ಸಂಪಾದಕೀಯ

ಆದಿವಾಸಿ ಸುರೇಶ್‌ ಅನುಭವಿಸಿದ ನೋವಿಗೆ ಪರಿಹಾರ ಏನು?

ನೂರು ಮಂದಿ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆ ಆಗಬಾರದು ಎಂಬುದು ದೇಶದ ಸಂವಿಧಾನದ ಆಶಯ. ಪೊಲೀಸ್ ವ್ಯವಸ್ಥೆ ಸಂವಿಧಾನದ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವಂತಹ ತಾರತಮ್ಯ ಮಾಡಬಾರದು. ಆದರೆ, ಇಂದಿನ ವ್ಯವಸ್ಥೆ ಅದೆಷ್ಟು ಕ್ರೂರವಾಗಿದೆ ಎಂಬುದಕ್ಕೆ ಕೊಡಗು ಜಿಲ್ಲೆ ಯ ಕುಶಾಲನಗರದ ಹೊಸ ಬಡಾವಣೆಯ ನಿವಾಸಿ, ಆದಿವಾಸಿ ಸಮುದಾಯದ ಸುರೇಶ್ ಬದುಕಿನಲ್ಲಿ ನಡೆದಿರುವ ದುರ್ಘಟನೆ ಕನ್ನಡಿಯಾಗಿದೆ.

ಪೊಲೀಸರ ನಿರ್ಬಂಧದಿಂದ ಕೊಲೆ ಆರೋಪ ಹೊತ್ತು ಸುಖಾಸುಮ್ಮನೆ ಎರಡು ವರ್ಷಗಳು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಸಂಕಟ ಅನುಭವಿಸಿದ್ದಾರೆ. ನಂತರ ಜಾಮೀನು ಪಡೆದು ಹೊರಬಂದರೂ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವುದು ತಪ್ಪಿಲ್ಲ. ಈ ಪ್ರಕರಣದಲ್ಲಿ ಪ್ರಮುಖವಾಗಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತದೆ. ನಾಪತ್ತೆ ಪ್ರಕರಣದ ದೂರುಗಳಿಗೆ ಪೊಲೀಸರು ಹೇಗೆಲ್ಲ ತಿರುವುಗಳನ್ನು ನೀಡಬಲ್ಲರು ಎಂಬ ಆಲೋಚನೆಯೇ ಅತಂಕಕಾರಿಯಾಗಿದೆ. ಪೊಲೀಸರೆಂದರೆ ನಾಗರಿಕರೊಳಗೆ ಒಂದು ವಿಧದ ಅಳುಕು ಇದೆ. ಅದನ್ನು ನಿವಾರಿಸಿ ಜನಸ್ನೇಹಿಯಾಗಬೇಕಾದ ಪೊಲೀಸರು, ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುವುದು ಒಬ್ಬ ಒಳ್ಳೆಯ ವ್ಯಕ್ತಿ ಅಥವಾ ಒಂದು ಸಮಾಜದ ಗೌರವಕ್ಕೆ ಕಳಂಕ ತರುವ ಸಾಧ್ಯತೆ ಇರುತ್ತದೆ. ಕೊಲೆಯಾಗಿದರು ಎನ್ನಲಾಗಿದ್ದ ಸುರೇಶ್ ಅವರ ಪತ್ನಿ ಜೀವಂತವಾಗಿ ಕಾಣಿಸಿಕೊಂಡ ನಂತರ ಕೂಡ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿದರೆ ಎಂಬ ಅನುಮಾನವನ್ನು ಸುರೇಶ್ ಪರ ವಕೀಲ ಪಾಂಡು ಪೂಜಾರಿ ಅವರ ಮಾತುಗಳು ಹುಟ್ಟುಹಾಕುತ್ತವೆ. ಅನೇಕ ವರ್ಷಗಳಿಂದಲೂ ಆದಿವಾಸಿಸಮುದಾಯಸಮಾಜದ ಮುಖ್ಯವಾಹಿನಿಗೆ ಬರಲಾಗದೆತೊಳಲಾಡುತ್ತಿದೆ.

ಬಡತನ, ಅನಕ್ಷರತೆ ಸಮಸ್ಯೆಗಳಿಂದ ಸುರೇಶ್‌ ಪ್ರಕರಣದಲ್ಲಿ ನರಳುತ್ತಿರುವ ಸಮುದಾಯವನ್ನು ಮುಖ್ಯವಾಹಿನಿ ಯಲ್ಲಿರುವ ಪ್ರತಿಂ ಬದುಕಿರುವ ಅವರ ರೊಂದು ಸಮುದಾಯವೂ ಕಾರುಣ್ಯ, ಕಕ್ಕುಲತೆಯಿಂದ ಕಾಣಬೇಕು. ಆದರೆ, ಪತ್ನಿಯನ್ನು ದಾಖಲೆಗಳಲ್ಲಿ ಕೆಲ ಪೊಲೀಸರು, ಅಧಿಕಾರಿಗಳ ಕೊಲೆ ಮಾಡಿಸಿ, ಅದನ್ನು ಹೊಣೆಗೇಡಿತನದಿಂದ ಇಂತಹಅನಾಹುತಗಳು ಸಂಭವಿಸಿದಾಗ ಆ ಅಮಾಯಕ ಪತಿಯ ಸಮುದಾಯಗಳು ತತ್ತರಿಸಿ ಕೊರಳಿಗೇ ಕಟ್ಟಿದ್ದಾರೆ. ಪತ್ನಿ ಹೋಗುವುದು ನಿಶ್ಚಿತ. ಆದರೆ, ಇಡೀ ಪೊಲೀಸ್ ವ್ಯವಸ್ಥೆಯನ್ನು ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ಜೀವಂತವಾಗಿ ಮರಳಿದ್ದರಿಂದ ಸುರೇಶ್ ಅವರಿಗೆ ಈಗಲಾದರೂ ಸುಳಿವೇ ಇರದ ಹಲವು ಅಪರಾಧ ಪ್ರಕರಣಗಳನ್ನು ಅನೂಹ್ಯ ರೀತಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ ನಿದರ್ಶನಗಳು ಸಾಕಷ್ಟಿವೆ. ಹಲವರು ತಮ್ಮ ಕರ್ತವ್ಯದ ವೇಳೆ ಪ್ರಾಣವನ್ನೇ ಪಣಕ್ಕಿಟ್ಟು ಹುತಾತ್ಮರಾಗಿರುವುದನ್ನು ಮರೆಯು ಸಾಮಾಜಿಕವಂತಿಲ್ಲ.

ಸುರೇಶ್ ಅವರ ಪ್ರಕರಣದಲ್ಲಿ ಹೋರಾಟಗಳಲ್ಲಿ ತೊಡಗಿ ಬದುಕಿರುವ ಅವರ ಪತ್ನಿಯನ್ನು
ಪತ್ನಿಯನ್ನು ಸಿಕೊಂಡಿದ್ದರಿಂದ ಬಹುಶಃ ದಾಖಲೆ ಗಳಲ್ಲಿ ಕೊಲೆ ಮಾಡಿಸಿ, ಅದನ್ನು
ಅಮಾಯಕ ಪತಿಯ ಕೊರಳಿಗೆ ಸುರೇಶ್‌ ಪರ ನಿಲ್ಲುವುದು ಕಟ್ಟಿದ್ದಾರೆ. ಪತ್ನಿ ಜೀವಂತವಾಗಿ ಮರಳಿದ್ದರಿಂದ ಸುರೇಶ್ ಅವರಿಗೆ ಈಗಲಾದರೂ ನ್ಯಾಯ ಲಭಿಸಿದೆ.

ಪಾಂಡು ಪೂಜಾರಿ ಅವರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಬಹುಶಃ ಸುರೇಶ್ ಪರ ನಿಲ್ಲುವುದು ಸಾಧ್ಯವಾಗಿದೆ. ಸುರೇಶ್ ಅವರು ಜೈಲಿನಲ್ಲಿದ್ದಾಗ, ಆತನ ಗೋಳಿನ ಕಥೆ ಆಲಿಸಿದ ಕಾರಾಗೃಹದ ಪೊಲೀಸರೇ ವಕೀಲರೊಬ್ಬರನ್ನು ನೇಮಿಸಿದ್ದರು ಎನ್ನಲಾಗಿದೆ. ಅಲ್ಲಿನ ಪೊಲೀಸರಲ್ಲಿ ಮಾನವೀಯತೆ ಜೀವಂತ ವಾಗಿರುವುದು ತುಸು ಸಮಾಧಾನದ ವಿಷಯ.

ಈ ಪ್ರಕರಣದಲ್ಲಿ ದೊರೆತ ಶವ ಯಾರದ್ದು ಎಂಬುದು ಪ್ರಮುಖ ಪ್ರಶ್ನೆ. ಇದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಇರುವ ನಿಜವಾದ ಸವಾಲು. ಈಶವ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿ ದೊರೆತಿದೆ ಎಂಬ ಮಾಹಿತಿಗಳಲ್ಲಿ ಇರುವ ಸತ್ಯವನ್ನು ಹೊರಗೆಳೆಯಬೇಕಿದೆ. ಅಸ್ಥಿಪಂಜರದ ಎಫ್‌ಎಸ್‌ಎಲ್ ವರದಿ ಬರುವುದಕ್ಕೆ ಮುಂಚೆಯೇ ಅದನ್ನು ಸುರೇಶ್ ಪತ್ನಿಯ ಮೃತದೇಹ ಎಂದು ದಾಖಲಿಸಿದ್ದು ಏಕೆ? ವಾಸ್ತವವಾಗಿ ಆ ಶವ ಯಾರದ್ದು? ಅವರನ್ನು ಕೊಲೆ ಮಾಡಲಾಗಿದೆಯೇ? ಹಾಗಿದ್ದರೆ ಅದಕ್ಕೆ ಕಾರಣಕರ್ತರು ಯಾರು ಎಂಬುದು ತ್ವರಿತಗತಿಯಲ್ಲಿ ತನಿಖೆಯಾಗಬೇಕಿದೆ. ಅಲ್ಲದೆ, ಎರಡು ವರ್ಷಗಳು ತನ್ನದಲ್ಲದ ತಪ್ಪಿಗಾಗಿ ಜೈಲುವಾಸ ಅನುಭವಿಸಿದ ಸುರೇಶ್‌ ನೋವಿಗೆ ಪರಿಹಾರ ಏನು? ಉತ್ತರ ನೀಡುವವರು ಯಾರು? ಒಟ್ಟಾರೆ ಈ ಪ್ರಕರಣ ಸ್ವಾತಂತ್ರ್ಯ ಎಂಬುದು ‘ಪೊಲೀಸರ ಬೂಟಿಗೆ ಬಂತು, ಮಾಲೀಕರ ಚಾಟಿಗೆ ಬಂತು’ ಎಂಬ ಕವಿ ಸಿದ್ದಲಿಂಗಯ್ಯ ಕವಿತೆ ಸಾಲುಗಳು ಮತ್ತೆ ಅಪ್ಪಳಿಸುವಂತೆ ಮಾಡಿದೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

4 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

4 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

4 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

4 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

4 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

4 hours ago