ಕೊಯಂಬತ್ತೂರು: ಭಾರತ ತಂಡದ ಸ್ಪಿನ್ ಬೌಲರ್ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದ್ದಾರೆ. ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿರುವ ಅಶ್ವಿನ್ ಇದೀಗ ವಿಚಿತ್ರ ಕಾರಣದಿಂದ ಸುದ್ದಿಯಾಗಿದ್ದಾರೆ.
ತಿರುಚ್ಚಿ ವಿರುದ್ಧದ ಪಂದ್ಯದಲ್ಲಿ ಒಂದೇ ಎಸೆತದಲ್ಲಿ ಎರಡು ಬಾರಿ ರಿವೀವ್ ಪಡೆಯಲಾಗಿದೆ. ಒಮ್ಮೆ ರಿವೀವ್ ಪಡೆದು ಮೂರನೇ ಅಂಪೈರ್ ನಿರ್ಧಾರ ಪ್ರಕಟಿಸಿದ ಬಳಿಕ ಆ ತೀರ್ಪಿನ ವಿರುದ್ಧವೇ ಮತ್ತೊಮ್ಮೆ ರಿವೀವ್ ಮಾಡಲಾಗಿದೆ.
ತಿರುಚ್ಚಿ ಆಟಗಾರ ರಾಜಕುಮಾರ್ ಅವರಿಗೆ ಅಶ್ವಿನ್ ಎಸೆದ ಚೆಂಡು ವಿಕೆಟ್ ಕೀಪರ್ ಗ್ಲೌಸ್ ಸೇರಿತು. ಮೈದಾನದ ಅಂಪೈರ್ ಔಟ್ ನೀಡಿದರು. ಆದರೆ ಬ್ಯಾಟರ್ ರಾಜಕುಮಾರ್ ಡಿಆರ್ ಎಸ್ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ಮಾಡುವಾಗ ಬ್ಯಾಟ್ ಚೆಂಡಿಗೆ ಬಡಿಯದೆ, ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಅವರು ಔಟ್ ತೀರ್ಮಾನವನ್ನು ಬದಲಿಸಿ ನಾಟೌಟ್ ಎಂದರು.
ಮೂರನೇ ಅಂಪೈರ್ ನಾಟೌಟ್ ಎಂದ ಕೂಡಲೇ ಆಕ್ರೋಶಗೊಂಡ ಅಶ್ವಿನ್ ಮತ್ತೆ ಮತ್ತೆ ಡಿಆರ್ ಎಸ್ ಕೇಳಿದರು. ಟಿವಿ ಅಂಪೈರ್ ಮತ್ತೆ ಪರಿಶೀಲನೆ ನಡೆಸಿ ನಾಟೌಟ್ ತೀರ್ಪು ನೀಡಿದರು.
ಪಂದ್ಯದ ಬಳಿಕ ಇದರ ಬಗ್ಗೆ ಮಾತನಾಡಿದ ಅಶ್ವಿನ್, “ಟೂರ್ನಮೆಂಟ್ ನಲ್ಲಿ ಡಿಆರ್ ಎಸ್ ಹೊಸದು. ಚೆಂಡು ಬ್ಯಾಟ್ ನಿಂದ ಹಾದುಹೋಗುವ ಮೊದಲು ಸ್ಪೈಕ್ ಇತ್ತು. ನನಗೆ ಸಂತೋಷವಾಗಲಿಲ್ಲ, ಅವರು ಬೇರೆ ಕೋನದಲ್ಲಿ ನೋಡುತ್ತಾರೆ ಎಂದು ನಾನು ಭಾವಿಸಿದೆ” ಎಂದು ಹೇಳಿದರು.
ಇದರ ಹೊರತಾಗಿಯೂ ಅಶ್ವಿನ್ ನಾಯಕತ್ವದ ದಿಂಡಿಗಲ್ ತಂಡವು ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಿರುಚ್ಚಿ 19.1 ಓವರ್ ನಲ್ಲಿ 120 ರನ್ ಗೆ ಆಲೌಟಾದರೆ, ದಿಂಡಿಗಲ್ ತಂಡವು 14.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.
ಬೆಂಗಳೂರು: ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ…
ಮುಂಬೈ: ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು…
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್ನ…
ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…
ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…