ಓದುಗರ ಪತ್ರ

ಓದುಗರ ಪತ್ರ | ಕ್ಯಾಬ್, ಬೈಕ್ ಟ್ಯಾಕ್ಸಿಗಳಲ್ಲಿ ವಂಚನೆ ತಡೆಗಟ್ಟಿ

ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಾರಿಗೆ, ಆಟೋ ಟ್ಯಾಕ್ಸಿ ಸೌಲಭ್ಯಗಳಿವೆ. ಇತ್ತೀಚೆಗೆ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರಿ ಮೊದಲಾದ ಆಪ್ ಆಧಾರಿತ ಆಟೋ, ಟ್ಯಾಕ್ಸಿ, ಬೈಕ್ ಟ್ಯಾಕ್ಸಿ ಸೇವೆಗಳೂ ಲಭ್ಯವಿವೆ.

ಪ್ರಯಾಣಿಕರು ಟ್ಯಾಕ್ಸಿ ಆಯ್ಕೆ ಮಾಡುವ ಸಮಯಕ್ಕೆ ಅನುಗುಣವಾಗಿ ಹಾಗೂ ಕ್ರಮಿಸುವ ದೂರದ ಮೇಲೆ ಪ್ರಯಾಣದರ ನಿಗದಿಯಾಗುತ್ತದೆ. ಗ್ರಾಹಕರು ನಿಗದಿತ ದರವನ್ನು ಪಾವತಿಸಿ ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಟೋ, ಟ್ಯಾಕ್ಸಿ, ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡುವಾಗಲೇ ಸದ್ಯಕ್ಕೆ ನಿಮಗೆ ಸೇವೆ ಲಭ್ಯವಿಲ್ಲ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ನೀವು ನಮೂದಿಸಿದರೆ ಬುಕ್ ಆಗುತ್ತದೆ ಎಂಬ ಮೆಸೇಜ್ ಬರುತ್ತದೆ.

ಇಷ್ಟರ ನಡುವೆ ಹೆಚ್ಚುವರಿ ದರ ನಮೂದಿಸಿದರೂ ಬುಕ್ ಮಾಡಲಾದ ಆಟೋ, ಕಾರು, ಬೈಕ್ ನವರು ನೀವು ಇನ್ನೂ ಹೆಚ್ಚುವರಿ ಹಣ ನೀಡಿದರೆ ಮಾತ್ರ ಬರುತ್ತೇವೆ ಇಲ್ಲದಿದ್ದರೆ ರೈಡ್ ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಫೋನ್ ಮೂಲಕ ತಿಳಿಸುತ್ತಾರೆ. ರೈಡ್ ಕ್ಯಾನ್ಸಲ್ ಮಾಡಿದರೆ ಮುಂದಿನ ಪ್ರಯಾಣದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ. ಎಲ್ಲಾ ಪ್ರಯಾಣಿಕರಲ್ಲಿಯೂ ಹೆಚ್ಚುವರಿಯಾಗಿ ನೀಡಲು ಹಣ ಇರುವುದಿಲ್ಲ. ಜನ ಸ್ನೇಹಿ ಸಾರಿಗೆ ಎಂಬ ಪರಿಕಲ್ಪನೆಗೆ ಆಟೋ, ಕಾರು ಹಾಗೂ ಬೈಕ್ ಟ್ಯಾಕ್ಸಿ ಚಾಲಕರ ಹೆಚ್ಚುವರಿ ಹಣದ ಬೇಡಿಕೆ ಮಾರಕವಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಕ್ಯಾಬ್ ಕಂಪೆನಿಗಳ ಮುಖ್ಯಸ್ಥರು ಚಾಲಕರ ಅತಿಯಾದ ಹಣದ ಲಾಲಸೆಗೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕರ ಹಿತ ಕಾಪಾಡಬೇಕಿದೆ.

-ಜಿ. ವಾರುಣಿ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

2 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

2 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

2 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

14 hours ago