ಎಡಿಟೋರಿಯಲ್

ಆಂದೋಲನ ವಿ4 : ವಿತ್ತ ವಿಜ್ಞಾನ ವಿಶೇಷ ವಿಹಾರ

ಇಂಧನ ಬೆಲೆ ಇಳಿಕೆ ಇಲ್ಲ

ಕಳೆದ ವರ್ಷ ಜೂನ್ ತಿಂಗಳಲ್ಲಿ ೧೧೬ ಡಾಲರ್ ಗಳಷ್ಟಿದ್ದ ಕಚ್ಚಾ ತೈಲ ದರವು ಈಗ ಪ್ರತಿ ಬ್ಯಾರೆಲ್‌ಗೆ ೭೮ ರಿಂದ ೮೫ ಡಾಲರ್‌ಗೆ ಇಳಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಈಗ ಪ್ರತಿ ಲೀಟರ್ ಪೆಟ್ರೋಲ್ ನಿಂದ ೧೦ ರೂಪಾಯಿಗಳಷ್ಟು ಲಾಭ ಪಡೆಯುತ್ತಿವೆ. ಇಷ್ಟಾದರೂ ಇಂಧನ ಬೆಲೆ ಇಳಿಕೆಯಾಗಿಲ್ಲ. ಲಭ್ಯ ಮಾಹಿತಿ ಪ್ರಕಾರ ತೈಲ ಸಂಸ್ಥೆಗಳಿಗೆ ಹಿಂದಿನ ನಷ್ಟವನ್ನು ತುಂಬಿಕೊಳ್ಳಲು ಸರಕಾರ ಅವಕಾಶ ನೀಡಿದೆ. ಕಳೆದ ಏಪ್ರಿಲ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮೂರು ಸರಕಾರಿ ತೈಲ ಸಂಸ್ಥೆಗಳು ೨೧,೨೦೧ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಈ ಕಾರಣದಿಂದ ಸದ್ಯಕ್ಕೆ ಇಂಧನ ಬೆಲೆ ಇಳಿಕೆ ಸಾಧ್ಯತೆ ಇಲ್ಲ ಎನ್ನಲಾಗಿದೆ.


ಪ್ರೀಮಿಯಂ ಸ್ಮಾರ್ಟ್-ನ್ ಬಿಡುಗಡೆ

ಹೊಸ ಮಾದರಿ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್ನೋ’ ಕಂಪೆನಿಯು ಭಾರತದಲ್ಲಿ ತನ್ನ ಮೊತ್ತ ಮೊದಲ ಪ್ರೀಮಿಯಂ PHANTOM X2 ಸ್ಮಾರ್ಟ್‌ಪೋನ್ ಬಿಡು ಗಡೆಗೊಳಿಸಿ ೩೯,೯೯೯ ರೂ. ದರ ನಿಗದಿ ಮಾಡಿದೆ. ಜ.೨ರಿಂದ ಪ್ರಿ ಬುಕಿಂಗ್ ಆರಂಭವಾಗಿದ್ದು, ಜ.೯ರಿಂದ ಮಾರಾಟಕ್ಕೆ ಲಭ್ಯವಾಗ ಲಿದೆ ಎಂದು ಕಂಪೆನಿ ತಿಳಿಸಿದೆ. ೫ಜಿ ಫೋನ್ ಇದಾಗಿದ್ದು, ಡ್ಯುಯಲ್ ಸಿಮ್, 4nm Dimensity ೯೦೦೦ ಪ್ರೊಸೆಸರ್, ೬೪ ಎಂಪಿ ಕ್ಯಾಮೆರಾ, ಅಲ್ಟ್ರಾ ಕ್ಲಿಯರ್ ನೈಟ್ ಕ್ಯಾಮೆರಾ, ಇಮೇಜ್ ಸ್ಟೆಬಿಲೈಸೇಷನ್, ಡ್ಯುಯಲ್ ವಿಡಿಯೋ, ೪ಕೆ ವಿಡಿಯೋ, ೬.೮ ಇಂಚಿನ ಸ್ಕ್ರೀನ್, ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ.


ಸೂರ್ಯ, ಚಂದ್ರನತ್ತ ನೌಕೆ ರವಾನೆ ಯೋಜನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ) ೨೦೨೩ರಲ್ಲಿ ಹಲವು ವೈಜ್ಞಾನಿಕ ಆವಿಷ್ಕಾರಗಳನ್ನು ನಡೆಸುವ ಬಗ್ಗೆ ಗಮನ ಹರಿಸಲಿದೆ. ಪರೀಕ್ಷಾರ್ಥವಾಗಿ ಹಲವು ಗಗನಯಾನ ಸಂಬಂಽಸಿದ ಯೋಜನೆ ಸಂಬಂಧ ಕಾರ್ಯಾಚರಣೆಗಳನ್ನು ನಡೆಸಲು ಇಸ್ರೊ ಸಂಸ್ಥೆಯು ನಿರ್ಧರಿಸಿದ್ದು, ಪೂರಕವಾಗಿ ೨೦೨೩ರಲ್ಲಿ ಸೂರ್ಯನಲ್ಲಿಗೆ ಒಂದು ಉಪಗ್ರಹ ಹಾಗೂ ಚಂದ್ರನಲ್ಲಿಗೆ ನೌಕೆ ರವಾನಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಭಾರತದ ಹಲವು ನವೋದ್ಯಮಗಳೂ ಬಾಹ್ಯಾಕಾಶದಲ್ಲಿ ಅನೇಕ ಹೊಸ ಆವಿಷ್ಕಾರಗಳನ್ನು ನಡೆಸುವ ಬಗ್ಗೆ ಚಿಂತನೆಯನ್ನು ನಡೆಸುತ್ತಿದ್ದು, ೨೦೨೩ಕ್ಕೆ ಕಾರ್ಯರೂಪಕ್ಕೆ ತರಲು ಚಿಂತಿಸುತ್ತಿವೆ.


