ಜಿಲ್ಲೆಗಳು

ಸಮಸ್ಯೆ ನೋಡಿ ಪರಿಹಾರ ನೀಡಿ : ಕಸದ ತೊಟ್ಟಿಯಾಯ್ತು ಟ್ಯಾಂಕ್ ಆವರಣ

ಬಿದ್ದು ಒದ್ದಾಡುತ್ತಿರುವ ಕಸ ತುಂಬಿರುವ ಪ್ಲಾಸ್ಟಿಕ್ ಕೈಚೀಲ; ಅನೈರ್ಮಲ್ಯದಿಂದ ಕೂಡಿರುವ ಖಾಲಿ ಜಾಗ

ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಬೃಹತ್ ನೀರಿನ ಟ್ಯಾಂಕ್ ಆವರಣ ಕಸದ ತೊಟ್ಟಿಯಾಗಿ ಪರಿವರ್ತಗೊಂಡಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ.
ಟ್ಯಾಂಕ್ ಸುತ್ತಲೂ ಕಸ ತುಂಬಿದ ಪ್ಲಾಸ್ಟಿಕ್ ಕೈಚೀಲಗಳು ಬಿದ್ದು ಒದ್ದಾಡುತ್ತಿವೆ. ಸಮೀಪವೇ ಮೈಸೂರು ವಿಶ್ವ ವಿದ್ಯಾನಿಲಯದ ಹಾಸ್ಟೆಲ್ ಇದೆ. ಕರಿನಂಜನಪುರ ಬಡಾವಣೆ, ಬುದ್ಧನಗರ, ಹೌಸಿಂಗ್‌ಬೋರ್ಡ್ ಕಾಲೋನಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದ್ದು ಓಡಾಡುವ ಜನರು ಕಸವನ್ನು ಎಸೆದು ಹೋಗುತ್ತಿದ್ದಾರೆ.


ನಗರಸಭೆಯ ೧೦ನೇ ವಾರ್ಡ್‌ಗೆ ಸೇರಿದ ಈ ಜಾಗದಲ್ಲಿ ಹಲವು ತಿಂಗಳುಗಳಿಂದ ಕಸದ ರಾಶಿ ರಾರಾಜಿಸುತ್ತಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಾಗಲಿ ಅಥವಾ ಈ ವಾರ್ಡ್ ಪ್ರತಿನಿಧಿಸುವ ಸದಸ್ಯರಾಗಲಿ ಇತ್ತ ಗಮನಿಸುತ್ತಿಲ್ಲ ಎಂದು ಸ್ಥಳೀಯರು ಅಸವಾಧಾನ ವ್ಯಕ್ತಪಡಿಸಿದ್ದಾರೆ.
ಬುದ್ಧನಗರ, ಕರಿನಂಜನಪುರ, ಹೌಸಿಂಗ್ ಬೋರ್ಡ್ ಕಾಲೋನಿಗಳಿಗೆ ಕಸ ಸಂಗ್ರಹದ ವಾಹನಗಳು ಆಗಮಿಸಿ ಕಸ ಸಂಗ್ರಹಿಸುತ್ತವೆ. ಈ ವಾಹನ ವಾರಕ್ಕೊಮ್ಮೆ ಬರುವುದು ಅಪರೂಪ. ಆದ್ದರಿಂದ ನಿವಾಸಿಗಳು ಕಸವನ್ನು ಟ್ಯಾಂಕ್ ಬಳಿಯ ಖಾಲಿ ಜಾಗಕ್ಕೆ ಬಿಸಾಡಿ ಹೋಗುತ್ತಾರೆ.
ಮನೆಮನೆಗಳಲ್ಲಿ ಆಟೋ ಮೂಲಕ ಕಸ ಸಂಗ್ರಹಿಸುವುದೇನು ಸರಿ. ಜೊತೆಗೆ ರಸ್ತೆ ಬದಿಗಳು, ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸ ತೆರವು ವಾಡುವುದು ಯಾವಾಗ? ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.


