ಬೆಂಗಳೂರು : ಹಣಕಾಸು ತಜ್ಞೆ ಅಲ್ಲದ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ೯ನೇ ಕಳಪೆ ಬಜೆಟ್ ಇದಾಗಿದೆ. ಪ್ರತಿ ಬಾರಿಯೂ ದೊಡ್ಡ ದೊಡ್ಡ ಅಂಕಿ ಅಂಶಗಳನ್ನು ಹೊತ್ತು ತರುವ ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಾರಿಯೂ ತಾವೇ ಮಂಡಿಸಿದ ಬಜೆಟ್ ಅನ್ನು ಸಮರ್ಪಕವಾಗಿ ಜಾರಿ ಮಾಡದೇ ಇನ್ನೊಂದು ಬಜೆಟ್ ಮಂಡಿಸುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ ಆಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಆಡಳಿತ ಮಾಡುವ ಸರ್ಕಾರದ ರೀತಿ ನೀತಿಗಳು, ಅಲ್ಲಿನ ಜನರ ಆಶೋತ್ತರಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎಂಬುದನ್ನು ಸರ್ಕಾರವು ಮಂಡಿಸುವAತಹ ಬಜೆಟ್ ಸೂಚ್ಯವಾಗಿ ಹೇಳುತ್ತದೆ. ಬಜೆಟ್ ಎಂದರೆ ಶ್ರೀಮಂತರ ಅನುಕೂಲಕ್ಕಾಗಿ ಇರುವ ವ್ಯವಸ್ಥೆ ಎಂದುಕೊAಡು ಬಜೆಟ್ ತಯಾರಿಸುವ ಕೇಂದ್ರ ಸರ್ಕಾರವು, ಕಾರ್ಪೊರೇಟ್ ಉದ್ಯಮಿಗಳಿಗೆ, ಎನ್ಆರ್ಐಗಳಿಗೆ ಮತ್ತು ಶ್ರೀಮಂತರಿಗೆ ಪೂರಕವಾಗಿ ಬಜೆಟ್ ರೂಪಿಸುತ್ತಿದೆಯೇ ವಿನಃ ಜನ ಸಾಮಾನ್ಯರ ಪರವಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಇರುವುದು ಇವರ ಜನ ವಿರೋಽ ನೀತಿಗೆ ಹಿಡಿದ ಕನ್ನಡಿ ಎಂದಿದ್ದಾರೆ.
ದೇಶದ ಜನಸಂಖ್ಯೆಯಲ್ಲಿ ಶೇ.೨೪ ಇರುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಜೆಟ್ನಲ್ಲಿ ಏನಾದರೂ ಅನುಕೂಲ ಮಾಡಿದ್ದಾರಾ ಎಂದು ಹುಡುಕಿದರೆ, ಅಲ್ಲಿ ಎಂದಿನAತೆ ದೊಡ್ಡ ಸೊನ್ನೆಯೊಂದು ನಮಗೆ ಕಾಣುತ್ತಿದೆ. ಇನ್ನು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಕಡೆಗಣಿಸಿದ್ದು ತಮ್ಮ ಕರ್ನಾಟಕ ವಿರೋಽ ನೀತಿಯನ್ನು ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆಂದು ನಿರೀಕ್ಷಿಸಿದ್ದ ಸುಮಾರು ೫,೦೦೦ ಕೋಟಿ ರೂ. ಅನುದಾನದ ಕನಿಷ್ಠ ಪ್ರಸ್ತಾಪವನ್ನೂ ಮಾಡದ ಕೇಂದ್ರ ಸರ್ಕಾರವು, ರೈತರಿಂದ ಬೆಂಬಲ ಬೆಲೆ ಅಡಿಯಲ್ಲಿ ಪಡೆದ ಉತ್ಪನ್ನಗಳಿಗೆ ನೀಡಬೇಕಿದ್ದ ೨,೪೬೧ ಕೋಟಿ ರೂ. ಬಗ್ಗೆ ಕನಿಷ್ಠ ಪ್ರಸ್ತಾಪ ಮಾಡದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಜನ ಬದುಕನ್ನು ಮರೆತು ಮತ್ತೆ ೧೫ ಲಕ್ಷ ಕೋಟಿಗೂ ಹೆಚ್ಚಿನ ಸಾಲ ಮಾಡುತ್ತಿರುವ ಕೇಂದ್ರ ಸರ್ಕಾರ, ಆ ಹಣವನ್ನು ಯಾರಿಗೆ ನೀಡುತ್ತಿದೆ ಎಂಬುದೇ ನಿಗೂಢ ಪ್ರಶ್ನೆಯಾಗಿದೆ. ಎಲ್ಲ ಇಲಾಖೆಗಳನ್ನೂ ಪರಿಗಣಿಸದೆ. ಮನಸ್ಸಿಗೆ ಬಂದAತೆ ರಾಜಕೀಯ ಪ್ರೇರಿತವಾಗಿ ಹಣಕಾಸಿನ ಹಂಚಿಕೆ ಮಾಡಲಾಗಿದ್ದು ಇದರಿಂದ ದೇಶದ ವಿವಿಧ ಕ್ಷೇತ್ರಗಳಿಗೆ ಅನ್ಯಾಯ ಎಸಗಿಂತೆ ಆಗಿದೆ ಎಂದಿದ್ದಾರೆ.
ಬೆಂಗಳೂರು : ಮುಂಗಾರು ಮಳೆ ಕೊರತೆ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಾರದ ಹಿನ್ನೆಲೆಯಲ್ಲಿ,…
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರು ಯುವ ಶಕ್ತಿ ರಾಷ್ಟ್ರ ಶಕ್ತಿ ಎಂಬ ಶೀರ್ಷಿಕೆಯಡಿ ಭಾರತ್…
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ…
ಬೆಂಗಳೂರು : ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ…
ಬೆಂಗಳೂರು : ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ…
ಬೆಂಗಳೂರು: ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿ…