ರಾಂಚಿ: ಸಾಮಾನ್ಯವಾಗಿ ಮದುವೆಯ ದಿಬ್ಬಣ ನೋಡಿದ್ದೇವೆ. ಅಲಂಕಾರ ಮಾಡಿದ ಕಾರಿನಲ್ಲಿ ಅಥವಾ ಕುದುರೆಯೇರಿ ಮದುವೆ ಮೆರವಣಿಗೆಯಲ್ಲಿ ವರ ಮಂಟಪಕ್ಕೆ ಬರುತ್ತಾನೆ. ಆದರೆ ಇಲ್ಲೊಬ ವರ ವಿಭಿನ್ನವಾಗಿ ಮಂಟಪಕ್ಕೆ ಬಂದಿರುವುದು ಸುದ್ದಿಯಾಗಿದೆ.
ಜಾರ್ಖಂಡ್ ನ ರಾಂಚಿ ಮೂಲದ ರಾಜಾ ಕೃಷ್ಣ ಮಹತೋ ವಿವಾಹ ಇತ್ತೀಚೆಗೆ ನೆರವೇರಿದೆ. ವರ ರಾಜಾ ಕೃಷ್ಣ ಮಹತೋ ಮಂಟಪಕ್ಕೆ ಬಂದಿದ್ದಾರೆ. ಕಾರು ಅಥವಾ ಕುದುರೆಯಲ್ಲಿ ಬಂದಿಲ್ಲ. ಬದಲಾಗಿ ಜೆಸಿಬಿಯಲ್ಲಿ ಬಂದಿದ್ದಾರೆ.!
ವೃತ್ತಿಯಲ್ಲಿ ವಾಹನಗಳಿಗೆ ಹೂವು ಡೆಕೋರೇಟರ್ ಮಾಡುವ ಕಾಯಕವನ್ನು ಮಾಡುವ ರಾಜಾ ಕೃಷ್ಣ ಮಹತೋ ಅವರು ತನ್ನ ಮದುವೆಯ ಮೆರವಣಿಗೆ ಸಾಗಲು ಜೆಸಿಬಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾರಿನ ಹೊರ ಭಾಗದಲ್ಲಿ ಹೇಗೆ ಹೂವುಗಳನ್ನು ಅಲಂಕಾರ ಮಾಡುತ್ತಾರೋ ಹಾಗೆಯೇ ಜೆಸಿಬಿಗೆ ಹೂವಿನ ಅಲಂಕಾರವನ್ನು ಮಾಡಿ ವರನ ಉಡುಗೆ ತೊಟ್ಟು ಮಂಟಪಕ್ಕೆ ಬಂದಿದ್ದಾರೆ.
ಮದುವೆಯ ಬಳಿಕ ಪತ್ನಿಯನ್ನು ಅಲಂಕೃತ ಜೆಸಿಬಿಯಲ್ಲಿ ಕೂರಿಸಿಕೊಂಡು ಬಂದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…