜಾ ಹಾಕಿದ್ದಾರೆಇವುಗಳ ಸಂಬಂಧಿಕರು ಒಬ್ಬೊಬ್ಬರೂ ನಾನಾ ಒತ್ತಡ ತರುತ್ತಿದ್ದಾರೆಬೇಗ ಮುಗಿಸಿಕೊಡಿ ಅಂತನಿಮ್ಮದಾದರೆ ಮಿನಿಸ್ಟ್ರು ಇನ್ ಫ್ಲುಯೆನ್ಸುಬೆಂಗಳೂರಿನಿಂದ ಬರ್ತಿದೆಇವರುಗಳದ್ದು ನೋಡಿ ಎಲ್ಲ ಇಲ್ಲಿಯ ಕಾರ್ಪೊರೇಟರ್‌ಗಳುಜಿಲ್ಲಾ ಪಂಚಾಯಿತಿಯವರುಲೋಕಲ್ ಲೀಡರ್‌ಗಳದ್ದುಇವರೆಲ್ಲಾನಮ್ಮದು ಆಯ್ತಾ ಆಯ್ತಾ ಅಂತ ಎಲ್ಲ ಇಲ್ಲೇ ತಲೇ ಮೇಲೆ ಕೂತಿದ್ದಾರೆಶವಾಗಾರದ ಒಳಕ್ಕೆ ಬರಬೇಡಿ ಅಂದರೂ ಕೇಳೋದಿಲ್ಲಒಳಗೆ ಬಂದು ಬಂದು ಇಣುಕಿ ಇಣುಕಿ ಹೋಗ್ತಿದ್ದಾರೆ.”

ನಮ್ಮ ಪೊಲೀಸ್ನೋರನ್ನೆ ಯಾರನ್ನಾದ್ರೂ ಬಾಗಿಲಲ್ಲಿ ನಿಲ್ಲಿಸ ಬೇಕಿತ್ತು ನೀವು” ಎಂದೆ.

ಅವರೂ ಹೇಳಿ ಹೇಳಿ ಸಾಕಾಗಿ ಹೋದರು ಕಣ್ರೀಒಂದು ಪೋಸ್ಟ್ ಮಾರ್ಟಂ ಮುಗಿದ ಮೇಲೆ ಮುಂದಿನ ಹೆಣ ಯಾವುದು ಅನ್ನೋದು ನನಗಿಂತ ಈ ಲೀಡರ್‌ಗಳಿಗೇ ಚೆನ್ನಾಗಿ ಗೊತ್ತಿದೆಈ ಕ್ಯೂ ಕೊಂಚ ಮಿಸ್ ಆದರೂ ವರಾತ ಶುರು ಮಾಡ್ತಾರೆ” ವೈದ್ಯರು ಅಸಹಾಯಕತೆ ತೋಡಿಕೊಂಡರು.

ಯಾವುದಾದರೂ ಒಂದು ಛಾನ್ಸ್ ನೋಡಿ ಪೋಸ್ಟ್‌ಮಾರ್ಟಂ ಮಾಡಿಸಿ ಬಿಡೋಣ ಎಂದು ಶವಾಗಾರದೊಳಗೇ ನಾನೂ ಕುಳಿತೆಹೆಣಗಳ ದುರ್ನಾತ ಹೊಸದಲ್ಲವಾದರೂಹತ್ತಾರು ಹೆಣಗಳ ಕೊಳೆಯುವಿಕೆಯ ದುರ್ನಾತ ಮಿಳಿತವಾಗಿ ಮೂಗಿಗೇ ಅಡರುತ್ತಿತ್ತುಇನ್ನೇನು ವಾಂತಿಯಾಗಿಬಿಡುತ್ತದೆ ಎಂಬಷ್ಟು ಹೇವರಿಕೆ ಬಂತು.

