ಜಿಲ್ಲೆಗಳು

ಸೀಳು ನಾಯಿಗಳ ಬೇಟೆ ಹುಲಿರಾಯನ ಪಾಲಾಯಿತು…!

ನಾಗರಹೊಳೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿ ಪ್ರವಾಸಿಗರು

ಮೈಸೂರು: ನಾಗರ ಹೊಳೆ ಅಭಯಾರಣ್ಯದ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸೀಳು ನಾಯಿಗಳು (Wild Dogs) ಬೇಟೆಯಾಡಿದ ಕಡವೆ ಮರಿಯನ್ನು ಹುಲಿರಾಯ ಎಗರಿಸಿದ ಅಪರೂಪದ ದೃಶ್ಯವನ್ನು ಸಫಾರಿ ಪ್ರವಾಸಿಗರು ಗುರುವಾರ ಕಣ್ತುಂಬಿಕೊಂಡಿದ್ದಾರೆ.

ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯ ವ್ಯಾಪ್ತಿಗೆ ಸೇರಿದ ಕೈಮರದಿಂದ ಬಿಸಿಲವಾಡಿಗೆ ಹೋಗುವ ಸಫಾರಿ ಹಾದಿಯಲ್ಲಿ ಕಂಡು ಬಂದ ಸುಮಾರು ಮೂರ್ನಾಲ್ಕು ನಿಮಿಷಗಳ ಈ ದೃಶ್ಯ ಸಫಾರಿ ಪ್ರವಾಸಿಗರು ಮಾತ್ರವಲ್ಲ ವನ್ಯಪ್ರೇಮಿಗಳ ಗಮನಸೆಳೆದಿದೆ.

ಸೀಳುನಾಯಿಗಳು ಹುಲಿ, ಚಿರತೆ ಮುಂತಾದ ಪ್ರಾಣಿಗಳ ಬೇಟೆಯನ್ನು ಎಗರಿಸಿ ತಾವು ಭಕ್ಷಿಸುವ ಘಟನೆಗಳು ಸಾಮಾನ್ಯ. ಗುಂಪಿನಲ್ಲಿ ಸಾಗುವ ಸೀಳು ನಾಯಿಗಳು ತಮಗಿಂತ ಬಲಿಷ್ಠವಾದ ಮೃಗಗಳು ಬೇಟೆಯಾಡಿದ ಮಾಂಸವನ್ನು ಉಪಾಯದಿಂದ ಕಬಳಿಸಿ ಹೊತ್ತೊಯ್ಯುತ್ತವೆ. ಆದರೆ ಈ ಕಬಿನಿ ಹಿನ್ನೀರು ಪ್ರದೇಶದಲ್ಲಿ ದಾಖಲಾದ ಘಟನೆಯಲ್ಲಿ ಸೀಳು ನಾಯಿಗಳು ಬೇಟೆಯಾಡಿದ ಕಡವೆ ಮರಿಯನ್ನು ಗಂಡು ಹುಲಿ ಬಂದು ಹೊತ್ತೊಯ್ದು ಭಕ್ಷಿಸಿದೆ.

ಈ ನಡುವೆ ಮರಿಯನ್ನು ಕಳೆದುಕೊಂಡ ಕಡವೆ, ಸೀಳು ನಾಯಿಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ. ಒಂದು ನಾಯಿಯನ್ನು ಓಡಿಸುವಷ್ಟರಲ್ಲಿ ಮತ್ತೊಂದು ಕಡೆಯಿಂದ ಸೀಳು ನಾಯಿಗಳು ಮರಿಯ ಮಾಂಸವನ್ನು ಭಕ್ಷಿಸಲಾರಂಭಿಸಿವೆ. ಅಂತಿಮವಾಗಿ ಸ್ಥಳಕ್ಕೆ ಹಾಜರಾದ ಹುಲಿರಾಯ ಕಡವೆ ಮಾಂಸವನ್ನು ಎತ್ತಿಕೊಂಡು ಹೋಗಿದೆ. ಸೀಳು ನಾಯಿಗಳ ಪೆಚ್ಚು ಮೋರೆ ಹಾಕಿಕೊಂಡು ಹುಲಿಯನ್ನು ನೋಡುತ್ತಾ ನಿಂತಿವೆ. ತಾಯಿ ಕಡವೆಯ ರೋದನ ಮುಂದುವರಿದಿದೆ.

