ಎಡಿಟೋರಿಯಲ್

‘ನೋ ಸ್ಕೂಲ್ ನೋ ಫುಟ್‌ಬಾಲ್’ ಎಂಬ ಮ್ಯಾಜಿಕ್!

   ಮುಂಬೈಯ ಅಂಬೇಡ್ಕರ್ ನಗರದ ಸ್ಲಮ್ಮಿನಲ್ಲಿ ವಾಸಿಸುವ ಅಶೋಕ್ ರಾಥೋಡ್ ತನ್ನ ವಠಾರದ ಮಕ್ಕಳು ಒಬ್ಬೊಬ್ಬರಾಗಿ ಶಾಲೆ ಬಿಟ್ಟುಸಮೀಪದ ಸಸ್ಸೂನ್ ಡಾಕಿನಲ್ಲಿ ಕೆಲಸ ಮಾಡಲು ಹೋಗುವುದನ್ನು ನೋಡಿ ತಳಮಳಗೊಳ್ಳುತ್ತಿದ್ದರುಅವರೂ ಕೂಡ ತನ್ನ ಬಾಲ್ಯದಲ್ಲಿ ಆ ಮಕ್ಕಳಂತೆ ಶಾಲೆ ಬಿಟ್ಟು ಅದೇ ಸಸ್ಸೂನ್ ಡಾಕಿಗೆ ಕೆಲಸಕ್ಕೆ ಹೋಗುತ್ತಿದ್ದರೋ ಏನೋಆದರೆ ಅವರ ತಂದೆಹಾಗೇನಾದರೂ ಮಾಡಿದರೆ ಮನೆಯಿಂದ ಹೊರಕ್ಕೆ ಹಾಕುತ್ತೇನೆ ಎಂದು ಗದರಿಸಿದ ಕಾರಣ ಶಾಲೆಗೆ ಹೋಗಿ ಮುಂದೆ ಕಾಲೇಜು ಶಿಕ್ಷಣವನ್ನೂ ಮುಗಿಸಿದ್ದರು. 2006ರಲ್ಲಿಅಶೋಕ್ ರಾಥೋಡ್ ಕಾಲೇಜಿಗೆ ಹೋಗುತ್ತಿದ್ದಾಗಲೇ ‘ಮ್ಯಾಜಿಕ್ ಬಸ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಫುಟ್‌ಬಾಲ್ ಕೋಚಿಂಗ್ ಮಾಡುತ್ತಿದ್ದರುಶಾಲೆ ಬಿಟ್ಟು ಡಾಕಿನಲ್ಲಿ ಕೆಲಸ ಮಾಡುವ ಅವರ ವಠಾರದ ಒಂದಷ್ಟು ಮಕ್ಕಳು ಅವರಿಗೆ ಪರಿಚಯವಿದ್ದರುಆ ಮಕ್ಕಳನ್ನು ಹೇಗಾದರೂ ಮಾಡಿ ಪುನಃ ಶಾಲೆಗೆ ಹೋಗುವಂತೆ ಮಾಡುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ಅವರಿಗೆ ಹೊಳೆದ ದಾರಿ ಫುಟ್‌ಬಾಲ್ ಆಟ.

ಒಂದು ಶನಿವಾರ ಸಂಜೆ ಹೊತ್ತು ಅಶೋಕ್ ರಾಥೋಡ್ ಮುಂಬೈಯ ಒಂದು ಮೈದಾನಿನಲ್ಲಿ 18 ಹುಡುಗರನ್ನು ಫುಟ್‌ಬಾಲ್ ಆಡಲು ಆಹ್ವಾನಿಸಿದರುಪ್ರಾರಂಭದಲ್ಲಿ ಕೆಲವು ಹುಡುಗರು ಜಾತಿ ಕಾರಣ ನೀಡಿ ಇತರ ಮಕ್ಕಳೊಂದಿಗೆ ಆಡಲು ನಿರಾಕರಿಸಿದಾಗ ಅಶೋಕ್ ರಾಥೋಡ್ ಮಕ್ಕಳ ತಂಡಗಳನ್ನು ಮಾಡಿತಂಡದ ಯಾರೇ ಆಟಗಾರ ಗೋಲ್ ಹೊಡೆದರೂ ಇಡೀ ತಂಡವು ಅದನ್ನು ಸಂಭ್ರಮಿಸಬೇಕುಇಲ್ಲವಾದರೆ ಆ ಗೋಲನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂಬ ನಿಯಮವನ್ನು ಮಾಡಿದರುಇದರ ಪರಿಣಾಮವಾಗಿ ಒಂದು ವರ್ಷದಲ್ಲಿ ಮಕ್ಕಳು ಜಾತಿಧರ್ಮವನ್ನು ಮರೆತು ಬಿಟ್ಟರುಅದರೊಂದಿಗೆ ಅವರು ಮಾತಾಡುವಾಗ ಹೊಲಸು ಬೈಗುಳಕಟ್ಟ ಪದಗಳ ಬಳಕೆಯೂ ಕಡಿಮೆಯಾಯಿತು.

