ಜಿಲ್ಲೆಗಳು

ಸಮಸ್ಯೆ ನೋಡಿ ಪರಿಹಾರ ನೀಡಿ : ಕಸದ ತೊಟ್ಟಿಯಾಯ್ತು ಟ್ಯಾಂಕ್ ಆವರಣ

ಬಿದ್ದು ಒದ್ದಾಡುತ್ತಿರುವ ಕಸ ತುಂಬಿರುವ ಪ್ಲಾಸ್ಟಿಕ್ ಕೈಚೀಲ; ಅನೈರ್ಮಲ್ಯದಿಂದ ಕೂಡಿರುವ ಖಾಲಿ ಜಾಗ

ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಬೃಹತ್ ನೀರಿನ ಟ್ಯಾಂಕ್ ಆವರಣ ಕಸದ ತೊಟ್ಟಿಯಾಗಿ ಪರಿವರ್ತಗೊಂಡಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ.
ಟ್ಯಾಂಕ್ ಸುತ್ತಲೂ ಕಸ ತುಂಬಿದ ಪ್ಲಾಸ್ಟಿಕ್ ಕೈಚೀಲಗಳು ಬಿದ್ದು ಒದ್ದಾಡುತ್ತಿವೆ. ಸಮೀಪವೇ ಮೈಸೂರು ವಿಶ್ವ ವಿದ್ಯಾನಿಲಯದ ಹಾಸ್ಟೆಲ್ ಇದೆ. ಕರಿನಂಜನಪುರ ಬಡಾವಣೆ, ಬುದ್ಧನಗರ, ಹೌಸಿಂಗ್‌ಬೋರ್ಡ್ ಕಾಲೋನಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದ್ದು ಓಡಾಡುವ ಜನರು ಕಸವನ್ನು ಎಸೆದು ಹೋಗುತ್ತಿದ್ದಾರೆ.


ನಗರಸಭೆಯ ೧೦ನೇ ವಾರ್ಡ್‌ಗೆ ಸೇರಿದ ಈ ಜಾಗದಲ್ಲಿ ಹಲವು ತಿಂಗಳುಗಳಿಂದ ಕಸದ ರಾಶಿ ರಾರಾಜಿಸುತ್ತಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಾಗಲಿ ಅಥವಾ ಈ ವಾರ್ಡ್ ಪ್ರತಿನಿಧಿಸುವ ಸದಸ್ಯರಾಗಲಿ ಇತ್ತ ಗಮನಿಸುತ್ತಿಲ್ಲ ಎಂದು ಸ್ಥಳೀಯರು ಅಸವಾಧಾನ ವ್ಯಕ್ತಪಡಿಸಿದ್ದಾರೆ.
ಬುದ್ಧನಗರ, ಕರಿನಂಜನಪುರ, ಹೌಸಿಂಗ್ ಬೋರ್ಡ್ ಕಾಲೋನಿಗಳಿಗೆ ಕಸ ಸಂಗ್ರಹದ ವಾಹನಗಳು ಆಗಮಿಸಿ ಕಸ ಸಂಗ್ರಹಿಸುತ್ತವೆ. ಈ ವಾಹನ ವಾರಕ್ಕೊಮ್ಮೆ ಬರುವುದು ಅಪರೂಪ. ಆದ್ದರಿಂದ ನಿವಾಸಿಗಳು ಕಸವನ್ನು ಟ್ಯಾಂಕ್ ಬಳಿಯ ಖಾಲಿ ಜಾಗಕ್ಕೆ ಬಿಸಾಡಿ ಹೋಗುತ್ತಾರೆ.
ಮನೆಮನೆಗಳಲ್ಲಿ ಆಟೋ ಮೂಲಕ ಕಸ ಸಂಗ್ರಹಿಸುವುದೇನು ಸರಿ. ಜೊತೆಗೆ ರಸ್ತೆ ಬದಿಗಳು, ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸ ತೆರವು ವಾಡುವುದು ಯಾವಾಗ? ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.


