ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 02 ಮಂಗಳವಾರ 2022

‘ಆಂದೋಲನ’ ದಿನಪತ್ರಿಕೆಗೆ ಧನ್ಯವಾದಗಳು!

ಎಚ್ ಡಿ ಕೋಟೆ ತಾಲ್ಲೂಕಿನಲಿ ಜರುಗಿದ ‘ಆಂದೋಲನ’ ದಿನಪತ್ರಿಕೆಯ ೫೦ ವರ್ಷಗಳ ಸಾರ್ಥಕ ಪಯಣದ ಮುನ್ನೋಟ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾಧಕರಿಬ್ಬರಿಗೆ ಸನ್ಮಾನಿಸಿರುವುದು ಸಂತಸವಾಗಿದೆ. ಪತ್ರಿಕೆಯು ಎರಡು ತಾಲೂಕುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಕಣ್ತೆರೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಓದುಗರ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ವಿಶೇಷ ಪುಟಗಳಲ್ಲಿ ವೈವಿಧ್ಯಮಯವಾಗಿ ತಾಲೂಕಿನ ಹಿರಿಮೆಯನ್ನು ಪ್ರಕಟಿಸಿದ್ದೀರಿ. ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಹಿಂದುಳಿದ ತಾಲ್ಲೂಕಿನ ಬಗ್ಗೆ ತೋರಿದ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದಗಳು.

-ಪರಶಿವಮೂರ್ತಿ ಎ್.ಪಿ, ನಂಜೀಪುರ, ಸರಗೂರು ತಾಲ್ಲೂಕು.


ಮೇ(ಲ್)ಲುಗೈ!!

ಸಿಇಟಿ ಫಲಿತಾಂಶ: ಬಾಲಕರು ಮೇಲುಗೈ

(ಆಂದೋಲನ, ಜು.೩೧)

ಪ್ರತಿ ಬಾರಿಯೂ ಪಿಯುಸಿ,

ಎಸ್ಸೆಸ್ಸೆಲ್ಸಿ ಪರೀಕ್ಷಾ

ಫಲಿತಾಂಶಗಳಲ್ಲಿ

ಬಾಲಕಿಯರೇ ಮೇಲುಗೈ!

ಸದ್ಯ , ಈ ಸಾರಿ

ಸಿಇಟಿಯಲ್ಲಾದರೂ

ತೋರಿಸಿ ಬಿಟ್ಟರಲ್ಲಾ

ನಮ್ಮಹುಡುಗರು
ನಾವೂ ಸೈ!!
-ಮ.ಗು.ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ಧ್ವಜ ನೀತಿ ನಿಯಮ ಪಾಲನೆ ಅಗತ್ಯ

‘ಹರ್ ಘರ್ ತಿರಂಗ’ ಭಾರತ ಸರ್ಕಾರದ ಮಹತ್ವದ ಯೋಜನೆಯೇ ಸರಿ. ಆದರೆ ಜನರಿಗೆ ರಾಷ್ಟ್ರೀಯ ದ್ವಜ ಬಳಸುವಿಕೆ ಕುರಿತಾಗಿ ಇರುವ ನಿಯಮಗಳನ್ನು ತಿಳಿಸುವುದು ಮತ್ತು ಅವುಗಳನ್ನು ಪಾಲಿಸುವಂತೆ ಸೂಚಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರ್ತವ್ಯ. ದೇಶದ ಗೌರವ, ಸ್ವಾಭಿಮಾನ, ಸರ್ವಭೌಮತೆಯನ್ನು, ಪ್ರದರ್ಶಿಸುವ ದೇಶದ ತ್ರಿವರ್ಣಧ್ವಜವನ್ನು ಹಾರಿಸಲು ಸ್ಪಷ್ಟ ನೀತಿ ನಿಯಮಗಳನ್ನು ರೂಪಿಸಲಾಗಿದೆ.Flag code of India 2000  ಮತ್ತು Prevention of insults to national honour act 1971 ಇದರ ಕುರಿತು ತಿಳಿಸುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ತಿಳುವಳಿಕೆ ಹೇಳಬೇಕು. ಈ ಮಹತ್ವಕಾಂಕ್ಷಿ ಯೋಜನೆಯಡಿ ಮೇಲಿನ ನೀತಿ ನಿಯಮಗಳನ್ನು ಪಾಲಿಸಿ ದೇಶ ಧ್ವಜದ ಗೌರವ ಉಳಿಸುವುದು ಅಗತ್ಯ.

-ಪ್ರಶಾಂತ. ಜಿ, ಮಹಾರಾಜ ಕಾಲೇಜು ಮೈಸೂರು.