ಹೀಗೆ ಒಂದು ವರ್ಷ ಕಾಲ ಕಳೆದ ನಂತರ ಅಶೋಕ್ ರಾಥೋಡ್ ಫುಟ್‌ಬಾಲ್ ಆಡುವುದನ್ನು ಯಾರು ಮುಂದುವರಿಸಲು ಬಯಸುತ್ತಾರೋ ಅವರು ಶಾಲೆಗೆ ಮರಳಿ ಸೇರ್ಪಡೆಯಾಗಬೇಕು ಎಂಬ ‘ನೋ ಸ್ಕೂಲ್ ನೋ ಫುಟ್‌ಬಾಲ್’ ಎಂಬ ಷರತ್ತನ್ನು ಹಾಕಿದರುಹೆಚ್ಚಿನ ಮಕ್ಕಳು ಆ ಷರತ್ತನ್ನು ಒಪ್ಪಿ ಶಾಲೆಗೆ ಪುನಃ ಸೇರ್ಪಡೆಗೊಂಡರುಆದರೆಆ ಮಕ್ಕಳು ಶಾಲೆ ಬಿಟ್ಟು ಅದಾಗಲೇ ಸಾಕಷ್ಟು ಸಮಯ ಆಗಿದ್ದರಿಂದ ಅವರಲ್ಲಿ ಹಲವರು ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರುಅಶೋಕ್ ಅಂತಹ ಮಕ್ಕಳನ್ನು ಒಂದು ಸರ್ಕಾರೇತರ ಸಂಸ್ಥೆಗೆ ದಾಖಲಿಸಿದರು.

ಕೆಲ ಕಾಲ ಕಳೆದ ನಂತರಮಕ್ಕಳ ಸಂಖ್ಯೆ ಬೆಳೆದಾಗ ಅಶೋಕ್ ರಾಥೋಡ್‌ರಿಗೆ ಖರ್ಚನ್ನು ನಿಭಾಯಿಸುವುದು ಕಷ್ಟವಾಗತೊಡಗಿತುಆ ಸಮಯಕ್ಕೆ, 2008ರಲ್ಲಿ ಸಿಎನ್‌ಎನ್ಐಬಿಎನ್ ಮಾಧ್ಯಮ ಸಂಸ್ಥೆ ಅಶೋಕ್ ರಾಥೋಡ್‌ರ ಸಾಧನೆಯನ್ನು ಗುರುತಿಸಿ ‘ರಿಯಲ್ ಹೀರೋ ಅವಾರ್ಡ್’ ಎಂಬ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತುಆ ಪ್ರಶಸ್ತಿಯೊಂದಿಗೆ ಬಂದ 3.45 ಲಕ್ಷ ರೂಪಾಯಿಯ ಸಹಾಯದಿಂದ ಅವರು ಮಕ್ಕಳಿಗೆ ಸಮವಸ್ತ್ರಆಟದ ಸಲಕರಣೆ ಖರೀದಿಸಿದರು ಮತ್ತು ಅಂಬೇಡ್ಕರ್ ನಗರದಲ್ಲಿ ಮಕ್ಕಳಿಗಾಗಿ ಒಂದು ಕಮ್ಯುನಿಟಿ ಸೆಂಟರನ್ನು ಬಾಡಿಗೆಗೆ ಪಡೆದರುಅದು ಈಗಲೂ ಕಾರ್ಯನಿರ್ವಹಿಸುತ್ತಿದೆ.

