ಓದುಗರ ಪತ್ರ
ಹೆತ್ತವರ ಕನಸುಗಳು ಅನಂತ, ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಸೆ ಪಡುತ್ತಾರೆ. ಕೊನೆಗೆ ಏನೂ ಮಾಡದಿದ್ದರೂ ಪರವಾಗಿಲ್ಲ ಮಕ್ಕಳು ನಮ್ಮ ಕಣ್ಣ ಮುಂದಿದ್ದರೆ ಸಾಕಪ್ಪಾ ಎಂದುಕೊಳ್ಳುತ್ತಾರೆ. ಆದರೆ ಇಂದಿನ ಯುವ ಪೀಳಿಗೆ ಕ್ರೀಡಾಭಿಮಾನದ ಹೆಸರಿನಲ್ಲಿ ಅತಿರೇಕದ ವರ್ತನೆ ತೋರಿ ದುರಂತವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ವಿಪರ್ಯಾಸ.
ಏನಾಗಿದೆ ನಮ್ಮ ಸಮಾಜಕ್ಕೆ, ಯುವ ಜನತೆಗೆ? ಯಾಕೀ ಉನ್ಮಾದ? ಭಾವೋತ್ಕರ್ಷ? ರಾಜಕಾರಾಣಿಗಳ, ಸಿನಿಮಾ ನಟರ, ಕ್ರಿಕೆಟ್ ಆಟಗಾರರ ಹಿಂಬಾಲಕರಾಗಿ ಸಮಯ ವ್ಯರ್ಥ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು, ಸಮಯವನ್ನು ವ್ಯರ್ಥ ಮಾಡಿಕೊಂಡು ಅವರ ಬದುಕನ್ನು ಉದ್ಧಾರ ಮಾಡುತ್ತಿದ್ದೀರಲ್ಲಾ ಏನನ್ನಬೇಕು ನಿಮಗೆ? ನಿಮ್ಮ ಹೆತ್ತವರ ಶಾಶ್ವತ ನೋವಿಗೆ ಪರಿಹಾರವೇನು? ದೇವರು ಕೂಡ ನಿಮ್ಮನ್ನು ಉಳಿಸುವುದಿಲ್ಲ. ಏನೆಂದು ಅವರ ಅಭಿಮಾನಿಗಳಾಗಿದ್ದೀರಿ ಅವರೇನು ರಾಷ್ಟ್ರನಾಯಕರೆ? ನೆಲ ಜಲ ಭಾಷೆಗಾಗಿ ಜೀವತೆತ್ತವರೆ? ದೇಶ ನಾಡು ನುಡಿ ಇತ್ಯಾದಿ ವಿಚಾರಗಳು ಬಂದಾಗ ಮೈಗೆಲ್ಲಾ ಎಣ್ಣೆ ಸವರಿಕೊಂಡು ನುಣಿಚಿಕೊಳ್ಳುವವರು ಕೊನೆ ಪಕ್ಷ ನಿಮ್ಮ ಕುಟುಂಬಕ್ಕೆ ಸಾಂತ್ವನ ಹೇಳುವ ಔದಾರ್ಯವನ್ನೂ ತೋರದ ಮೂರ್ಖರಿಗೆ ನೀವು ಅಭಿಮಾನಿಗಳು. ನಿಮ್ಮ ನೋವು, ಸಾವುಗಳೆಲ್ಲವೂ ನಿಮ್ಮ ಕುಟುಂಬದ ಶಾಶ್ವತ ದುಃಖಗಳೇ ಹೊರತು ಸಾವಿನ ದಲ್ಲಾಳಿಗಳಲ್ಲ ಎಂಬ ಎಚ್ಚರಿಕೆ ನಿಮ್ಮನ್ನು ಕಾಡದ ಹೊರತು ಈ ಘಟನೆಗಳಿಗೆ ಸಾವಿಲ್ಲ.
– ಬ್ಯಾ.ರಾ. ಪ್ರಸನ್ನಕುಮಾರ್, ಬ್ಯಾಡರಹಳ್ಳಿ, ಕೃಷ್ಣರಾಜನಗರ ತಾ.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…