ಎಡಿಟೋರಿಯಲ್

ಓದುಗರ ಪತ್ರ : 28 ಬುಧವಾರ 2022

ಯುವ ಸಾಧಕರೇ ಉದ್ಘಾಟಿಸಲಿ

ಯುವ ದಸರಾಗೆ ಆಹ್ವಾನಿಸಿದ್ದ ನಟ ಬರಲಿಲ್ಲವೆಂದು ಪರ್ಯಾಯ ವ್ಯಕ್ತಿಯನ್ನು ಹುಡುಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಯುವ ದಸರೆಗೆ ಕೇವಲ ಸಿನಿಮಾ ನಟರನ್ನು ಆಹ್ವಾನಿಸಿ ಯುವಕರಿಗೆ ಸಿನಿಮಾ ನಟರನ್ನು ಮಾದರಿಯೆಂದು ತೋರಿಸುವ ಕ್ರಮ ನಿಜಕ್ಕೂ ಖಂಡನೀಯ. ಯುವ ದಸರಾ ಉದ್ಘಾಟನೆಗೆ ಸಾಧಕ ಯುವ ರೈತರನ್ನು, ಯುವ ವಿಜ್ಞಾನಿಯನ್ನು ಅಥವಾ ಯುವ ಸೈನಿಕರನ್ನು ಕರೆಯುವ ಪರಿಪಾಟ ಬೆಳೆಯಲಿ. ಅದರ ಮೂಲಕ ಯುವಕರಿಗೆ ತಮ್ಮ ಜೀವನದ ಮಾದರಿ ಯಾರಾಗಬೇಕು? ಎಂದು ತಿಳಿಯುತ್ತದೆ. ಹಾಗೆಯೇ ಸಾಧಿಸಿದ ಯುವಕರನ್ನು ಸಮಾಜ ಗುರುತಿಸುವುದರಿಂದ ಅಂತಹವರು ಹೆಚ್ಚಿನ ಕೆಲಸದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಮನರಂಜನಾ ಕಾರ್ಯಕ್ರಮಗಳಿಗೆ ಸಿನಿಮಾ ನಟರನ್ನು ಕರೆಸಿ ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಿಕೊಳ್ಳಿ. ಆದರೆ ಯುವ ದಸರಾ ಉದ್ಘಾಟನೆ ಗೆ ಸಾಧಕರೇ ಬರಲಿ.
-ಎಸ್.ರವಿ,   ಮೈಸೂರು.


ಜನಪ್ರತಿನಿಧಿಗಳಿಗೆ ಅವಮಾನ?
ನಾಡ ಹಬ್ಬ ‘ಮೈಸೂರು ದಸರಾ’ ಉದ್ಘಾಟನಾ ಸಮಾರಂಭವು ‘ಮೈಸೂರಿನ ಜನಪ್ರಧಿನಿಧಿಗಳನ್ನು  ಅವಮಾನ ಮಾಡಿದಂತಿತ್ತು. ಮೈಸೂರಿನ ಪ್ರಥಮ ಪ್ರಜೆ ಮೇಯರ್ ಆಗಲಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಿಗಾಗಲಿ, ವೇದಿಕೆ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸದೇ ಮೈಸೂರಿನ ಜನರಿಗೇ ಜಿಲ್ಲಾಡಳಿತ ಅವಮಾನ ಮಾಡಿದೆ. ವೇದಿಕೆಯ ಮೇಲೆ ಮೈಸೂರಿನ ಪ್ರಥಮ ಪ್ರಜೆ ಇರಬೇಕೆಂಬ ಕನಿಷ್ಠ ಜ್ಞಾನವೂ ಜಿಲ್ಲಾಡಳಿತಕ್ಕೆ ಇರಲಿಲ್ಲವೇ, ಅಧ್ಯಕ್ಷತೆ ವಹಿಸಬೇಕಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರನ್ನು ಕೈಬಿಟ್ಟಿದ್ದೇಕೆ? ಇನ್ನು ರಾಷ್ಟ್ರಪತಿಯವರಿಗೆ, ಮೈಸೂರಿನ ಮಲ್ಲಿಗೆ ಹಾರ ಹಾಕಿ, ಮೈಸೂರು ಸಿಲ್ಕ್ ಶಾಲು ಹೊದಿಸಿ ಗೌರವಿಸಬೇಕಾಗಿತ್ತು, ಸಚಿವೆ ಶೋಭಾ ಕರಂದ್ಲಾಜೆ ಪ್ಲ್ಯಾಸ್ಟಿಕ್‌ನಿಂದ ತಯಾರಿಸಿದ ಹಾರ ಹಾಕಿದರೆ, ರಾಜ್ಯಪಾಲರು ಶಾಲನ್ನು ರಾಷ್ಟ್ರಪತಿಯವರ ಕೈಗೆ ನೀಡಿ, ಮೈಸೂರಿನ ಜನತೆಯನ್ನು ಒಂದು ರೀತಿಯಲ್ಲಿ ಅವಮಾನಿಸಿದರು. ಮುಂದಿನ ವರ್ಷಗಳಲ್ಲಿ ಇಂತಹ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ ಗಮನ ಹರಿಸಲಿ.
-ಬೂಕನಕೆರೆ ವಿಜೇಂದ್ರ, ಮೈಸೂರು.

