ಎಡಿಟೋರಿಯಲ್

ಬೆಂಗಳೂರು ಡೈರಿ : ಮುಂದಿನ ವಿಧಾನಸಭಾ ಚುನಾವಣೆಯ ನಂತರ ‘ಜನನಾಯಕರ’ ಪರಂಪರೆ ಇಲ್ಲವಾಗುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ

ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು! 

೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು ಬಳಸಿಕೊಂಡು ಜನ ನಾಯಕರಾದರು. ಅಷ್ಟೇ ಅಲ್ಲ, ವಿವಿಧ ಜಾತಿಗಳ ನಾಯಕರನ್ನು ಗುರುತಿಸಿ ಮುಂಚೂಣಿಗೆ ತರತೊಡಗಿದರು. ಮುಂದೆ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಹೆಚ್.ಡಿ.ದೇವೇಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯ ಅವರೆಲ್ಲ ಜನನಾಯಕರೇ.

ಆದರೆ ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ಕರ್ನಾಟಕದ ರಾಜಕೀಯ ಜನನಾಯಕರ ಪರಂಪತೆಯಿಂದ ಕೆಲವೇ ಕಾಲದಲ್ಲಿ ವಿಮುಖವಾಗುವ ಆತಂಕ ಕಾಣುತ್ತಿದೆ.

೧೯೫೨ ರ ಮೊದಲ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದ್ದ ಕಾಲದಲ್ಲಿ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಪದೇ ಪದೇ ಬರತೊಡಗಿದ್ದರು. ಸ್ವಾತಂತ್ರ್ಯಾನಂತರ ಇಲ್ಲಿ ಕೆ.ಸಿ.ರೆಡ್ಡಿ ಅವರ ನೇತೃತ್ವದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಿತ್ತು. ಮತ್ತು ಅವರು ಕೂಡಾ ತಮ್ಮ ಜತೆಗಿದ್ದ ಕೆಲವೇ ಮಂತ್ರಿಗಳ ಜತೆಗೂಡಿ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದರೇನೋ ನಿಜ. ಹೀಗೆ ಒಳ್ಳೆಯ ಆಡಳಿತ ನೀಡಿ ಗಮನ ಸೆಳೆದಿದ್ದ ಕೆ.ಸಿ.ರೆಡ್ಡಿ ಅವರನ್ನು ೧೯೫೨ ರ ಲೋಕಸಭೆ ಚುನಾವಣೆಗಳ ನಂತರ ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವುದು ನೆಹರೂ ಅವರ ಬಯಕೆಯಾಗಿತ್ತು.

ಯಾಕೆಂದರೆ ರಾಜ್ಯಗಳಲ್ಲಿ ಒಳ್ಳೆಯ ಹೆಸರು ಪಡೆದ, ಆಡಳಿತದಲ್ಲಿ ದಕ್ಷತೆ ಉಳ್ಳವರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಅತ್ಯಂತ ಪರಿಣಾಮಕಾರಿ ಸರ್ಕಾರ ನೀಡಬೇಕು ಎಂಬುದು ನೆಹರೂ ಅವರ ಇಚ್ವೆಯಾಗಿತ್ತು. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರನ್ನು ರಾಷ್ಟ್ರ ರಾಜಕೀಯಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಕ್ಕೆ ಇದೇ ಮುಖ್ಯ ಕಾರಣ. ಆದರೆ ಕೆ.ಸಿ.ರೆಡ್ಡಿ ಅವರಿಗೆ ದಿಲ್ಲಿಗೆ ಹೋಗುವುದಕ್ಕಿಂತ ಇಲ್ಲೇ ಇರುವ, ಅಸ್ತಿತ್ವಕ್ಕೆ ಬರುವ ಜನಾದೇಶದ ಸರ್ಕಾರದ ಮುಖ್ಯಮಂತ್ರಿಯಾಗುವ ಆಸೆ ಇತ್ತು.
ವಸ್ತುಸ್ಥಿತಿ ಎಂದರೆ ಆಡಳಿತ ಕೇಂದ್ರ ವಿಧಾನಸೌಧವನ್ನು ಕಟ್ಟಿಸುವ ಯೋಚನೆ ಅವರ ಕಾಲದಲ್ಲೇ ಮೊಳಕೆಯೊಡೆದು ಒಂದು ಹಂತಕ್ಕೆ ಬಂದಿತ್ತು.ಆದರೆ ಜವಾಹರಲಾಲ್ ನೆಹರೂ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ನಿರ್ಧರಿಸಿದ್ದರು. ಅವರಿಗೆ ಕೇಂದ್ರ ಸಂಪುಟಕ್ಕೆ ದಕ್ಷ ನಾಯಕರು ಬೇಕಿತ್ತು. ಅದೇ ಕಾಲಕ್ಕೆ ರಾಜ್ಯದಲ್ಲಿ ಜನನಾಯಕರೊಬ್ಬರನ್ನು ಸಿಎಂ ಹುದ್ದೆಗೆ ತರುವುದು ಬೇಕಿತ್ತು.
ಇದೇ ಉದ್ದೇಶಕ್ಕಾಗಿ ಅವರು ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನ ಅವರು ಪದೇ ಪದೇ ರಾಜ್ಯಕ್ಕೆ ಬರತೊಡಗಿದರು. ಹೀಗೆ ಬಂದವರು ಜನನಾಯಕನ ಶೋಧ ನಡೆಸಿದಾಗ ಅವರಿಗೆ ಪಕ್ಕಾ ಆದ ಹೆಸರು- ಕೆಂಗಲ್ ಹನುಮಂತಯ್ಯ.ತಮ್ಮ ವಿಚಾರಧಾರೆಗಳಿಂದ, ನಡವಳಿಕೆಯಿಂದ ಅವರು ಜನಾನುರಾಗಿ ನಾಯಕರಾಗಿ ಬೆಳೆದು ನಿಂತಿದ್ದಾರೆ ಎಂಬುದು ಖಚಿತವಾದ್ದರಿಂದ ನೆಹರೂ ಅದೇ ಹೆಸರನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ನಿಕ್ಕಿಗೊಳಿಸಿದರು. ಮುಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು.