ಕುಡಿಯುವ ನೀರಿಗೂ ಬರ!

ಮೈಸೂರಿನ ವಿಜಯನಗರ ೪ನೇ ಹಂತದಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ನಮ್ಮ ಮನೆ ಇರುವುದು ವಿಜಯನಗರ ೪ನೇ ಹಂತ, ೨ನೇ ಫೇಸ್. ಇಲ್ಲಿ ೨ ದಿನಕ್ಕೆ ಒಮ್ಮೆರಾತ್ರಿ ೩-೦೦ ಗಂಟೆಯಿಂದ ಬೆಳಿಗ್ಗೆ ೬.೦೦ ರವರೆಗೆ ನೀರು ಬಿಡುತ್ತಾರೆ. ಅಂದರೆ ೩ ಗಂಟೆ ಮಾತ್ರ ನೀರು ಸೋರುತ್ತದೆ. ಅರ್ಧ ಸಂಪೂ ತುಂಬುವುದಿಲ್ಲ. ಕೆಲವೊಮ್ಮೆ ೨ನೇ ದಿನವು ನೀರು ಬಿಡುವುದಿಲ್ಲ. ವಾಟರ್ಮೆನ್ ಕೇಳಿದರೆ ೨ ಬೋರ್ವೆಲ್ ಮಾತ್ರ ಇರುವುದು ನೀರು ಸಾಕಾಗುವುದಿಲ್ಲ ಎನ್ನುತ್ತಾರೆ. ನಮಗೂ ಟ್ಯಾಂಕರ್ ನೀರು ಹಾಕಿಸಿ ಸಾಕಾಗಿ ಹೋಗಿದೆ. ನಾನು ಏರಿಯಾ ಇಂಜಿನಿಯರ್ ಗಮನಕ್ಕೂ ತಂದೆ ಏನು ಪ್ರಯೋಜನವಾಗಿಲ್ಲ. ಮೂಲಭೂತ ಸೌಲಭ್ಯ ಕೊಡುವುದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಸಮರ್ಪಕವಾಗಿ ಪ್ರತಿದಿನ ನೀರು ಒದಗಿಸುವಂತೆ ಪ್ರಾಧಿಕಾರದ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

– ಬಿ.ಜಿ.ರಂಗೇಗೌಡ, ವಿಜಯನಗರ ಮೈಸೂರು. 

andolana

Recent Posts

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

5 hours ago

ಓದುಗರ ಪತ್ರ: ಬದಲಾಗುತ್ತಿದೆ ಚಾತುರ್ಮಾಸ ಪದದ ಅರ್ಥ

ಪ್ರತಿವರ್ಷ ಆಷಾಢ, ಶ್ರಾವಣ ಮಾಸದ ಸಮಯದಲ್ಲಿ ಎಲ್ಲ ಮಠಾಧೀಶರೂ ಚಾತುರ್ಮಾಸ ವ್ರತವನ್ನು ಆಚರಿಸುವುದು ವಾಡಿಕೆ. ಚಾತುರ್ಮಾಸ ಎಂದರೆ ನಾಲ್ಕು ತಿಂಗಳು.…

5 hours ago

ಓದುಗರ ಪತ್ರ: ದಸರಾ ಮಹೋತ್ಸವ ಸರಳವಾಗಿರಲಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಿನ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ…

5 hours ago

ಓದುಗರ ಪತ್ರ: ಗೃಹಲಕ್ಷ್ಮಿ: ಅರ್ಹರಿಗೆ ಅನ್ಯಾಯವಾಗದಿರಲಿ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಆರ್ಥಿಕತೆಗೆ ನವಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ…

6 hours ago

ಎಚ್೧ಎನ್೧: ಕೊಡಗು ಜಿಲ್ಲೆಯಲ್ಲಿ 4 ಪ್ರಕರಣ ದೃಢ

ನವೀನ್ ಡಿಸೋಜ ಶೀತ, ಕೆಮ್ಮು, ಜ್ವರ ಸಂಬಂಧ ೩,೭೬೨ ಪ್ರಕರಣ ದಾಖಲು; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಮನವಿ ಮಡಿಕೇರಿ:…

6 hours ago

ಮುಂಗಾರು ವೈಫಲ್ಯ: ಬಿತ್ತನೆ ಶೇ.15.95ಕ್ಕೆ ಕುಸಿತ

ಮಹಾದೇಶ್ ಎಂ.ಗೌಡ ಹನೂರು: ಕುಡಿಯುವ ನೀರು, ಮೇವಿಗೂ ತೀವ್ರ ಹಾಹಾಕಾರ ಹನೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು,…

6 hours ago