ಸಾಂಕ್ರಾಮಿಕ ರೋಗಗಳ ಭೀತಿ
ಮಳೆಗಾಲವಾಗಿದ್ದು ಕಸ ಕೊಳೆತು ಸೊಳ್ಳೆಗಳು ಹೆಚ್ಚುತ್ತಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ವೈರಲ್ ಫೀವರ್, ಹಂದಿಜ್ವರದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್ ಸಮೀಪವೇ ಚರಂಡಿಯಿದ್ದು ಕಸವೆಲ್ಲ ತುಂಬಿಕೊಂಡಿದೆ. ಜೊತೆಗೆ ಮಳೆಯ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಟ್ಯಾಂಕ್ ಸಮೀಪದ ಜಾಗ ನಗರಸಭೆಗೆ ಸೇರಿದ್ದು ಕಸವನ್ನು ಮತ್ತು ಗಿಡ-ಗಂಟಿಗಳನ್ನು ತೆರವು ವಾಡಿ ಶುಚಿಗೊಳಿಸಿದರೆ ಆಟವಾಡಲು, ವಾುುಂ ವಿಹಾರ ವಾಡಲು ಅನುಕೂಲವಾಗಲಿದೆ. ಈ ಕುರಿತು ೧೦ನೇ ವಾರ್ಡ್ ಸದಸ್ಯರಾದ ಮನೋಜ್‌ಪಟೇಲ್ ಅವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಟ್ಯಾಂಕ್ ಆವರಣದಲ್ಲಿ ಕಸ ಬಿದ್ದಿರುವ ಬಗ್ಗೆ ಸದಸ್ಯರಾದ ಮನೋಜ್‌ಪಟೇಲ್ ನಮ್ಮ ಗಮನಕ್ಕೆ ತಂದಿದ್ದಾರೆ. ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.
ಗಿರಿಜಮ್ಮ, ಪರಿಸರ ಇಂಜಿನಿುಂರ್, ನಗರಸಭೆ. 


ಟ್ಯಾಂಕ್ ಆವರಣ ಶುಚಿಗೊಳಿಸುವಂತೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸದ್ಯವೇ ಸ್ವಚ್ಛಗೊಳಿಸಲಿದ್ದಾರೆ. ಸ್ಥಳೀಯರು ಕಸವನ್ನು ಟ್ಯಾಂಕ್ ಬಳಿ ಬಿಸಾಡದೆ ಆಟೋಗೆ ನೀಡಬೇಕು. ಇದರಿಂದ ವಾತಾವರಣ ಶುಚಿಯಾಗಿ ಇರಲಿದೆ.
ಮನೋಜ್ ಪಟೇಲ್, ೧೦ನೇ ವಾರ್ಡ್ ಸದಸ್ಯರು.


ಸುಮಾರು ೨-೩ ತಿಂಗಳಿಂದ ಕಸ ಬಿದ್ದಿದೆ. ವಾರಕ್ಕೆ ೨ ಬಾರಿ ಕಸದ ಆಟೋ ಟ್ಯಾಂಕ್ ಆಸುಪಾಸಿನ ಬಡಾವಣೆಗಳಿಗೆ ಬಂದಿದ್ದರೆ ಕಸ ಬೀದಿಗೆ ಬೀಳುತ್ತಿರಲಿಲ್ಲ. ಮನೆಗಳಲ್ಲಿ ಹೆಚ್ಚಿನ ಕಸವನ್ನು ಇಟ್ಟುಕೊಳ್ಳಲಾಗದೆ ಜನರು ಖಾಲಿ ನಿವೇಶನಕ್ಕೆ ಬಿಸಾಡುತ್ತಿದ್ದಾರೆ.

ಕುಮಾರಸ್ವಾಮಿ, ಎಲ್‌ಐಸಿ ಲೇಔಟ್.

andolanait

Recent Posts

ಮನೆಯ ಚಾವಣಿ ಕುಸಿದು ನಾಲ್ವರು ಸಾವು ; ತಲಾ 5 ಲಕ್ಷ ಪರಿಹಾರ ಘೋಷಣೆ

ವಿಜಯಪುರ : ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ…

2 hours ago

ಡಿ.ಕೆ.ಶಿವಕುಮಾರ್‌ ಜನ್ಮದಿನಾಚರಣೆ : ರಾರಾಜಿಸಿದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಬ್ಯಾನರ್‌ಗಳು

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ದಂಡೇ…

3 hours ago

ದರ್ಶನ್‌ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ : ಅರ್ಜಿ ವಜಾಗೊಳಿಸಿದ ಸುಪೀಂ

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು, ಇನ್ನು ಒಂದು…

3 hours ago

ಜೂನ್‌ 21ರಂದು ನೀಟ್-ಯುಜಿ 2026ರ ಮರು ಪರೀಕ್ಷೆ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ‘ನೀಟ್-ಯುಜಿ 2026’ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಜೂನ್…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

8 hours ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

9 hours ago