ಎಡಿಟೋರಿಯಲ್

ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ

– ಪ್ರಸನ್ನ

ಪಾರ್ಕಿನ್ಸನ್ ಖಾಯಿಲೆಯಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದ ಜಿ.ರಾಜಶೇಖರ ನಿನ್ನೆ ನಿಧನರಾದರು. ಕೆಲವೊಮ್ಮೆ ಸಾವೇ ಸಮಾಧಾನಕರವಂತೆ. ಕಡೆಗೂ ಅವರನ್ನು ಕೊಂಡೊಯ್ದು ಸಂಕಟದಿಂದ ಬಿಡುಗಡೆಗೊಳಿಸಿ, ಸಾವು ಸಮಾಧಾನಕರವಾಗಿಯೇ ನಡೆದುಕೊಂಡಿತು. ಅವರ ಸಂಕಟವನ್ನು ನೋಡುವುದು, ಕಡೆ ಕಡೆಗೆ, ನನ್ನಿಂದಾಗುತ್ತಿರಲಿಲ್ಲ. ಏನೋ ಹೇಳಬೇಕೆಂದು ಅವರು ಪ್ರಯಾಸ ಪಡುವುದು, ಅದನ್ನರಿಯಲೆಂದು ನಾವು ಪ್ರಯಾಸಪಡುವುದನ್ನು, ಇಬ್ಬರನ್ನೂ ಕೊಲ್ಲುತ್ತಿತ್ತು.

ಇತ್ತೀಚೆಗೆ ಉಡುಪಿಗೆ ಹೋದಾಗ ಸಹ ಅವರನ್ನು ಕಂಡು ಬರುವ ದೈರ್ಯವಾಗುತ್ತಿರಲಿಲ್ಲ ನನಗೆ.

ಪಾದರಸದಂತಹ ಮೆದುಳು, ಅದಕ್ಕೆ ತದ್ವಿರುದ್ಧವಾಗಿದ್ದ ಮೃದು ಹೃದಯ ರಾಜಶೇಖರದ್ದು. ಜೊತೆಗೆ, ನಾಚಿಕೆ ಸ್ವಭಾವ, ಹಿಂಜರಿಕೆ. ಆದರೆ, ಒಳ್ಳೆಯ ಪುಸ್ತಕಗಳು ಹಾಗೂ ಒಳಿತಿನ ವಿಚಾರಗಳು ಕನ್ನಡಕ್ಕೆ ತಲುಪುವ ಬಹಳ ಮುಂಚೆಯೇ, ಉಡುಪಿಯ ಮೂಲೆಯಲ್ಲಿದ್ದ, ಸಣ್ಣ ಮನೆಯೊಂದರಲ್ಲಿದ್ದ, ಕಾರಕೂನ ರಾಜಶೇಖರನ್ನು ತಲುಪಿಬಿಡುತ್ತಿತ್ತು.

ಅದು ಹೇಗೋ. ಹಲವು ಆಯಾಮಗಳ ವ್ಯಕ್ತಿತ್ವ ಅವರದ್ದು.

ಮಾರ್ಕ್ಸ್‌ವಾದಿ ರಾಜಶೇಖರ, ಟ್ರೇಡ್ ಯೂನಿಯನ್ ರಾಜಶೇಖರ, ಸಾಹಿತ್ಯ ವಿಮರ್ಶಕ ರಾಜಶೇಖರ, ಅಲ್ಪಸಂಖ್ಯಾತರ ಸಂಗಾತಿ ರಾಜಶೇಖರ… ಇತ್ಯಾದಿ. ಯಾವುದೂ ಇಂದಿನ ಕಾಲಮಾನದಲ್ಲಿ ಗೆಲ್ಲುವುದು ಸಾಧ್ಯವಿರಲಿಲ್ಲ. ಆದರೆ ಸೋಲುವ ಜಾಯಮಾನವಲ್ಲ ರಾಜಶೇಖರದ್ದು. ಸೋಲು ಗೆಲುವುಗಳಾಚೆ ನಡೆದಿದ್ದರು ಅವರು.

