ಜಿಲ್ಲೆಗಳು

ಸಮಸ್ಯೆ ನೋಡಿ ಪರಿಹಾರ ನೀಡಿ : ಕಸದ ತೊಟ್ಟಿಯಾಯ್ತು ಟ್ಯಾಂಕ್ ಆವರಣ

ಬಿದ್ದು ಒದ್ದಾಡುತ್ತಿರುವ ಕಸ ತುಂಬಿರುವ ಪ್ಲಾಸ್ಟಿಕ್ ಕೈಚೀಲ; ಅನೈರ್ಮಲ್ಯದಿಂದ ಕೂಡಿರುವ ಖಾಲಿ ಜಾಗ

ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಬೃಹತ್ ನೀರಿನ ಟ್ಯಾಂಕ್ ಆವರಣ ಕಸದ ತೊಟ್ಟಿಯಾಗಿ ಪರಿವರ್ತಗೊಂಡಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ.
ಟ್ಯಾಂಕ್ ಸುತ್ತಲೂ ಕಸ ತುಂಬಿದ ಪ್ಲಾಸ್ಟಿಕ್ ಕೈಚೀಲಗಳು ಬಿದ್ದು ಒದ್ದಾಡುತ್ತಿವೆ. ಸಮೀಪವೇ ಮೈಸೂರು ವಿಶ್ವ ವಿದ್ಯಾನಿಲಯದ ಹಾಸ್ಟೆಲ್ ಇದೆ. ಕರಿನಂಜನಪುರ ಬಡಾವಣೆ, ಬುದ್ಧನಗರ, ಹೌಸಿಂಗ್‌ಬೋರ್ಡ್ ಕಾಲೋನಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದ್ದು ಓಡಾಡುವ ಜನರು ಕಸವನ್ನು ಎಸೆದು ಹೋಗುತ್ತಿದ್ದಾರೆ.


ನಗರಸಭೆಯ ೧೦ನೇ ವಾರ್ಡ್‌ಗೆ ಸೇರಿದ ಈ ಜಾಗದಲ್ಲಿ ಹಲವು ತಿಂಗಳುಗಳಿಂದ ಕಸದ ರಾಶಿ ರಾರಾಜಿಸುತ್ತಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಾಗಲಿ ಅಥವಾ ಈ ವಾರ್ಡ್ ಪ್ರತಿನಿಧಿಸುವ ಸದಸ್ಯರಾಗಲಿ ಇತ್ತ ಗಮನಿಸುತ್ತಿಲ್ಲ ಎಂದು ಸ್ಥಳೀಯರು ಅಸವಾಧಾನ ವ್ಯಕ್ತಪಡಿಸಿದ್ದಾರೆ.
ಬುದ್ಧನಗರ, ಕರಿನಂಜನಪುರ, ಹೌಸಿಂಗ್ ಬೋರ್ಡ್ ಕಾಲೋನಿಗಳಿಗೆ ಕಸ ಸಂಗ್ರಹದ ವಾಹನಗಳು ಆಗಮಿಸಿ ಕಸ ಸಂಗ್ರಹಿಸುತ್ತವೆ. ಈ ವಾಹನ ವಾರಕ್ಕೊಮ್ಮೆ ಬರುವುದು ಅಪರೂಪ. ಆದ್ದರಿಂದ ನಿವಾಸಿಗಳು ಕಸವನ್ನು ಟ್ಯಾಂಕ್ ಬಳಿಯ ಖಾಲಿ ಜಾಗಕ್ಕೆ ಬಿಸಾಡಿ ಹೋಗುತ್ತಾರೆ.
ಮನೆಮನೆಗಳಲ್ಲಿ ಆಟೋ ಮೂಲಕ ಕಸ ಸಂಗ್ರಹಿಸುವುದೇನು ಸರಿ. ಜೊತೆಗೆ ರಸ್ತೆ ಬದಿಗಳು, ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸ ತೆರವು ವಾಡುವುದು ಯಾವಾಗ? ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.