ಜಂಗಲ್‌ ರೆಸಾರ್ಟ್ಸ್‌ ಬಸ್ಸಿನ ಚಾಲಕ ಸಿ. ಆರ್ . ನಾಗೇಶ್ ಅವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ ಮೂಲಕ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ : ತುಂಡು ಬಟ್ಟೆಯ ಫಕೀರ ಮತ್ತು ಇಂಗ್ಲೆಂಡ್ ಚಕ್ರವರ್ತಿ

ಡಾ. ಪ್ರಮೀಳಾದೇವಿ ಬಿ.ಕೆ ೧೯೩೧-೩೨ರಲ್ಲಿ ಗಾಂಧಿಜಿಯವರು ಉಪ್ಪಿನ ಸತ್ಯಾಗ್ರಹದ ನಂತರ ರೌಂಡ್ ಟೇಬಲ್ ಮಾತುಕತೆಗಾಗಿ ಇಂಗ್ಲೆಂಡಿಗೆ ಹೋದರು. ಈ ವೇಳೆಗಾಗಲೆ…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ : ಚಾಮರಾಜನಗರ ಸೀಮೆಯಲ್ಲಿ ಗಾಂಧಿಯ ಪ್ರಭಾವ

ಚಾಮರಾಜನಗರ ಮೈಸೂರು ಜಿಯ ಒಂದು ಸಣ್ಣ ತಾಲ್ಲೂಕು ಕೇಂದ್ರವಾಗಿತ್ತು. ಸುಮಾರು ೯೦ ವರ್ಷಗಳ ಹಿಂದೆ ಸಣ್ಣ ಪಟ್ಟಣ. ೧೯೨೬ರಿಂದ ಇಲ್ಲಿಗೆ…

7 hours ago

ಇಂದು ಮೈಸೂರಿಗೆ ಮೋದಿ ಆಗಮನ : ವಿವೇಕ ಸ್ಮಾರಕ ಲೋಕಾರ್ಪಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಐತಿಹಾಸಿಕ…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಹೊರದೇಶದ ಭಾಷೆಗಳನ್ನು ಕಲಿತೆ

ನೃತ್ಯ ಮುಂತಾದವುಗಳಲ್ಲಿ ನಾನು ನಡೆಸಿದ ಪ್ರಯೋಗಗಳಿಂದ ನಾನು ಉಚ್ಚೃಂಖಲ ಪ್ರವೃತ್ತಿಯುಳ್ಳವನಾಗಿದ್ದನೆಂದು ಯಾರೂ ತಿಳಿಯಬಾರದು. ಅದರಲ್ಲಿಯೂ ವಿವೇಕದ ಅಂಶ ಇದ್ದಿತೆಂಬುದು ವಾಚಕರಿಗೆ…

7 hours ago

ನಾಳೆ ಸಿಎಂ ಡಿ.ಕೆ.ಶಿವಕುಮಾರ್‌ರಿಂದ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು: ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಪ್ರಧಾನಿ…

22 hours ago

ದಯವಿಟ್ಟು ಕರ್ನಾಟಕ ಬಂದ್‌ ಕೈಬಿಡಿ: ಸಿಎಂ ಡಿಕೆಶಿ ನಮ್ರತೆಯ ಮನವಿ

ಬೆಂಗಳೂರು: ರಾಜ್ಯದ ಹಿತ ಕಾಪಾಡೋಕೆ ನಾವಿದ್ದೀವಿ. ದಯವಿಟ್ಟು ಬಂದ್‌ ಕೈಬಿಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸರ್ಕಾರದ ಪರವಾಗಿ ನಮ್ರತೆಯ ಮನವಿ…

23 hours ago