ಆತ ಬರೆದದ್ದು ಒಂದೇ ಒಂದು ಪುಸ್ತಕ ‘ಕಾಗೋಡು ಸತ್ಯಾಗ್ರಹ’. ವಿಟ್ಗೆನ್ ಸ್ಟೈನ್ ಎಂಬ ತತ್ತ್ವಜ್ಞಾನಿ ಹೀಗೆಯೇ ಇದ್ದನಂತೆ. ೩೮ ಪುಟಗಳ, ಟ್ರ್ಯಾಕ್ಟಟಸ್ ಎಂಬ ಹೆಸರಿನ ಒಂದು ಸಣ್ಣ ಪುಸ್ತಕ ಬರೆದ ಆತ. ಆದರೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅದನ್ನೇ ಥೀಸಿಸ್ ಎಂದು ಸ್ವೀಕರಿಸಿ ಡಾಕ್ಟರೇಟ್ ಪದವಿ ನೀಡಿತ್ತು. ವಿಟ್ಗೆನ್ ಸ್ಟೈನ್ ಜರ್ಮನಿಯ ಯೂಹೂದ್ಯನಾಗಿದ್ದ. ರಾಜಶೇಖರ ಮಾರ್ಕ್ಸ್ವಾದಿ ಬ್ರಾಹ್ಮಣನಾಗಿದ್ದ. ರಾಜಶೇಖರರೊಟ್ಟಿಗೆ ಒಡನಾಟವಿದ್ದವರಿಗೆ ಅಥವಾ ಬಿಡಿ ಲೇಖನ ಓದಿದವರಿಗಷ್ಟೆ ಗೊತ್ತಿತ್ತು. ಆತನ ಮೌಲ್ಯ.

ಈಗನ್ನಿಸುತ್ತಿದೆ, ರಾಜಶೇಖರ ಏನನ್ನೋ ಹೇಳಬೇಕೆಂದು ಪ್ರಯಾಸಪಡುತ್ತಿದ್ದದ್ದು, ಕೇಳುಗರು ಅದೇನೆಂದು ಅರ್ಥವಾಗದೆ ಪ್ರಯಾಸಪಡುತ್ತಿದ್ದದ್ದು, ಆತನಿಗೆ ಪಾರ್ಕಿನ್ಸನ್ ಖಾಯಿಲೆ ಬಂದ ನಂತರದ ಸಮಸ್ಯೆ ಮಾತ್ರವೇ ಅಲ್ಲ. ಮೊದಲು ಹೀಗೆಯೇ ಇತ್ತು. ಆತನ ಮೆದುಳು ಸಮಾಜವಾದದ ತತ್ವ ಮಿಡಿಯುತ್ತಿದ್ದರೆ, ಹೃದಯ ಕನ್ನಡದ ಹೃದಯವಂತಿಕೆ ಮಿಡಿಯುತ್ತಿತ್ತು. ಸಂವಹನ ಸಾಧಿಸಬೇಕೆಂದರೆ ಕೇಳುಗರ ಹೃದಯವೂ ಮಿಡಿಯಬೇಕು ತಾನೆ.

