ಸಂಪಾದಕೀಯ

ಪಡುವಾರಹಳ್ಳಿಯ ತರಕಾರಿ ರಾಮು

ಪಡುವಾರಹಳ್ಳಿಯಲ್ಲಿ ತಮ್ಮ 18ನೇ ವಯಸ್ಸಿನಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ಇವರ ಹೆಸರು ಬಿ. ರಾಮು ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಅಂಗಡಿಯ ಕದ ತೆರೆದರೆ, ಮುಚ್ಚುವುದು ರಾತ್ರಿ ಹತ್ತರ ಹೊತ್ತಿಗೆ ಹಬ್ಬ-ಹರಕೆಯ ದಿನಗಳಲ್ಲಿ ಒಮ್ಮೊಮ್ಮೆ ಬೆಳಿಗ್ಗೆ ಆರೂವರೆಗೆ ಅಂಗಡಿ ತೆರೆಯುತ್ತಾರೆ. 18ನೆಯ ವಯಸ್ಸಿನಲ್ಲಿ ತರಕಾರಿ ಅಂಗಡಿಯನ್ನು ತೆರೆದ ರಾಮು
ಅವರಿಗೆ ಈಗ ವಯಸ್ಸು 67. ಆಕಾಶವಾಣಿಯನ್ನು ಕೇಳುತ್ತಾ ತಮ್ಮ ಕಾಯಕದೊಂದಿಗೆ ದಿನಕಳೆಯುತ್ತಾರೆ. ಹಳೆಯ ಹಾಡುಗಳ ಪ್ರಸಾರ ಆದಾಗಲಂತೂ, ಬಂದ ಗ್ರಾಹಕರೊಡನೆ ಹಾಡು ಗುನುಗುವಿಕೆಯಲ್ಲಿ ಇವರ ವ್ಯವಹಾರ ಸಾಗುವುದು.

ಮೊದಲೆಲ್ಲಾ ಪಡುವಾರಹಳ್ಳಿಯಲ್ಲಿ ಇದ್ದದ್ದು ಇವರದ್ದೊಂದೇ ಅಂಗಡಿ, ಹಾಗಾಗಿ ಮಾಡಿದ ವ್ಯಾಪಾರ ಕೈಗೆಟುಕಿ, ಲಾಭ ನೀಡುತ್ತಿತ್ತು. ಈಗ ಎಲ್ಲೆಡೆ ತರಕಾರಿ ತಳ್ಳುಗಾಡಿ ಬಂದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆಯೇ ಹೊರತು, ಬದುಕು ನಡೆಸುವುದಕ್ಕೇನೂ ಕೊರತೆಯಾಗಿಲ್ಲ ಎನ್ನುತ್ತಾ ಸಂತೃಪ್ತಿಯ ನಗು ಬೀರುತ್ತಾರೆ. ಅಂಗಡಿಯಲ್ಲೇ ತರಕಾರಿ ರೀದಿಸಬೇಕೆಂಬ ಜನರಿದ್ದಾರೆ. ತಂದೆಯಿಂದ ಕಲಿತ ಪಾಠವನ್ನು ಇವತ್ತಿಗೂ ಜೀವನಸೂತ್ರದಂತೆ ಪಾಲಿಸುತ್ತಿದ್ದಾರೆ. ಸುಮ್ಮನೆ ಕೂರುವುದೂ ಒಂದು ಕೆಲಸ. ಆದರೆ ಅದರಲ್ಲಿ ನೆಮ್ಮದಿ ಇಲ್ಲ. ಮಾಡುವ ಕೆಲಸದಲ್ಲಿ ನೆಮ್ಮದಿ ಮತ್ತು ಖುಷಿ ಸಿಗಬೇಕು ಎಂಬುದು ಇವರ ಅಭಿಪ್ರಾಯ.

 

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

7 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

9 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

10 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

10 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

11 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

12 hours ago