ಸಾಂಕ್ರಾಮಿಕ ರೋಗಗಳ ಭೀತಿ
ಮಳೆಗಾಲವಾಗಿದ್ದು ಕಸ ಕೊಳೆತು ಸೊಳ್ಳೆಗಳು ಹೆಚ್ಚುತ್ತಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ವೈರಲ್ ಫೀವರ್, ಹಂದಿಜ್ವರದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್ ಸಮೀಪವೇ ಚರಂಡಿಯಿದ್ದು ಕಸವೆಲ್ಲ ತುಂಬಿಕೊಂಡಿದೆ. ಜೊತೆಗೆ ಮಳೆಯ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಟ್ಯಾಂಕ್ ಸಮೀಪದ ಜಾಗ ನಗರಸಭೆಗೆ ಸೇರಿದ್ದು ಕಸವನ್ನು ಮತ್ತು ಗಿಡ-ಗಂಟಿಗಳನ್ನು ತೆರವು ವಾಡಿ ಶುಚಿಗೊಳಿಸಿದರೆ ಆಟವಾಡಲು, ವಾುುಂ ವಿಹಾರ ವಾಡಲು ಅನುಕೂಲವಾಗಲಿದೆ. ಈ ಕುರಿತು ೧೦ನೇ ವಾರ್ಡ್ ಸದಸ್ಯರಾದ ಮನೋಜ್‌ಪಟೇಲ್ ಅವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಟ್ಯಾಂಕ್ ಆವರಣದಲ್ಲಿ ಕಸ ಬಿದ್ದಿರುವ ಬಗ್ಗೆ ಸದಸ್ಯರಾದ ಮನೋಜ್‌ಪಟೇಲ್ ನಮ್ಮ ಗಮನಕ್ಕೆ ತಂದಿದ್ದಾರೆ. ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.
ಗಿರಿಜಮ್ಮ, ಪರಿಸರ ಇಂಜಿನಿುಂರ್, ನಗರಸಭೆ. 


ಟ್ಯಾಂಕ್ ಆವರಣ ಶುಚಿಗೊಳಿಸುವಂತೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸದ್ಯವೇ ಸ್ವಚ್ಛಗೊಳಿಸಲಿದ್ದಾರೆ. ಸ್ಥಳೀಯರು ಕಸವನ್ನು ಟ್ಯಾಂಕ್ ಬಳಿ ಬಿಸಾಡದೆ ಆಟೋಗೆ ನೀಡಬೇಕು. ಇದರಿಂದ ವಾತಾವರಣ ಶುಚಿಯಾಗಿ ಇರಲಿದೆ.
ಮನೋಜ್ ಪಟೇಲ್, ೧೦ನೇ ವಾರ್ಡ್ ಸದಸ್ಯರು.


ಸುಮಾರು ೨-೩ ತಿಂಗಳಿಂದ ಕಸ ಬಿದ್ದಿದೆ. ವಾರಕ್ಕೆ ೨ ಬಾರಿ ಕಸದ ಆಟೋ ಟ್ಯಾಂಕ್ ಆಸುಪಾಸಿನ ಬಡಾವಣೆಗಳಿಗೆ ಬಂದಿದ್ದರೆ ಕಸ ಬೀದಿಗೆ ಬೀಳುತ್ತಿರಲಿಲ್ಲ. ಮನೆಗಳಲ್ಲಿ ಹೆಚ್ಚಿನ ಕಸವನ್ನು ಇಟ್ಟುಕೊಳ್ಳಲಾಗದೆ ಜನರು ಖಾಲಿ ನಿವೇಶನಕ್ಕೆ ಬಿಸಾಡುತ್ತಿದ್ದಾರೆ.

ಕುಮಾರಸ್ವಾಮಿ, ಎಲ್‌ಐಸಿ ಲೇಔಟ್.

andolanait

Recent Posts

ಉದ್ಘಾಟನಾ ಪಂದ್ಯದಲ್ಲಿ ಮಿಂಚಿದ ಆರ್‌ಸಿಬಿ

ಕೊಹ್ಲಿ-ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್, ಎಸ್‌ಆರ್‌ಎಚ್ ವಿರುದ್ಧ ಭರ್ಜರಿ ಜಯ ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಸನ್…

12 mins ago

ವೈರಮುಡಿ ಬ್ರಹ್ಮೋತ್ಸವ

ಮಂಡ್ಯ: ಇತಿಹಾಸ ಪ್ರಸಿದ್ಧ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಶನಿವಾರ ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮೇಲು ಕೋಟೆಯ…

16 mins ago

ಕಳೆ ನಾಶಕ ಸಿಂಪಡಣೆ ವೇಳೆ ರೈತ ಸಾವು

ಎಚ್.ಡಿ.ಕೋಟೆ: ತಾಲ್ಲೂಕಿನ ಜಿ.ಬಿ.ಸರಗೂರು ಗ್ರಾಮದ ರೈತ ನಾಗೇಶ್ (೪೨) ಶುಂಠಿ ಬೆಳೆಗೆ ಕಳೆನಾಶಕ ಔಷಧ ಸಿಂಪಡಿಸುವಾಗ ಮೃತಪಟ್ಟಿದ್ದಾರೆ. ಶನಿವಾರ ಬೆಳಿಗ್ಗೆ…

19 mins ago

ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಬಸ್‌ ಸೌಲಭ್ಯ ಕಲ್ಪಿಸಲು ಡಿಪೋ ನಿರ್ಮಾಣ: ಶಾಸಕ ಎಂ.ಆರ್.‌ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…

12 hours ago

ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವು

‌ಶ್ರೀರಂಗಪಟ್ಟಣ: ವಿದ್ಯುತ್‌ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್‌ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…

12 hours ago