೧೯೫೪ ರ ಹೊತ್ತಿಗೆ ಕೆಂಗಲ್ ಹನುಮಂತಯ್ಯ ಅವರನ್ನು ನೆಹರೂ ಪದಚ್ಯುತಗೊಳಿಸಿದರಾದರೂ ಮತ್ತೋರ್ವ ಜನನಾಯಕನ ಹೆಸರು ಪಕ್ಕಾ ಆಗುವವರೆಗೆ ಇರಲಿ ಅಂತ ಕಡಿದಾಳ್ ಮಂಜಪ್ಪ ಅವರನ್ನು ಕೆಲ ತಿಂಗಳ ಮಟ್ಟಿಗೆ ಪಟ್ಟಕ್ಕೇರಿಸಿದ್ದರು. ಕಡಿದಾಳ್ ಮಂಜಪ್ಪ ಪ್ರಾಮಾಣಿಕ ನಾಯಕರಾಗಿದ್ದರೂ, ದಕ್ಷ ನಾಯಕರಾಗಿದ್ದರೂ ಜನನಾಯಕರಾಗಿರಲಿಲ್ಲ.

ಪರಿಣಾಮ? ಕೆಂಗಲ್ ಹನುಮಂತಯ್ಯ ಅವರ ನಂತರ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ ಕೆಲವೇ ಕಾಲದಲ್ಲಿ ಕೆಳಗಿಳಿದರು. ಅವರ ಜಾಗಕ್ಕೆ ಅದಾಗಲೇ ಜನನಾಯಕರಾಗಿದ್ದ ನಿಜಲಿಂಗಪ್ಪ ಬಂದು ಕುಳಿತರು. ಮುಂದೆ ರಾಜ್ಯದ ನಾಯಕರು ಮತ್ತು ಕೇಂದ್ರದ ನಾಯಕರ ಮಧ್ಯೆ ಪ್ರತಿಷ್ಠೆಯ ಸಂಘರ್ಷಗಳು ನಡೆಯುತ್ತಿದ್ದವು. ಮತ್ತದರ ಪರಿಣಾಮವಾಗಿ ಜೀ ಹುಜೂರ್ ಲೀಡರುಗಳು ಮುಖ್ಯಮಂತ್ರಿಗಳಾಗುತ್ತಿದ್ದರಾದರೂ ಕೇಂದ್ರದ ನಾಯಕರು ಬಹುತೇಕ ಸಂದರ್ಭಗಳಲ್ಲಿ ಜನನಾಯಕರನ್ನೇ ನಾಯಕತ್ವಕ್ಕಾಗಿ ಹುಡುಕುತ್ತಿದ್ದರು.೧೯೬೯ ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಹೋಳಾಯಿತಲ್ಲ? ಇದರ ಪರಿಣಾಮವಾಗಿ ಇಲ್ಲಿದ್ದ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರ ಉರುಳಿಬಿತ್ತು. ಮುಂದೆ ೧೯೭೨ ರ ಚುನಾವಣೆಗೂ ಮುನ್ನ ತಮ್ಮ ಬಣಕ್ಕೆ ನಾಯಕನನ್ನು ಹುಡುಕಲು ಹೊರಟ ಇಂದಿರಾಗಾಂಧಿ ಅವರಿಗೆ ಕಂಡಿದ್ದು ಕೆ.ಮಲ್ಲಪ್ಪ. ಆದರೆ ಇಂದಿರಾಗಾಂಧಿ ಅವರು ತಮ್ಮನ್ನು ಭವಿಷ್ಯದ ನಾಯಕತ್ವಕ್ಕಾಗಿ ಆಹ್ವಾನಿಸಿದಾಗ ಮಲ್ಲಪ್ಪ ಅದನ್ನು ನಯವಾಗಿ ತಿರಸ್ಕರಿಸಿದರು.
ನನ್ನ ಬದಲು ಜನಪ್ರಿಯರಾಗಿ ಬೆಳೆದು ನಿಂತಿರುವ ದೇವರಾಜ ಅರಸರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದು ಮಲ್ಲಪ್ಪನವರು ಹೇಳಿದಾಗ ಇಂದಿರಾಗಾಂಧಿ ಅದಕ್ಕೆ ಒಪ್ಪಿಗೆ ನೀಡಿದರು. ಮುಂದೇನಾಯಿತು ಎಂಬುದು ಇತಿಹಾಸ. ೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು ಬಳಸಿಕೊಂಡು ಜನ ನಾಯಕರಾದರು. ಅಷ್ಟೇ ಅಲ್ಲ, ವಿವಿಧ ಜಾತಿಗಳ ನಾಯಕರನ್ನು ಗುರುತಿಸಿ ಮುಂಚೂಣಿಗೆ ತರತೊಡಗಿದರು.
