ಮೈಸೂರು: ಮೊದಲ ಬಾರಿಗೆ ಕರ್ನಾಟಕದಲ್ಲಿ ಲೆಸ್ಸರ್ ವೈಟ್ ಫ್ರಾಂಟೆಡ್ ಗೂಸ್ ಮತ್ತು ಗ್ರೇಟರ್ ವೈಟ್ ಫ್ರಾಂಟೆಡ್ ಗೂಸ್ ಎಂಬ ಹೆಬ್ಬಾತುಗಳು ವಲಸೆ ಬಂದಿರುವುದು ಈ ಬಾರಿ ದಾಖಲಾಗಿದ್ದು, ನಂಜನಗೂಡಿನ ಹದಿನಾರು ಕೆರೆಯಲ್ಲಿ ಈ ಹಕ್ಕಿಗಳನ್ನು ಗುರುತಿಸಿ ವನ್ಯಜೀವಿ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಅವುಗಳ ಚಿತ್ರವನ್ನು ಸೆರೆಹಿಡಿದಿದ್ದಾರೆ.
ದೂರದ ಯುರೋಪ್, ಮಂಗೋಲಿಯಾ ಹಾಗೂ ಸೈಬೀರಿಯಾ ಮೂಲದಿಂದ ಈ ಹಕ್ಕಿಗಳು ಪಟ್ಟೆತಲೆ ಹೆಬ್ಬಾತುಗಳೊಂದಿಗೆ ಭಾರತಕ್ಕೆ ಬರುತ್ತವೆ. ಆದರೆ ಈ ಬಾರಿ ವಿಶೇಷವಾಗಿ ವನ್ಯಜೀವಿ ಛಾಯಾಗ್ರಾಹಕರು ನಂಜನಗೂಡಿನ ಹದಿನಾರು ಕೆರೆಯಲ್ಲಿ ಲೆಸ್ಸರ್ ವೈಟ್ ಫ್ರಾಂಟೆಡ್ ಗೂಸ್ ಮತ್ತುಗ್ರೇಟರ್ ವೈಟ್ ಫ್ರಾಂಟೆಡ್ ಗೂಸ್ ಎಂಬ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಹೆಬ್ಬಾತುಗಳನ್ನು ಈ ಬಾರ್ ಹೆಡೆಡ್ ಗೂಸ್ ಹಕ್ಕಿಗಳ ಮಧ್ಯೆ ಗುರುತಿಸಿ ಅದರ ಚಿತ್ರವನ್ನು ಸೆರೆಹಿಡಿದಿದ್ದಾರೆ.
ಮೈಸೂರಿನ ಪಕ್ಷಿ ವೀಕ್ಷಕ ಸ್ನೇಕ್ ಶಿವು, ಮತ್ತು ಎಚ್.ಎಸ್.ಸುರೇಂದ್ರ ಎಂಬವರು ಈ ಅಪರೂಪದ ಹಕ್ಕಿಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…
ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬಂದ್…