ನಿಗದಿತ ಸ್ಥಳದಲ್ಲಿ ನಿಲ್ಲದ ಬಸ್

ಮೈಸೂರು ನಗರ ಬಸ್ ನಿಲ್ದಾಣದಿಂದ ಬೋಗಾದಿಗೆ ಸಂಚರಿಸುವ ರೂಟ್ ನಂ.೫೧ಬಿ ಕಡೇ ಸ್ಟಾಪ್‌ನಿಂದ  ಮುಂದಿನ ಸ್ಟಾಪ್ ಇರುವ ಜಾಗದಲ್ಲಿ ನಿಲುಗಡೆಗೊಳಿಸುತ್ತಿಲ್ಲ. ಯಾರಾದರೂ ಒಬ್ಬ ಪ್ರಯಾಣಿಕ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರೆ ಬಸ್ ನಿಲ್ಲಸದೇ ವೇಗವಾಗಿ ಹೋಗುತ್ತಾರೆ. ಒಂದು ವೇಳೆ ನಿಲ್ಲಿಸಿದರೆ ಆ ಪ್ರಯಾಣಿಕರನ್ನು ಚಾಲಕ ದುರುಗುಟ್ಟಿ ನೋಡುವುದು ಸರ್ವೇಸಾಮಾನ್ಯವಾಗಿದೆ. ಅಲ್ಲಿ ಬಸ್ ನಿಲ್ದಾಣ ಇರುವುದರಿಂದ ಒಬ್ಬರೋ ಅಥವಾ ಇಬ್ಬರೋ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ದಯವಿಟ್ಟು ಇನ್ನು ಮುಂದಾದರೂ ಬಸ್ಸಿನ ಚಾಲಕರು ನಿಲುಗಡೆಯ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಲಿ.
-ರಾಘವೇಂದ್ರ, ಬೋಗಾದಿ ೨ನೇ ಹಂತ, ಮೈಸೂರು.

ಧೂಳು?

ರಷ್ಯಾ-ಉಕ್ರೇನ್ ಯುದ್ಧದಲ್ಲಿ
ಉಕ್ರೇನ್ ಮೇಲುಗೈಯಂತೆ!
ಆಗಬಾರದೇಕೆ?
ಬಡವಂ ಬಲ್ಲಿದನಾಗನೇ
ಹರಹರಾ…?’
ಸಂಸ್ಕೃತದ ಒಂದು ಸುಭಾಷಿತ:
ಕೇವಲ ಧೂಳು ಎಂದು ಕಾಲಿನಿಂದೊದೆದರೆ,
ಅದು ಹಾರಿ, ತಲೆಯ ಮೇಲೆ
ಕುಳಿತುಕೊಳ್ಳುತ್ತದೆ!
– ಸಿಪಿಕೆ, ಮೈಸೂರು.
andolana

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

4 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

13 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

13 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

13 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

16 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

16 hours ago