ಮುಂದೆ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಹೆಚ್.ಡಿ.ದೇವೇಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯ ಅವರೆಲ್ಲ ಜನನಾಯಕರೇ. ಆದರೆ ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ಕರ್ನಾಟಕದ ರಾಜಕೀಯ ಜನನಾಯಕರ ಪರಂಪತೆಯಿಂದ ಕೆಲವೇ ಕಾಲದಲ್ಲಿ ವಿಮುಖವಾಗುವ ಆತಂಕ ಕಾಣುತ್ತಿದೆ. ೨೦೨೩ ರ ವಿಧಾನಸಭಾ ಚುನಾವಣೆಯ ನಂತರ ಸಿದ್ಧರಾಮಯ್ಯ ಉಳಿದುಕೊಂಡರೆ ಜನನಾಯಕರ ಪರಂಪರೆ ಒಂದು ಅವಧಿಗಾದರೂ ಮುಮದುವರಿಯುತ್ತದೆ. ಇಲ್ಲವೇ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಜನನಾಯಕರ ತಳಿಯೇ ಇಲ್ಲವಾಗುತ್ತದೆ. ಆನಂತರ ಏನಿದ್ದರೂ ಸೀಮಿತ ಪ್ರಭಾವವುಳ್ಳ ಪಾಳೇಗಾರರ ಪರಂಪರೆ ಶುರುವಾಗುತ್ತದೆ.

ಅಂದ ಹಾಗೆ ಜನನಾಯಕರಿದ್ದಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಶಕ್ತಿ ಇರುತ್ತದೆ. ಪಾಳೇಗಾರರ ಸ್ವರೂಪದ ನಾಯಕರೇ ಮುಂಚೂಣಿಗೆ ಬಂದಾಗ ಸಾಮಾಜಿಕ ನ್ಯಾಯಕ್ಕಿಂತ ಬಡಿದಾಡಬಲ್ಲವನು ಬದುಕುತ್ತಾನೆ ಎಂಬ ವಾತಾವರಣ ಸೃಷ್ಟಿಯಾಗುತ್ತದೆ. ಕರ್ನಾಟಕದ ರಾಜಕಾರಣ ಬಹುಬೇಗ ಪಾಳೇಗಾರ ನಾಯಕರ ಪರಂಪರೆಯತ್ತ ವಾಲುತ್ತದೆ ಅನ್ನಲು ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.ಈ ಮಾತಿಗೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ ಎಂಬುದೇ ವಾಸ್ತವ!

 

andolanait

Recent Posts

ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಮನುವಾದಿ ಆಗಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…

8 mins ago

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…

51 mins ago

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್‌…

1 hour ago

ಶಾರುಖ್‌ ಖಾನ್‌ ಪುತ್ರನಿಂದ ದುರ್ವತನೆ ಪ್ರಕರಣ: ಡಿಜಿ & ಡಿಜಿಪಿಗೆ ದೂರು ಸಲ್ಲಿಕೆ

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನ ಪಬ್‌ನಲ್ಲಿ ಮಿಡಲ್‌ ಫಿಂಗಲ್‌ ತೋರಿಸಿ ದುರ್ವತನೆ ಮೆರೆದಿದ್ದು,…

2 hours ago

1000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರು

ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…

2 hours ago

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

3 hours ago