ಆಯುಧ ಪೂಜೆ ಮುನ್ನ ದಿನ ೪೦೦ ವಾಹನಗಳಿಗೆ ವಿಶೇಷ ಪೂಜೆ
ಮೈಸೂರು: ಮಹಾನಗರಪಾಲಿಕೆಯ ಸುಮಾರು ೪೦೦ ವಾಹನಗಳನ್ನು ಒಂದೆಡೆ ನಿಲ್ಲಿಸಿ ಪೂಜಾ ಕಾರ್ಯ ನಡೆಸುವ ಮೂಲಕ ಅದ್ಧೂರಿ ಯಾಗಿ ಆಯುಧ ಪೂಜೆ ಆಚರಿಸಲಾಯಿತು. ಜೊತೆಗೆ ಉತ್ತಮ ಚಾಲಕರಿಗೆ ಸನ್ಮಾನವನ್ನೂ ಮಾಡಲಾಯಿತು.
ನಗರದ ಕುಕ್ಕರಹಳ್ಳಿ ಕೆರೆ ರಸ್ತೆಯ ಮಹಾಬೋಧಿ ಶಾಲೆ ಎದುರಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಆಯುಧ ಪೂಜಾ ಕಾರ್ಯಕ್ರಮ ವನ್ನು ಮಹಾಪೌರ ಶಿವಕುಮಾರ್ ಹಾಗೂ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಗರಪಾಲಿಕೆಯ ೨೮೫ ಟಿಪ್ಪರ್, ೬೫ ಟ್ರಾಕ್ಟರ್, ೨೧ ಕಾಂಪ್ಯಾಕ್ಟ್ ವಾಹನ, ೯ ಜೆಸಿಬಿ, ೫ ಎಸ್ಕಾವೇಟರ್ ಸೇರಿದಂತೆ ಮೈದಾನದಲ್ಲಿ ೪೮೫ ವಾಹನ ಗಳನ್ನು ನಿಲ್ಲಿಸಲಾಗಿತ್ತು. ಅವುಗಳ ಅಲಂಕಾರಕ್ಕೆ ನಗರಪಾಲಿಕೆ ವತಿಯಿಂದ ೮೦ ಸಾವಿರ ರೂ. ಹಣ ನೀಡಲಾಗಿತ್ತು. ಹಬ್ಬದ ನಿಮಿತ್ತ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಇದೇ ವೇಳೆ ಚಾಲಕರಾದ ಜಯರಾಜ್, ಸುಧೀಂದ್ರ, ಮುರುಗೇಶ್, ವೆಂಕಟೇಶ್, ಖಲೀಲ್, ಮಂಚಣ್ಣ, ರವಿ, ರಾಜಶೇಖರಮೂರ್ತಿ, ಸುದೀಂದ್ರ ಯಾದವ್, ಯಶವಂತ್, ವಾಜಿದ್ ಅವರನ್ನು ಸನ್ಮಾನಿಸಲಾಯಿತು. ವಾಹನ ವಿಭಾಗದ ಮೇಲ್ವಿಚಾರಕ ನಸ್ರುಲ್ಲಾ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಉಪ ಮಹಾಪೌರರಾದ ಡಾ.ಜಿ.ರೂಪಾ, ಉಪ ಆಯುಕ್ತ ಮಹೇಶ್, ಹೆಚ್ಚುವರಿ ಆಯುಕ್ತರಾದ ರೂಪಾ, ಸವಿತಾ, ನಗರಪಾಲಿಕೆ ಸದಸ್ಯರಾದ ಅಶ್ವಿನಿ ಅನಂತು, ವೇದಾವತಿ, ಸ್ವಚ್ಛತಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…
ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…
ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…
ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…