ಹುಣಸೂರಿನಿಂದ ಮೈಸೂರಿಗೆ ಸಂಜೆ ವೇಳೆ ಸಾಕಷ್ಟು ಕೆಎಸ್ಆರ್ಟಿಸಿ ಬಸ್ ಗಳಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಮೈಸೂರಿನಿಂದ ಹುಣಸೂರಿನಲ್ಲಿರುವ ಸರ್ಕಾರಿ ಕಚೇರಿಗಳಿಗೆ ಪ್ರತಿನಿತ್ಯ ನೂರಾರು ಜನ ನೌಕರರರು ಪ್ರಯಾಣಿಸುತ್ತಿದ್ದು, ಸಂಜೆ ವೇಳೆ ಅಗತ್ಯವಿರುವಷ್ಟು ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
ಮಡಿಕೇರಿ ಮಾರ್ಗದ ಬಸ್, ವಿರಾಜಪೇಟೆ ಮಾರ್ಗದ ಬಸ್ಗಳಲ್ಲಿ ಕೆಲವು ಹುಣಸೂರು ಡಿಪೋನಿಂದ ಹುಣಸೂರು-ಮೈಸೂರು ಎಂಬ ಫಲಕದೊಂದಿಗೆ ಬರುತ್ತವೆ. ಈ ಬಸ್ಗಳು ಮೈಸೂರಿಗೆ ಹೋಗುವ ಪ್ಲಾಟ್ಫಾರ್ಮ್ಗೆ ಬಂದು ನಿಲ್ಲುವ ವೇಳೆಗೆ ಬಸ್ ಕಾಯುತ್ತಿದ್ದ ಹಲವಾರು ನೌಕರರು ಹಾಗೂ ಇತರೆ ಪ್ರಯಾಣಿಕರು ಬಸ್ ಬಂದ ಕೂಡಲೇ ಓಡಿ ಬಂದು ಹತ್ತಲು ಹರ ಸಾಹಸ ಮಾಡುತ್ತಾರೆ. ಸಾರಿಗೆ ನಿಗಮದ ಅಧಿಕಾರಿಗಳು ಹುಣಸೂರಿನಿಂದ ಮೈಸೂರಿಗೆ ಸಂಜೆ ವೇಳೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ಬಸ್ ನಿಲ್ದಾಣಕ್ಕೆ ಬಂದಾಗ ನೂಕು ನುಗ್ಗಲು ಉಂಟಾಗದಂತೆ ಸರತಿ ಸಾಲು ಮಾಡಿಸುವುದು ಅಗತ್ಯ. -ಬೆಳತೂರು ವೆಂಕಟೇಶ, ಕಂದಾಯ ನಗರ, ಮೈಸೂರು.
ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…
ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…
ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…
ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…
ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…