BREAKING NEWS

ಸರಕು ಸಾಗಣೆಯಿಂದ ಮೈಸೂರು ರೈಲ್ವೆಗೆ ದಾಖಲೆಯ 877 ಕೋಟಿ ರೂ. ಆದಾಯ

ಮೈಸೂರು : ಮೈಸೂರು ರೈಲ್ವೆ ವಿಭಾಗವು 2023ರ ಮಾರ್ಚ್ 28ರವರೆಗೆ 9.378 ದಶಲಕ್ಷ ಟನ್‌ ಸರಕು ಸಾಗಣೆ ಮಾಡಿ 877 ಕೋಟಿ ರೂ. ಆದಾಯ ಗಳಿಸಿದೆ. ಇದು ಇಲ್ಲಿಯವರೆಗೆ ಮೈಸೂರು ವಿಭಾಗದಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆ ಆದಾಯವಾಗಿದೆ.
ಇದು 2021-22ರಲ್ಲಿ ಒಟ್ಟು ಸರಕು ಸಾಗಣೆ ಆದಾಯಕ್ಕಿಂತ ಶೇ. 27.43ರಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ ನೈಋುತ್ಯ ರೈಲ್ವೆ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿಗಿಂತ ಶೇ. 18.52 ಹೆಚ್ಚಾಗಿದೆ. ಪ್ರಸಕ್ತ ವರ್ಷದ ಸಂಪೂರ್ಣ ಗುರಿಯಾದ 739.99 ಕೋಟಿ ರೂ.ಗಳನ್ನು ವಿಭಾಗವು 329 ದಿನಗಳಲ್ಲಿಯೇ ಮೀರಿದೆ.
9.230 ದಶಲಕ್ಷ ಟನ್‌ಗಳಷ್ಟು ಇದ್ದ ಗುರಿಯನ್ನು ಮೀರಿಸಿ 9.378 ದಶಲಕ್ಷ ಟನ್‌ಗಳಷ್ಟು ಸರಕು ಸಾಗಿಸಲಾಗಿದ್ದು, ಇದು ಮೈಸೂರು ವಿಭಾಗದಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆಯಾಗಿದೆ. ಭಾರತೀಯ ರೈಲ್ವೆಯ ‘ಹಂಗ್ರಿ ಫಾರ್‌ ಕಾರ್ಗೋ’ ಕರೆಗೆ ಓಗೊಟ್ಟ ಮೈಸೂರು ವಿಭಾಗ ಈ ಸಾಧನೆ ಮಾಡಿದೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯಿಂದ ಬರುವ ಆದಾಯವು ಆರ್ಥಿಕ ವರ್ಷ 2022ರಲ್ಲಿ ಸಾಧಿಸಲಾಗಿದ್ದ 122 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 51ರಷ್ಟು ಹೆಚ್ಚಳವಾಗಿದ್ದು 185 ಕೋಟಿ ರೂ.ಗೆ ತಲುಪಿದೆ. ಇತರ ಸರಕುಗಳಾದ ಆಹಾರ ಧಾನ್ಯಗಳು, ಸಕ್ಕರೆ, ಸಿಮೆಂಟ್‌ ಮತ್ತು ದ್ವಿಚಕ್ರ ವಾಹನಗಳ ಆದಾಯ ಸಹ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿವೆ.

ಹಳಿ ದ್ವಿಗುಣಗೊಳಿಸುವಿಕೆ, ಮುಖ್ಯ ಮಾರ್ಗಗಳ ವಿದ್ಯುದೀಕರಣ, ಸರಕು ಸಾಗಣೆ ನಿರ್ವಹಣೆಯ ಟರ್ಮಿನಲ್‌ಗಳ ಉನ್ನತೀಕರಣ ಮತ್ತು ರೌಂಡ್‌-ದಿ-ಕ್ಲಾಕ್‌ ಲೋಡಿಂಗ್‌ನ ಸೌಲಭ್ಯದಂತಹ ನಿರ್ಣಯಗಳು ಮತ್ತು ಮೂಲಸೌಕರ್ಯ ಸಾಮರ್ಥ್ಯ-ನಿರ್ಮಾಣ ಯೋಜನೆಗಳ ತ್ವರಿತ ಕಾರ್ಯಗತಗೊಳಿಸುವಿಕೆ ಮುಂತಾದ ಕಾರಣಗಳಿಂದಾಗಿ ವಿಭಾಗವು ಸರಕು ಸಾಗಣೆಯ ಕಾರ್ಯಕ್ಷಮತೆಯನ್ನು ಮುಂಬರುವ ವರ್ಷಗಳಲ್ಲಿಯೂ ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ರೈಲ್ವೆಯು ಸಾರಿಗೆ ಕ್ಷೇತ್ರದಲ್ಲಿನ ತನ್ನ ಪಾಲನ್ನು ಹೆಚ್ಚಿಸಲು ದೇಶಾದ್ಯಂತ ಖನಿಜ ಜಿಲ್ಲೆಗಳನ್ನು ಗುರುತಿಸುತ್ತಿದೆ. ಹೀಗಾಗಿ ಮೈಸೂರು ವಿಭಾಗವು ಸದ್ಯದ ಭವಿಷ್ಯದಲ್ಲಿ ಸರಕು ಸಾಗಣೆಯ ವಿಭಾಗದಲ್ಲಿ ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುವ ಹೊಸ್ತಿಲಲ್ಲಿದೆ. ಈ ದಾಖಲೆಯ ಸಹಕರಿಸಿದವರಿಗೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್‌ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

lokesh

Recent Posts

ಮಿರ್ಲೆ-ಭೇರ್ಯ-ಕೊಡಿಯಾಲ ರಸ್ತೆ ಅಭಿವೃದ್ಧಿ ಯಾವಾಗ?

ಭೇರ್ಯ ಮಹೇಶ್ ಪ್ರತಿನಿತ್ಯ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಕೆ.ಆರ್.ನಗರ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ…

3 mins ago

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

15 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

23 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

24 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

24 hours ago