2010ರ ಹೊತ್ತಿಗೆ ಮಕ್ಕಳ ಸಂಖ್ಯೆ 300 ಆಯಿತುಅಷ್ಟರಲ್ಲಿ ಪ್ರಶಸ್ತಿ ಹಣವೆಲ್ಲ ಖಾಲಿಯಾಯಿತುಆಗ ಅಶೋಕ್ ರಾಥೋಡ್ ಕೆಲವು ಕಾರ್ಪೊರೇಟ್ ಸಂಸ್ಥೆಗಳನ್ನು ಹುಡುಕಿ ದೇಣಿಗೆ ಪಡೆಯಲು ಪ್ರಯತ್ನಿಸಿದಾಗಅವರ ಸಂಸ್ಥೆ ರಿಜಿಸ್ಟರ್ಡ್ ಆದುದಲ್ಲವೆಂಬ ಕಾರಣಕ್ಕೆ ಯಾವ ಸಂಸ್ಥೆಯೂ ದೇಣಿಗೆ ಕೊಡಲು ಮುಂದೆ ಬರಲಿಲ್ಲಆಗ ಅಶೋಕ್ ರಾಥೋಡ್ ತಮ್ಮ ಸಂಸ್ಥೆಯನ್ನು ‘ಆಸ್ಕರ್’ ಎಂಬ ಹೆಸರಲ್ಲಿ ರಿಜಿಸ್ಟ್ರಿಗೊಳಿಸಿದರು. ‘ಆರ್ಗನೈಸೇಷನ್ ಫಾರ್ ಸೋಷಿಯಲ್ ಚೇಂಜ್ಅವೇರ್‌ನೆಸ್ ಆಂಡ್ ರೆಸ್ಪಾನ್ಸಿಬಿಲಿಟಿ’ ಎಂಬುದು ‘ಆಸ್ಕರ್’ ಎಂಬುದರ ಪೂರ್ಣ ರೂಪಆದರೆಅವರು ಸಂಸ್ಥೆಯನ್ನು ರಿಜಿಸ್ಟ್ರಿಗೊಳಿಸಿದ ನಂತರವೂ ಯಾವುದೇ ದೇಣಿಗೆ ಹುಟ್ಟಲಿಲ್ಲಯಾವುದೇ ಒಂದು ಸಾಮಾಜಿಕ ಸಂಸ್ಥೆಗೆ ಪ್ರಪ್ರಥಮ ದೇಣಿಗೆ ಪಡೆಯುವುದು ಎಷ್ಟು ಪ್ರಯಾಸದ ಕೆಲಸವೆಂಬುದನ್ನು ಅನುಭವಿಸಿದವರೇ ಬಲ್ಲರು.

ಆ ಹೊತ್ತಲ್ಲಿ ಟಾಟಾ ಕಂಪೆನಿಯ ತಾಜ್ ಹೋಟೆಲ್ ಗುಂಪಿಗೆ ಸೇರಿದ ‘ಇಂಡಿಯನ್ ಹೋಟೆಲ್ ಕಂಪೆನಿ’ಯ ಕೆಲವು ಉದ್ಯೋಗಿಗಳು ಅಶೋಕ್ ರಾಥೋಡ್‌ರ ಬಗ್ಗೆ ತಿಳಿದುಅವರು ಮಕ್ಕಳಿಗೆ ಮೈದಾನದಲ್ಲಿ ಫುಟ್‌ಬಾಲ್ ತರಬೇತಿ ಕೊಡುವ ಸಮಯದಲ್ಲಿ ಅವರನ್ನು ಭೇಟಿಯಾದರು. ‘ರೀಡರ‍್ಸ್ ಡೈಜೆಸ್ಟ್’ ಪತ್ರಿಕೆಯಲ್ಲಿ ಅಶೋಕ್ ರಾಥೋಡ್ ಕುರಿತು ಒಂದು ಲೇಖನ ಪ್ರಕಟವಾಯಿತುಲೇಖನದ ಜೊತೆ ಅಶೋಕ್ ರಾಥೋಡ್ ಜೊತೆ ಇಂಡಿಯನ್ ಹೋಟೆಲ್ ಕಂಪೆನಿಯ ಉದ್ಯೋಗಿಗಳಿರುವ ಫೋಟೋಗಳು ಕೂಡ ಪ್ರಕಟವಾದವುಅದನ್ನು ಕೈಯಲ್ಲಿ ಹಿಡಿದು ಅವರು ಸ್ಪಾನ್ಸರ್‌ಶಿಪ್‌ಗಾಗಿ ಐಡಿಬಿಐ ಬ್ಯಾಂಕಿನ ಸಿಎಸ್‌ಆರ್ ತಂಡವನ್ನು ಸಂಪರ್ಕಿಸಿದರುಫೋಟೋ ನೋಡಿಅಶೋಕ್ ರಾಥೋಡ್‌ರಿಗೆ ತಾಜ್ ಗುಂಪು ಸ್ಪಾನ್ಸರ್‌ಶಿಪ್ ನೀಡುತ್ತಿದೆ ಎಂದು ತಿಳಿದ ಐಡಿಬಿಐ ಅವರಿಗೆ ಸ್ಪಾನ್ಸರ್‌ಶಿಪ್ ನೀಡಲು ಒಪ್ಪಿತುಅಲ್ಲಿಂದ ಅಶೋಕ್ ರಾಥೋಡ್ ‘ಕೋಟಕ್ ಬ್ಯಾಂಕ್’ಗೆ ಹೋದರುಐಡಿಬಿಐ ಬ್ಯಾಂಕ್ ಅವರಿಗೆ ಸ್ಪಾನ್ಸರ್‌ಶಿಪ್ ನೀಡಲು ಮುಂದೆ ಬಂದುದನ್ನು ತಿಳಿದ ಕೋಟಕ್ ಬ್ಯಾಂಕ್ ತಾನೂ ಅವರಿಗೆ ಸ್ಪಾನ್ಸರ್‌ಶಿಪ್ ನೀಡಲು ಮುಂದಾಯಿತುಹೀಗೆ ಅಶೋಕ್ ರಾಥೋಡ್ ಅಗತ್ಯ ಸ್ಪಾನ್ಸರ್‌ಶಿಪ್ ಪಡೆಯುವಲ್ಲಿ ಯಶಸ್ವಿಯಾದರುಮುಂದಿನದು ಅವರ ಪಾಲಿಗೆ ಚರಿತ್ರೆ!