ಕಾವೇರಿ ನದಿ ದಂಡೆಯ ಮೇಲಿನ ಜಪದ ಕಟ್ಟೆ

ಕಾವೇರಿ ನದಿಯ ದಂಡೆಯ ಮೇಲಿನ ನಿಶ್ಶಬ್ದದ ಪರಿಸರದ ನಡುವೆ ರಮಣೀಯವಾಗಿರುವ ಒಂದು ಸುಂದರ ತಾಣ ಜಪದಕಟ್ಟೆ ಎಂಬ ಸ್ಥಳದಲ್ಲಿ ಜಪೇಶ್ವರ ಎಂಬ ಹೆಸರಿನಲ್ಲಿ ಶಿವನು ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಅನೇಕ ಋಷಿ ಮುನಿಗಳು ಇಲ್ಲಿ ತಪಸ್ಸನ್ನು ಆಚರಿಸುತ್ತಿದ್ದರಿಂದ ಈ ಕ್ಷೇತ್ರಕ್ಕೆ ಜಪದಕಟ್ಟೆ ಎಂಬ ಹೆಸರು ಬಂದಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನಲ್ಲಿರುವ ಕ್ಷೇತ್ರವು ಮೈಸೂರಿನಿಂದ ೭೪ ಕಿ.ಮೀ., ಕೆ.ಆರ್.ನಗರದಿಂದ ೩೫ ಕಿ.ಮೀ. ಮತ್ತು ಸಾಲಿಗ್ರಾಮದಿಂದ ೧೦ ಕಿ.ಮೀ. ದೂರದಲ್ಲಿದೆ. ಹೆಸರೇ ಸೂಚಿಸುವಂತೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿಯ ವಾತಾವರಣವನ್ನು ನೀಡುವ ಕ್ಷೇತ್ರವಾಗಿ ಪ್ರಕೃತಿಯ ಮಡಿಲಲ್ಲಿ ಅರಳಿ ನಿಂತಿದೆ.

andolanait

Recent Posts

ವಿಜಯಪುರದ ಮಂಗಳೂರಿನಲ್ಲಿ ಖಾಸಗಿ ವಿಮಾನ ಪತನ: ಇಬ್ಬರಿಗೆ ಗಂಭೀರ ಗಾಯ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್‌ ವಿಮಾನವೊಂದು ಪತನವಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಕಲಬುರ್ಗಿಯಿಂದ ಬೆಳಗಾವಿಗೆ…

53 mins ago

ಕಳೆದ 4 ವರ್ಷದಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ 35 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾವಳಿ ತೀವ್ರಗೊಂಡಿದೆ. ಕಳೆದ 4 ವರ್ಷದಲ್ಲಿ 35 ಮಂದಿ ಆನ್ ಲೈನ್ ಬೆಟ್ಟಿಂಗ್ ದಂಧೆಗೆ…

59 mins ago

ಮತ್ತೆರಡು ಸಮಾವೇಶ ಮಾಡಲು ಸಜ್ಜಾದ ಜೆಡಿಎಸ್‌: ಚುನಾವಣೆ ಗೆಲ್ಲಲು ರಣತಂತ್ರ

ಬೆಂಗಳೂರು: ಹಾಸನದಲ್ಲಿ ಇತ್ತೀಚೆಗೆ ನಡೆಸಿದ ಜೆಡಿಎಸ್ ಬೆಳ್ಳಿ ಮಹೋತ್ಸವದ ಮಾದರಿಯಲ್ಲಿ ರಾಜ್ಯದಲ್ಲಿ ಮತ್ತೆರಡು ಸಮಾವೇಶಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಕಲ್ಯಾಣ…

1 hour ago

ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ: ರಾಜ್ಯದ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ

ಬೆಂಗಳೂರು: ಬೇಸಿಗೆಗೂ ಮುನ್ನವೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದ್ದು, ರಾಜ್ಯದ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ…

1 hour ago

ಕನಕಪುರದ ಕಾಡಂಚಿನ ಗ್ರಾಮದಲ್ಲಿ 40 ಕಾಡಾನೆಗಳ ಹಿಂಡು ಪ್ರತ್ಯಕ್ಷ

ರಾಮನಗರ: ಕನಕಪುರದಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಕಾಡಂಚಿನ ಗ್ರಾಮದ ಬಳಿ ಸುಮಾರು 40 ಕಾಡಾನೆಗಳು ಕನಕಪುರ ತಾಲ್ಲೂಕಿನ ಕಾಡುಶಿವನಹಳ್ಳಿ ಬಳಿ…

3 hours ago

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಹೇಳಿಕೆಗೆ ಕಿಚ್ಚ ಸುದೀಪ್‌ ಕೆಂಡಾಮಂಡಲ

ಬೆಂಗಳೂರು:ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಕನ್ನಡ ಚಿತ್ರರಂಗದ ಹಲವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಅಶ್ಲೀಲವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ…

3 hours ago