ಸಾಂಕ್ರಾಮಿಕ ರೋಗಗಳ ಭೀತಿ
ಮಳೆಗಾಲವಾಗಿದ್ದು ಕಸ ಕೊಳೆತು ಸೊಳ್ಳೆಗಳು ಹೆಚ್ಚುತ್ತಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ವೈರಲ್ ಫೀವರ್, ಹಂದಿಜ್ವರದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್ ಸಮೀಪವೇ ಚರಂಡಿಯಿದ್ದು ಕಸವೆಲ್ಲ ತುಂಬಿಕೊಂಡಿದೆ. ಜೊತೆಗೆ ಮಳೆಯ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಟ್ಯಾಂಕ್ ಸಮೀಪದ ಜಾಗ ನಗರಸಭೆಗೆ ಸೇರಿದ್ದು ಕಸವನ್ನು ಮತ್ತು ಗಿಡ-ಗಂಟಿಗಳನ್ನು ತೆರವು ವಾಡಿ ಶುಚಿಗೊಳಿಸಿದರೆ ಆಟವಾಡಲು, ವಾುುಂ ವಿಹಾರ ವಾಡಲು ಅನುಕೂಲವಾಗಲಿದೆ. ಈ ಕುರಿತು ೧೦ನೇ ವಾರ್ಡ್ ಸದಸ್ಯರಾದ ಮನೋಜ್‌ಪಟೇಲ್ ಅವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಟ್ಯಾಂಕ್ ಆವರಣದಲ್ಲಿ ಕಸ ಬಿದ್ದಿರುವ ಬಗ್ಗೆ ಸದಸ್ಯರಾದ ಮನೋಜ್‌ಪಟೇಲ್ ನಮ್ಮ ಗಮನಕ್ಕೆ ತಂದಿದ್ದಾರೆ. ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.
ಗಿರಿಜಮ್ಮ, ಪರಿಸರ ಇಂಜಿನಿುಂರ್, ನಗರಸಭೆ. 


ಟ್ಯಾಂಕ್ ಆವರಣ ಶುಚಿಗೊಳಿಸುವಂತೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸದ್ಯವೇ ಸ್ವಚ್ಛಗೊಳಿಸಲಿದ್ದಾರೆ. ಸ್ಥಳೀಯರು ಕಸವನ್ನು ಟ್ಯಾಂಕ್ ಬಳಿ ಬಿಸಾಡದೆ ಆಟೋಗೆ ನೀಡಬೇಕು. ಇದರಿಂದ ವಾತಾವರಣ ಶುಚಿಯಾಗಿ ಇರಲಿದೆ.
ಮನೋಜ್ ಪಟೇಲ್, ೧೦ನೇ ವಾರ್ಡ್ ಸದಸ್ಯರು.


ಸುಮಾರು ೨-೩ ತಿಂಗಳಿಂದ ಕಸ ಬಿದ್ದಿದೆ. ವಾರಕ್ಕೆ ೨ ಬಾರಿ ಕಸದ ಆಟೋ ಟ್ಯಾಂಕ್ ಆಸುಪಾಸಿನ ಬಡಾವಣೆಗಳಿಗೆ ಬಂದಿದ್ದರೆ ಕಸ ಬೀದಿಗೆ ಬೀಳುತ್ತಿರಲಿಲ್ಲ. ಮನೆಗಳಲ್ಲಿ ಹೆಚ್ಚಿನ ಕಸವನ್ನು ಇಟ್ಟುಕೊಳ್ಳಲಾಗದೆ ಜನರು ಖಾಲಿ ನಿವೇಶನಕ್ಕೆ ಬಿಸಾಡುತ್ತಿದ್ದಾರೆ.

ಕುಮಾರಸ್ವಾಮಿ, ಎಲ್‌ಐಸಿ ಲೇಔಟ್.

andolanait

Recent Posts

ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮೈಸೂರು: ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ನಾಗೇಂದ್ರ ಎಂಬುವವರು…

11 mins ago

ಕಪಿಲಾ ನದಿಗೆ ಮತ್ತೊಂದು ಸೇತುವೆ

ನಂಜನಗೂಡು: ವರುಣ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸಂಪರ್ಕಿಸಲು ಕಪಿಲಾ ನದಿಗೆ ಮತ್ತೊಂದು ಸೇತುವೆ ಮಂಜೂರಾಗಿದೆ. ತಾಲ್ಲೂಕಿನ ನಂಜನಗೂಡು-ಹುಲ್ಲಹಳ್ಳಿ…

35 mins ago

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸಂಕಷ್ಟ

ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ ಎಂಬ ಮಾಹಿತಿ…

39 mins ago

ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಕೋರ್ಸ್‌ಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ…

1 hour ago

ನಿಜ್ಜರ್ ಹತ್ಯೆ ಪ್ರತಿಧ್ವನಿ-ಕೆನಡಾ ಭಾರತೀಯರಲ್ಲಿ ಆತಂಕ

ಅಮಿತ್ ಶಾ, ಅಜಿತ್‌ ದೋವಲ್ ಮೇಲೆಯೂ ಆರೋಪ ಡಿ.ವಿ.ರಾಜಶೇಖರ ಖಾಲಿಸ್ತಾನ್ ಉಗ್ರವಾದಿ ನಾಯಕ ಹರದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ನಂತರದ…

1 hour ago

ಸೈಕಲ್ ಎಂಬ ಮಾಯಾಂಗನೆಯನೇರಿ..!

ಮೂಲ : ಪೂಜ ಹರೀಶ್‌, ಮೈಸೂರು ಅನುವಾದ: ಎನ್.ನರಸಿಂಹಸ್ವಾಮಿ, ನಾಗಮಂಗಲ ಜೀವನ ಒಂದು ಸೈಕಲ್ ಸವಾರಿಯಂತೆ, ಆಯ ತಪ್ಪದಿರಲು ಮುಂದೆ…

1 hour ago