ಆಗೆಲ್ಲ ಮೊಬೈಲ್ ಇರಲಿಲ್ಲಮೇಲಧಿಕಾರಿಗಳದ್ದು ವೈರ್‌ಲೆಸ್‌ನಲ್ಲಿ ಒಂದೇ ವರಾತಶವಾಗಾರದಿಂದ ಹೊರ ಹೋಗಿ ಯಾರದೋ ಅಂಗಡಿ ಫೋನಿನಿಂದ ಮಾತಾಡಿದರೆ, “ಯಾಕಿಷ್ಟು ತಡಏನು ಮಾಡ್ತಿದ್ದೀರಿಬೇಗ ಮಾಡುಸ್ರೀಒಂದೇ ಸಮ ಫೋನ್ ಬರ್ತಿವೆ ಗೊತ್ತಾಯ್ತಾ?”

ಅವರಿಗೆ ಪರಿಸ್ಥಿತಿ ವಿವರಿಸಿದರೆ, “ಏನ್ರೀ ಒಬ್ಬ ಇನ್‌ಸ್ಪೆಕ್ಟರಾಗಿದ್ದುಕೊಂಡು ಇಲ್ಲದ ಕತೆ ಹೊಡಿತೀರಲ್ರೀಅರ್ಧ ಗಂಟೇಲಿ ಮುಗಿದು ಹೋಗೋ ಕೆಲ್ಸಕ್ಕೆ ಇಷ್ಟು ಹೊತ್ತೇಯಾಕೆ ಡಾಕ್ಟರೇನಾದ್ರೂ ಎಕ್ಸ್‌ಪೆಕ್ಟ್ ಮಾಡ್ತಿದ್ದಾರಾ?”

ನೋ ನೊ ಸರ್ನಿನ್ನೆ ಮೊನ್ನೆಯ ಹೆಣಗಳೂ ಸೇರಿದಂತೆ 13 ಹೆಣಗಳು ಬಿದ್ದಿವೆಅದರಲ್ಲಿ ಐದು unknown dead bodiesಅವು ಹಾಗೇ ಬಿದ್ದಿವೆಉಳಿದ ಹೆಣಗಳ ಕಡೆಯವರೆಲ್ಲಾ ತುಂಬಿ ಹೋಗಿದ್ದಾರೆಎಲ್ಲರಿಗೂ ಅರ್ಜೆಂಟು.

ನಮ್ಮ ಹೆಣವನ್ನೀಗ ಪ್ರತ್ಯೇಕವಾಗಿ ಮೊದಲು ತಗೊಂಡರೆ ದೊಡ್ಡ ಗಲಾಟೆ ಶುರುವಾಗುತ್ತೆಏನೋ interal ವ್ಯವಸ್ಥೆ ಮಾಡಿದ್ದೇನೆಇನ್ನೊಂದು ಮೂರು ಗಂಟೆಯೊಳಗೆ ಆಗುತ್ತೆ ಸಾರ್” ಎಂದೆ.

ಏನೂ ಇನ್ನೂ ಮೂರು ಗಂಟೆಯಾಗುತ್ತಾಅವರೆಲ್ಲಾ ಬೆಂಗಳೂರು ತಲುಪೋದು ಯಾವಾಗ್ರೀದಫನ್ ಮಾಡೋದು ಯಾವಾಗಮಧ್ಯಾಹ್ನ at any cost ಮೂರುಗಂಟೆ ಒಳಗೆ ಅವರು ಅಲ್ಲಿರಬೇಕು ಗೊತ್ತಾ?”

ಅಷ್ಟು ಬೇಗ ಕಷ್ಟ ಸಾರ್

ಅವರಿಗಂತೂ ಏನೇನೂ ಸಮಾಧಾನವಾಗಲಿಲ್ಲನಿಮ್ಮಂಥ ಯೂಸ್‌ಲೆಸ್ ಫೆಲೋಗಳೆಲ್ಲಾ ಯಾಕ್ರೀ ಕೆಲಸಕ್ಕೆ ಬರ್ತೀರಿ ಎಂಬ ದನಿ ಅಲ್ಲಿತ್ತುಅವರ ಕೊಸರಾಟದ ದನಿಯಲ್ಲಿ ಅದು ಸ್ಪಷ್ಟವಾಗಿ ಸ್ಛುರಿಸುತ್ತಿತ್ತು.

