ಎಡಿಟೋರಿಯಲ್

ಓದುಗರ ಪತ್ರ : 28 ಬುಧವಾರ 2022

ಯುವ ಸಾಧಕರೇ ಉದ್ಘಾಟಿಸಲಿ

ಯುವ ದಸರಾಗೆ ಆಹ್ವಾನಿಸಿದ್ದ ನಟ ಬರಲಿಲ್ಲವೆಂದು ಪರ್ಯಾಯ ವ್ಯಕ್ತಿಯನ್ನು ಹುಡುಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಯುವ ದಸರೆಗೆ ಕೇವಲ ಸಿನಿಮಾ ನಟರನ್ನು ಆಹ್ವಾನಿಸಿ ಯುವಕರಿಗೆ ಸಿನಿಮಾ ನಟರನ್ನು ಮಾದರಿಯೆಂದು ತೋರಿಸುವ ಕ್ರಮ ನಿಜಕ್ಕೂ ಖಂಡನೀಯ. ಯುವ ದಸರಾ ಉದ್ಘಾಟನೆಗೆ ಸಾಧಕ ಯುವ ರೈತರನ್ನು, ಯುವ ವಿಜ್ಞಾನಿಯನ್ನು ಅಥವಾ ಯುವ ಸೈನಿಕರನ್ನು ಕರೆಯುವ ಪರಿಪಾಟ ಬೆಳೆಯಲಿ. ಅದರ ಮೂಲಕ ಯುವಕರಿಗೆ ತಮ್ಮ ಜೀವನದ ಮಾದರಿ ಯಾರಾಗಬೇಕು? ಎಂದು ತಿಳಿಯುತ್ತದೆ. ಹಾಗೆಯೇ ಸಾಧಿಸಿದ ಯುವಕರನ್ನು ಸಮಾಜ ಗುರುತಿಸುವುದರಿಂದ ಅಂತಹವರು ಹೆಚ್ಚಿನ ಕೆಲಸದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಮನರಂಜನಾ ಕಾರ್ಯಕ್ರಮಗಳಿಗೆ ಸಿನಿಮಾ ನಟರನ್ನು ಕರೆಸಿ ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಿಕೊಳ್ಳಿ. ಆದರೆ ಯುವ ದಸರಾ ಉದ್ಘಾಟನೆ ಗೆ ಸಾಧಕರೇ ಬರಲಿ.
-ಎಸ್.ರವಿ,   ಮೈಸೂರು.


ಜನಪ್ರತಿನಿಧಿಗಳಿಗೆ ಅವಮಾನ?
ನಾಡ ಹಬ್ಬ ‘ಮೈಸೂರು ದಸರಾ’ ಉದ್ಘಾಟನಾ ಸಮಾರಂಭವು ‘ಮೈಸೂರಿನ ಜನಪ್ರಧಿನಿಧಿಗಳನ್ನು  ಅವಮಾನ ಮಾಡಿದಂತಿತ್ತು. ಮೈಸೂರಿನ ಪ್ರಥಮ ಪ್ರಜೆ ಮೇಯರ್ ಆಗಲಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಿಗಾಗಲಿ, ವೇದಿಕೆ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸದೇ ಮೈಸೂರಿನ ಜನರಿಗೇ ಜಿಲ್ಲಾಡಳಿತ ಅವಮಾನ ಮಾಡಿದೆ. ವೇದಿಕೆಯ ಮೇಲೆ ಮೈಸೂರಿನ ಪ್ರಥಮ ಪ್ರಜೆ ಇರಬೇಕೆಂಬ ಕನಿಷ್ಠ ಜ್ಞಾನವೂ ಜಿಲ್ಲಾಡಳಿತಕ್ಕೆ ಇರಲಿಲ್ಲವೇ, ಅಧ್ಯಕ್ಷತೆ ವಹಿಸಬೇಕಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರನ್ನು ಕೈಬಿಟ್ಟಿದ್ದೇಕೆ? ಇನ್ನು ರಾಷ್ಟ್ರಪತಿಯವರಿಗೆ, ಮೈಸೂರಿನ ಮಲ್ಲಿಗೆ ಹಾರ ಹಾಕಿ, ಮೈಸೂರು ಸಿಲ್ಕ್ ಶಾಲು ಹೊದಿಸಿ ಗೌರವಿಸಬೇಕಾಗಿತ್ತು, ಸಚಿವೆ ಶೋಭಾ ಕರಂದ್ಲಾಜೆ ಪ್ಲ್ಯಾಸ್ಟಿಕ್‌ನಿಂದ ತಯಾರಿಸಿದ ಹಾರ ಹಾಕಿದರೆ, ರಾಜ್ಯಪಾಲರು ಶಾಲನ್ನು ರಾಷ್ಟ್ರಪತಿಯವರ ಕೈಗೆ ನೀಡಿ, ಮೈಸೂರಿನ ಜನತೆಯನ್ನು ಒಂದು ರೀತಿಯಲ್ಲಿ ಅವಮಾನಿಸಿದರು. ಮುಂದಿನ ವರ್ಷಗಳಲ್ಲಿ ಇಂತಹ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ ಗಮನ ಹರಿಸಲಿ.
-ಬೂಕನಕೆರೆ ವಿಜೇಂದ್ರ, ಮೈಸೂರು.