ಈಗ 29 ವರ್ಷ ಪ್ರಾಯವಾಗಿರುವ ಗೋವಿಂದ ರಾಥೋಡ್ಅಶೋಕ್ ರಾಥೋಡ್‌ರ ಮೂಲ 18 ಹುಡುಗರಲ್ಲೊಬ್ಬಅವನ ಹೆತ್ತವರು ಜೀವನೋಪಾಯಕ್ಕೆ ಸಸ್ಸೂನ್ ಡಾಕಿನ ಮೀನು ಮಾರ್ಕೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದರುಗೋವಿಂದ ರಾಥೋಡ್ 12 ವರ್ಷದವನಾಗಿದ್ದಾಗ ಅವನ ಹೆತ್ತವರು ಪನ್ವೆಲ್ ಎಂಬಲ್ಲಿಗೆ ನೆಲೆ ಬದಲಾಯಿಸಿದಾಗಅವನೂ ಶಾಲೆ ಬಿಟ್ಟು ಅವರೊಂದಿಗೆ ಪನ್ವೆಲ್‌ಗೆ ಹೋಗಿಅಲ್ಲೊಂದು ಚಿಕ್ಕ ಕ್ಯಾಂಟೀನ್‌ನಲ್ಲಿ ಕೆಲಸ ಮಾಡತೊಡಗಿದನುಎರಡು ವರ್ಷಗಳ ನಂತರಗೋವಿಂದ ರಾಥೋಡ್ ಒಮ್ಮೆ ಮುಂಬೈಗೆ ಬಂದಾಗಮೊದಲೇ ಪರಿಚಯವಿದ್ದ ಅಶೋಕ್ ರಾಥೋಡರನ್ನು ಭೇಟಿಯಾದನುಆ ಭೇಟಿ ಗೋವಿಂದ ರಾಥೋಡ್‌ನ ಬದುಕನ್ನೇ ಬದಲಾಯಿಸಿತು.

ಫುಟ್‌ಬಾಲ್ ಆಡುವ ಸಲುವಾಗಿ ಗೋವಿಂದ ರಾಥೋಡ್ ತಾನು ಬಿಟ್ಟಿದ್ದ ಶಾಲೆಯನ್ನು ಪುನಃ ಸೇರಿದನುಫೀಸು ಕಟ್ಟಲು ಬೇಕಾದ ಹಣ ಹೊಂದಿಸಲು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ದಿನಪತ್ರಿಕೆ ಮಾರುವುದುಕೆಲವು ಕಟ್ಟಡಗಳಲ್ಲಿ ಟಾಯ್ಲೆಟ್ ಸ್ವಚ್ಛಗೊಳಿಸುವುದು ಮೊದಲಾದ ಕೆಲಸಗಳನ್ನು ಮಾಡಿದನುಅವನ ಕುಟುಂಬದಲ್ಲಿ ಯಾರೂ 10ನೇ ತರಗತಿಗಿಂತ ಹೆಚ್ಚು ಕಲಿತವರಿಲ್ಲತಾನು ಆ ಮಿತಿಯನ್ನು ಮೀರಲು ನಿರ್ಧರಿಸಿದನು ಮತ್ತು ಅದನ್ನು ಸಾಧಿಸಿದನು. 2014ರ ವಿಶ್ವ ಫುಟ್‌ಬಾಲ್ ಚಾಂಪಿಯನ್ ಶಿಪ್ ನಡೆದಾಗ ಗೋವಿಂದ ರಾಥೋಡ್ ದಕ್ಷಿಣ ಕೊರಿಯಾಕ್ಕೆ ಹೋಗಿ ‘ಯುನೈಟೆಡ್ ನೇಷನ್ಸ್ ಯೂತ್