ಹತಾಶರಾದವರಂತೆ, “ಹೋಗ್ಲಿ. inquest (ಶವದ ಮೇಲಿನ ತನಿಖೆಆದ್ರೂ ಆಯಿತಾ?”

ಆಗ್ತಾ ಇದೆ ಸಾರ್ಇಲ್ಲಿ ಬರೆಯೋದಿಕ್ಕೆ ಅನುಕೂಲ ಇಲ್ಲ ಅಂತ ಮಹಿಳಾ ಠಾಣೆಗೆಹುಡುಗಿ ಕಡೆಯವರನ್ನು ಕಳಿಸಿದ್ದೇನೆಅವರೆಲ್ಲರ ಹೇಳಿಕೆಗಳನ್ನು ಮಹಿಳಾ ಪೊಲೀಸರು ಬರೆದುಕೊಳ್ತಿದ್ದಾರೆಇಲ್ಲಿ ಪೋಸ್ಟ್‌ಮಾರ್ಟಂ ಕೆಲಸ ಆಗೋದ್ರೊಳಗೆ ಅಲ್ಲಿ ಆ ಕೆಲಸವೂ ಮುಗಿದಿರುತ್ತೆಅವರೆಲ್ಲಾ ಸೀದಾ ಹೊರಟು ಬಿಡಬಹುದು” ಎಂದೆ.

ಅಸಮಾಧಾನದಿಂದ ಕುದಿಯುತ್ತ ಮೇಲಧಿಕಾರಿ ಥಟ್ಟನೆ ಫೋನಿಟ್ಟರು.

ಆ ಅಂಗಡಿಯಿಂದ ಬರುತ್ತಿರುವಾಗಲೇ ಕಂಟ್ರೋಲ್ ರೂಮಿನಿಂದ ಪುನಃ ಕರೆ ಬಂತು.

ಸಾಹೇಬರಿಗೆ ಅರ್ಜೆಂಟು ಫೋನ್ ಮಾಡಬೇಕಂತೆ

(ಮುಂದುವರಿಯುವುದು)

 

andolanait

Recent Posts

ಮಂಡ್ಯ | ಶೂಟೌಟ್‌ ಪ್ರಕರಣ ; 7 ಆರೋಪಿಗಳ ಬಂಧನ

ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಟಯೋಟ ಕಾರು, ಪಿಸ್ತೂಲ್ ವಶ: ಎಸ್‌ಪಿ ಮಂಡ್ಯ : ನಗರದ ಹೊರವಲಯದ ಹೆದ್ದಾರಿಯಲ್ಲಿ ಜು.2ರ ಗುರುವಾರ…

7 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಇಚ್ಛಾಶಕ್ತಿ ಇದ್ದರೆ , ಕನ್ನಡ ಚಿತ್ರೋದ್ಯಮದ ಕಾಯಕಲ್ಪಕ್ಕಿದು ಸಕಾಲ

ಚಿತ್ರೋದ್ಯಮಿಗಳೂ ಆಗಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಮೊನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರ…

13 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 3 , ಶುಕ್ರವಾರ

16 hours ago

ನಂಜನಗೂಡು | ಲೋಕಾ ಬಲೆಗೆ ಬಿದ್ದ ಸರ್ವೆಯರ್‌

ನಂಜನಗೂಡು : ಜಮೀನಿನ ಪೋಡಿ ಹಾಗೂ ದುರಸ್ತಿಪಡಿಸಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ. ತಾಲ್ಲೂಕಿನ…

1 day ago

ಅನೈತಿಕ ಸಂಬಂಧದ ಶಂಕೆ : ರಾಡ್‌ನಿಂದ ಹೊಡೆದು ಪತ್ನಿ ಕೊಂದ ಪತಿ

ಶ್ರೀರಂಗಪಟ್ಟಣ : ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ…

1 day ago

ರಾಮನಗರ: ಕಲ್ಲು ಕ್ವಾರಿಯಲ್ಲಿ ದುರಂತ: ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣ ಬಳಿ…

2 days ago