ಆದರೆ, ಈಚಿನ ದಿನಗಳಲ್ಲಿ ಮಾತು ಮೆದುಳಿಂದ ಕೆಳಕ್ಕಿಳಿಯುವುದೇ ಇಲ್ಲ. ಕಿಡಿ ಕಿಡಿಯಾಗಿ, ಕಿರಿ ಕಿರಿಯಾಗಿ, ಮೇಲು ಮೇಲೆ ಹಾರುತ್ತಿರುತ್ತದೆ. ಮೆದುಳುಗಳ ನಡುವೆ ಎಂದಾದರೂ ಸಂಬಂಧ ಸಾಧ್ಯವೇ? ಎಲ್ಲ ಹಿಂದೂಗಳು ಮೆದುಳು ನೆನಪಿಸಿದ್ದಷ್ಟನ್ನೇ ನುಡಿಯುತ್ತಿದ್ದಾರೆ, ಎಲ್ಲ ಮುಸಲನ್ಮಾರು, ಎಲ್ಲ ಪಕ್ಷಗಳು, ಎಲ್ಲ ನಾಯಕರು, ಅಷ್ಟನ್ನೆ ನುಡಿಯುತ್ತಿದ್ದಾರೆ. ಅವಸರದಲ್ಲಿದ್ದಾರೆ, ಯುದ್ಧೋನ್ಮಾದದಲ್ಲಿದ್ದಾರೆ. ಇಡೀ ಮನುಕುಲಕ್ಕೇ ಪಾರ್ಕಿನ್ಸನ್ ಎಂಬ ಹೆಸರಿನ ಅಭಿವ್ಯಕ್ತಿ ಹೀನತೆಯ ಖಾಯಿಲೆ ಬಡಿದಿದೆ. ಆದರೆ, ಈ ಖಾಯಿಲೆ ಬಲಿ ತೆಗೆದುಕೊಂಡ ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ.

andolana

Recent Posts

ಬಡವರ ಮತಗಳನ್ನು ತೆಗೆಯಲು ಎಸ್‌ಐಆರ್‌ ಸಂಚು: ಡಿಸಿಎಂ ಡಿ.ಕೆ.ಶಿವಕುಮಾರ್‌ ಕಿಡಿ

ಬೆಂಗಳೂರು: ಬಡವರ ಮತಗಳನ್ನು ತೆಗೆಯಲು ಎಸ್‌ಐಆರ್‌ ಮೂಲಕ ಸಂಚು ಮಾಡಲಾಗಿದೆ. ನಾವುಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನಮ್ಮ ಪಕ್ಷದ…

7 hours ago

ವಾಟಾಳ್‌ ನಾಗರಾಜ್‌ಗೆ ಬಿಗ್‌ ರಿಲೀಫ್:‌ 10 ಕೇಸ್‌ಗಳು ವಾಪಸ್‌

ಬೆಂಗಳೂರು: ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ಗೆ ರಾಜ್ಯ ಸರ್ಕಾರ ರಿಲೀಫ್‌ ನೀಡಿದೆ. ವಾಟಾಳ್‌ ನಾಗರಾಜ್‌ ಮೇಲಿನ ಕೇಸ್‌ಗಳನ್ನು ಸರ್ಕಾರ ಹಿಂಪಡೆಯಲು…

7 hours ago

52 ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಪರಮೇಶ್ವರ್

ಬೆಂಗಳೂರು: ಕಾನೂನಾತ್ಮಕವಾಗಿ 52 ಪ್ರಕರಣಗಳನ್ನು ಹಿಂಪಡೆಯಬಹುದು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್‌…

8 hours ago

ಆತ್ಮಹತ್ಯೆಯ ಹಾಟ್‌ಸ್ಪಾಟ್ ಆಗುತ್ತಿದೆ ಪ್ರಸಿದ್ದ ವೆಲ್ಲೆಸ್ಲಿ ಸೇತುವೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಆತ್ಮಹತ್ಯೆ ಹಾಟ್‌ಸ್ಪಾಟ್‌ ಆಗುತ್ತಿದ್ದು, ಸೇತುವೆ ಮೇಲಿಂದ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ…

9 hours ago

ಕೋವಿಡ್‌ಗಿಂತಲೂ ಡೆಡ್ಲಿ ಎಬೋಲಾ ವೈರಸ್:‌ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

ನವದೆಹಲಿ: ಆಫ್ರಿಕಾದ ಹಲವು ಭಾಗಗಳಲ್ಲಿ ಕೋವಿಡ್‌ಗಿಂತಲೂ ಡೆಡ್ಲಿಯಾದ ಎಬೋಲಾ ವೈರಸ್‌ ಹಾವಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ.…

9 hours ago

24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ

ನವದೆಹಲಿ: ಕರ್ನಾಟಕ ನಾಲ್ಕು ಸೇರಿದಂತೆ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಈರಣ್ಣ ಕಡಾಡಿ,…

11 hours ago