ಲೀಡರ್‌ಶಿಪ್ ಕ್ಯಾಂಪ್’ನಲ್ಲಿ ಭಾಗವಹಿಸಿದನು ಮತ್ತು ವಿಯಾಟ್ನಾಮ್‌ನಲ್ಲಿ ‘ಆಡಿಡಾಸ್ ಫುಟ್‌ಬಾಲ್ ಎಕ್ಸ್‌ಚೇಂಜ್ ಪ್ರೊಗ್ರಾಮ್’ ನಲ್ಲಿ ಭಾಗವಹಿಸಿದನುಕಾಲೇಜು ಶಿಕ್ಷಣವನ್ನು ಮುಗಿಸಿಸ್ಕಾಲರ್‌ಶಿಪ್ ಪಡೆದುಜರ್ಮನಿಯಲ್ಲಿ ‘ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್’ ಕಲಿತನುಆ ಸ್ಕಾಲರ್‌ಶಿಪ್ ಸಂದರ್ಶನ ನಡೆದದ್ದು ಮುಂಬೈಯ ‘ಹೋಷ್ಟ್ ಹೌಸ್’ ಎಂಬ ಒಂದು ಐಷಾರಾಮಿ ಕಟ್ಟಡದ ೧೦ನೇ ಅಂತಸ್ತಿನಲ್ಲಿಗೋವಿಂದ ರಾಥೋಡ್ ತನ್ನ ಶಾಲಾ ಫೀಸು ಹೊಂದಿಸಲು ಹಿಂದೆ ಇದೇ ಕಟ್ಟಡದ 7ನೇ ಮತ್ತು 8ನೇ ಅಂತಸ್ತುಗಳಲ್ಲಿ ಬಾತ್ ರೂಮ್‌ಗಳನ್ನು ಸ್ವಚ್ಛಗೊಳಿಸಿತ್ತಿದ್ದನು!

 

ಅಶೋಕ್ ರಾಥೋಡರ ‘ನೋ ಸ್ಕೂಲ್ ನೋ ಫುಟ್ ಬಾಲ್’ ಮೂಲಕ ಬದುಕು ಕಟ್ಟಿಕೊಂಡ ಗೋವಿಂದ ರಾಥೋಡ್ ಇಂದು ತನ್ನಂತಹ ನೂರಾರು ಮಕ್ಕಳಿಗೆ ರೋಲ್ ಮಾಡಲ್ ಆಗಿದ್ದಾನೆಗೋವಿಂದ ರಾಥೋಡ್ ಮಾತ್ರವಲ್ಲದೆ ಅಶೋಕ್ ರಾಥೋಡ್‌ರ ಬಳಿ ಫುಟ್‌ಬಾಲ್ ಆಡುತ್ತ ಶಾಲೆ ಸೇರಿದ ಹಲವು ಮಕ್ಕಳು ಇಂದು ಕಾರ್ಪೊರೇಟ್ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆಒಬ್ಬ ಹುಡುಗ ಮುಂಬೈಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ‘ನರ್ಸಿ ಮುಂಜೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್’ ನಲ್ಲಿ ಎಮ್‌ಬಿಎ ಮಾಡುತ್ತಿದ್ದಾನೆಕೆಲವು ಹುಡುಗರು ಮಹಾರಾಷ್ಟ್ರ ಫುಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆಅಶೋಕ್ ರಾಥೋಡ್‌ರ ‘ಆಸ್ಕರ್’ ಸಂಸ್ಥೆ ಮುಂಬೈಯಲ್ಲಿ ಮಾತ್ರವಲ್ಲದೆ ದಮಾನ್ರಾಜಾಸ್ತಾನ ಮತ್ತು ಕರ್ನಾಟಕದಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ೪೨೦೦ಕ್ಕೂ ಹೆಚ್ಚು ಮಕ್ಕಳ ಬದುಕಿನ ಆಟವನ್ನು ಗೋಲಿನೆಡೆಗೆ ಮುನ್ನಡೆಸುತ್ತಿದೆ.

andolanait

Recent Posts

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

3 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

3 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

3 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

3 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

3 hours ago

ಹಿಂದಿನ ಉಸ್ತುವಾರಿಗಿದ್ದ ಖಾತೆಗಳು ಪುಟ್ಟರಂಗಶೆಟ್ಟರಿಗೆ!

ರಾಜೇಶ್ ಬೆಂಡರವಾಡಿ ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ  ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ…

3 hours ago