ನಿಗದಿತ ಸ್ಥಳದಲ್ಲಿ ನಿಲ್ಲದ ಬಸ್

ಮೈಸೂರು ನಗರ ಬಸ್ ನಿಲ್ದಾಣದಿಂದ ಬೋಗಾದಿಗೆ ಸಂಚರಿಸುವ ರೂಟ್ ನಂ.೫೧ಬಿ ಕಡೇ ಸ್ಟಾಪ್‌ನಿಂದ  ಮುಂದಿನ ಸ್ಟಾಪ್ ಇರುವ ಜಾಗದಲ್ಲಿ ನಿಲುಗಡೆಗೊಳಿಸುತ್ತಿಲ್ಲ. ಯಾರಾದರೂ ಒಬ್ಬ ಪ್ರಯಾಣಿಕ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರೆ ಬಸ್ ನಿಲ್ಲಸದೇ ವೇಗವಾಗಿ ಹೋಗುತ್ತಾರೆ. ಒಂದು ವೇಳೆ ನಿಲ್ಲಿಸಿದರೆ ಆ ಪ್ರಯಾಣಿಕರನ್ನು ಚಾಲಕ ದುರುಗುಟ್ಟಿ ನೋಡುವುದು ಸರ್ವೇಸಾಮಾನ್ಯವಾಗಿದೆ. ಅಲ್ಲಿ ಬಸ್ ನಿಲ್ದಾಣ ಇರುವುದರಿಂದ ಒಬ್ಬರೋ ಅಥವಾ ಇಬ್ಬರೋ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ದಯವಿಟ್ಟು ಇನ್ನು ಮುಂದಾದರೂ ಬಸ್ಸಿನ ಚಾಲಕರು ನಿಲುಗಡೆಯ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಲಿ.
-ರಾಘವೇಂದ್ರ, ಬೋಗಾದಿ ೨ನೇ ಹಂತ, ಮೈಸೂರು.

ಧೂಳು?

ರಷ್ಯಾ-ಉಕ್ರೇನ್ ಯುದ್ಧದಲ್ಲಿ
ಉಕ್ರೇನ್ ಮೇಲುಗೈಯಂತೆ!
ಆಗಬಾರದೇಕೆ?
ಬಡವಂ ಬಲ್ಲಿದನಾಗನೇ
ಹರಹರಾ…?’
ಸಂಸ್ಕೃತದ ಒಂದು ಸುಭಾಷಿತ:
ಕೇವಲ ಧೂಳು ಎಂದು ಕಾಲಿನಿಂದೊದೆದರೆ,
ಅದು ಹಾರಿ, ತಲೆಯ ಮೇಲೆ
ಕುಳಿತುಕೊಳ್ಳುತ್ತದೆ!
– ಸಿಪಿಕೆ, ಮೈಸೂರು.
andolana

Recent Posts

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

25 mins ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

6 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

6 hours ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

6 hours ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

6 hours ago

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ  ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…

6 hours ago