ಚಾ.ನಗರ ಜಿಲ್ಲೆಯಲ್ಲಿ ಒಂದೇ ದಿನ ೩೮.೬ ಮಿ.ಮೀ. ಮಳೆ!
ರಾತ್ರಿ ಇಡೀ ಸುರಿದು ಹೊಲಗದ್ದೆಗಳಲ್ಲಿ ಹರಿದಾಡಿದ ನೀರು…
ಚಾಮರಾಜನಗರ: ಜಿಲ್ಲೆಯಾದ್ಯಂತ ಹೊಲಗದ್ದೆಗಳಲ್ಲಿ ನೀರು ಹರಿದಾಡುವ ಮಟ್ಟಿಗೆ ಭಾನುವಾರ ರಾತ್ರಿ ಇಡೀ ಜೋರುಮಳೆಯಾಗಿದೆ.
ಭಾನುವಾರ ಬೆಳಿಗ್ಗೆ ೮.೩೦ರಿಂದ ಸೋಮವಾರ ಬೆಳಿಗ್ಗೆ ೮.೩೦ರವರೆಗಿನ ಕಳೆದ ೨೪ಗಂಟೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ೩೮.೬ಮಿಮೀ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ವಾಹಿತಿ ನೀಡಿದ್ದಾರೆ.
ಈ ಒಂದು ದಿನದ ಅವಧಿಯಲ್ಲಿ ವಾಡಿಕೆ ಪ್ರಕಾರ ೫.೭ಮಿಮೀ ಮಳೆಯಾಗಬೇಕಿತ್ತು. ಅದಕ್ಕಿಂತ ೩೨ಮಿಮೀ(ಶೇ.೫೭೭) ಹೆಚ್ಚುಬಿದ್ದಿದೆ! ಅನೇಕ ಕಡೆ ರಾತ್ರಿ ಶುರುವಾದ ಮಳೆ ಸೋಮವಾರ ಬೆಳಿಗ್ಗೆವರೆಗೂ ಒಂದೇ ಸಮನೆ ಧಾರಾಕಾರವಾಗಿ ಸುರಿದಿದೆ.
ಹೀಗಾಗಿ ತಗ್ಗು ಪ್ರದೇಶದ ಜಮೀನು ಮತ್ತು ಬೆಳೆಗಳಲ್ಲಿ ಮಳೆನೀರು ನಿಲ್ಲಲ್ಪಟ್ಟಿದ್ದು ಬಸಿ ಕಾಲುವೆ ಮುಖಾಂತರ ನೀರನ್ನು ರೈತರು ಹೊರಹಾಕುತ್ತಿದ್ದಾರೆ. ಸೋಮವಾರವೂ ಮೋಡಕವಿದ ವಾತಾವರಣ ಆವರಿಸಿತ್ತು. ಮಧ್ಯೆ ಮಧ್ಯೆ ಮಳೆಯೂ ಜಿನುಗಿತು. ಇಡೀದಿನ ನೇಸರನ ದರ್ಶನ ಆಗಲಿಲ್ಲ.
ಈ ಮಳೆಯಿಂದ ಭತ್ತ, ರಾಗಿ, ಮುಸುಕಿನಜೋಳ, ಕಬ್ಬು, ಬೆಳೆಗಳಿಗಲ್ಲದೆ ತೋಟಗಾರಿಕಾ ಬೆಳೆಗಳಾದ ಅರಿಶಿನ, ಬಾಳೆಗೆ ಅನುಕೂಲವಾಗಿದ್ದು ಹಸಿಕಡಲೆ ಬಿತ್ತನೆಗೂ ನೆರವಾಗಿದೆ. ಸೆಪ್ಟೆಂಬರ್ ಮೊದಲವಾರ ಮಳೆ ಅಬ್ಬರಿಸಿ ಕೆರೆ-ಕಟ್ಟೆ ಹಾಗೂ ಜಲಾಶುಂಗಳು ತುಂಬಿಹರಿದಿದ್ದವು. ಆನಂತರ ಭಾನುವಾರ ರಾತ್ರಿ ಜೋರುಮಳೆಯಾಗಿದೆ ಎಂದು ಹವಾವಾನ ಇಲಾಖೆ ಮೂಲಗಳು ತಿಳಿಸಿವೆ. ಯಳಂದೂರು ತಾಲ್ಲೂಕಿನಲ್ಲಿ ಕಳೆದ ೨೪ಗಂಟೆಯಲ್ಲಿ ವಾಡಿಕೆಗಿಂತ(೫.೪ಮಿಮೀ) ಶೇ.೮೨೦ರಷ್ಟು ಹೆಚ್ಚು ಮಳೆಯಾಗಿದೆ.
ತಾಲ್ಲೂಕುವಾರು ಮಳೆ ಬಿದ್ದ ವಿವರ
(ಕಳೆದ ೨೪ಗಂಟೆ ಅವಧಿಯಲ್ಲಿ )
ಚಾ.ನಗರ ೪೫.೯ ಮಿಮೀ
ಗುಂಡ್ಲುಪೇಟೆ ೪೦.೧ ಮಿಮೀ
ಕೊಳ್ಳೇಗಾಲ ೨೩.೪ ಮಿಮೀ
ಯಳಂದೂರು ೪೯.೭ ಮಿಮೀ
ಹನೂರು ೩೫.೧ ಮಿಮೀ
ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹಗುರದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಚಾ.ನಗರ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹವಾವಾನ ತಜ್ಞ ಹೆಚ್.ಕೆ.ರಜತ್ ತಿಳಿಸಿದ್ದಾರೆ.
ಈ ವರ್ಷ ಬಿಡುಗಡೆಯಾದ ವಿನಯ್ ರಾಜಕುಮಾರ್ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಚಿತ್ರದ ನಂತರ ಒಂದಿಷ್ಟು ಹೊಸ ಚಿತ್ರದ ಕೆಲಸಗಳಲ್ಲಿ…
ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಂಎಲ್ಸಿ ಟಿಕೆಟ್ಗಾಗಿ…
ಚೆನ್ನೈ: ಹಿಂದಿ ಮಾಸಾಚರಣೆ ನೆಪದಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರು ದೇಶದ ಏಕತೆಯನ್ನು ಮರೆತು, ಕೇಂದ್ರ ಯೋಜನೆಗಳು ಮತ್ತು ಘೋಷಣೆಗಳಂತೆ…
ಬೆಂಗಳೂರು: ಸಚಿವ ಭೈರತಿ ಸುರೇಶ್ ಅವರು ಮುಡಾದಿಂದ ಫೈಲ್ಗಳನ್ನು ತಂದು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುರೇಶ್ರನ್ನು ತಕ್ಷಣ ಬಂಧಿಸಬೇಕು…
ಮಂಡ್ಯ: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆರೆ-ಕಟ್ಟೆಗಳನ್ನು ಹಣದ ದಾಹಕ್ಕೆ ನುಂಗಿ ಹಾಕಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ…
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ…