ಚಾಮರಾಜನಗರ : ರಾಜ್ಯ, ಕೇಂದ್ರದಲ್ಲಿ ೭೫ ವರ್ಷಗಳಿಂದ ನಮ್ಮನ್ನು ಆಳುತ್ತಿರುವ ಸರ್ಕಾರಗಳು ನಮ್ಮ ಹಿತ ಕಾಯಲಿಲ್ಲ. ಈ ಚಳವಳಿ ನಿಂತ ನೀರಲ್ಲ ಸದಾ ಹರಿಯುವ ನೀರು ಇದ್ದಂತೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿಸ್ವಾಮೀಜಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ವಾಭಿಮಾನಿ ಎಸ್ಸಿ ಮತ್ತು ಎಸ್ಟಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ನಡೆದ ಎಸ್ಸಿ, ಎಸ್ಟಿ ಸಮುದಾಯಗಳು ಏಕೆ ಒಂದಾಗಬೇಕು ? ಒಂದು ಚೆರ್ಚೆ, ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಭಿಮಾನಿಗಳಾದ ಎಸ್ಸಿ, ಎಸ್ಟಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಿಮ್ಮ ಶಾಸಕರು, ಸಚಿವರು, ಮುಖ್ಯಮಂತ್ರಿಗಳಿಗೆ ಪಕ್ಷ, ನಾಯಕರುಗಳಿಗೆ ಅಭಿಮಾನಯಾಗಿ ಇರಬೇಕು ಹೊರತು ಅನುಯಾಯಿಯಾಗಬಾರದು. ಚುನಾವಣೆಗಳು ಮುಗಿದ ಮೇಲೆ ನಾವು ಎಸ್ಸಿ, ಎಸ್ಟಿಗಳು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಲ್ಮೀಕಿಯವರಿಗೆ ಅನುಯಾಯಿಯಾಗಬೇಕು. ಎಸ್ಸಿ, ಎಸ್ಟಿಗಳಲ್ಲಿ ಸಾಮರಸ್ಯದ ಬೆಸುಗೆ ಮೂಡಿಸುವ ಸಲುವಾಗಿ ನಮ್ಮ ಎಲ್ಲ ಪರಮಪೂಜ್ಯರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಎಸ್ಸಿ, ಎಸ್ಟಿಗಳು ೧೫೧ ಜಾತಿಗಳಿದ್ದು, ಮರಳುಬೇರೆ, ಜಲ್ಲಿಬೇರೆ, ನೀರು ಬೇರೆ, ಸಿಮೆಂಟ್ ಬೇರೆ, ಕಬ್ಬಿಣಬೇರೆ ಆಗಿದ್ದು, ಇಂದು ನಾವೆಲ್ಲರೂ ಸಿಮೆಂಟ್ ಕಾಂಕ್ರಿಟ್ ತರ ಒಂದಾಗಿದ್ದೇವೆ. ಎಸ್ಸಿ, ಎಸ್ಟಿಗಳಲ್ಲಿ ಒಗ್ಗಟ್ಟು ಮೂಡಿಸಲು ಪರಮಪೂಜ್ಯರು ಈ ಒಂದು ಸಂಕಲ್ಪ ಮಾಡಿದ್ದೇವೆ. ಅದಕ್ಕಾಗಿ ಕರ್ನಾಟಕ ರಾಜ್ಯದಲ್ಲಿರುವ ಒಂದು ಮೂಕ್ಕಾಲು ಕೋಟೆ ಈ ಸಮುದಾಯಗಳು ನಾವೆಲ್ಲರೂ ಕೂಡ ಬಹುಸಂಖ್ಯಾತರು. ದೇಶ, ರಾಜ್ಯದಲ್ಲಿ ೭೫ ವರ್ಷಗಳಿಂದ ನಮ್ಮನ್ನು ಆಳುತ್ತಿರುವ ಸರ್ಕಾರಗಳು ನಮ್ಮ ಹಿತ ಕಾಯಲಿಲ್ಲ. ಇವತ್ತು ಮೀಸಲಾತಿ ಹೆಚ್ಚಳ ಆಗಿದೆ ಎಂದರೆ ಬಹುತೇಕ ಕರ್ನಾಟಕದ್ಯಂತ ಎಸ್ಸಿ,ಎಸ್ಟಿ ವರ್ಗದವರು ಹಳ್ಳಿಯಿಂದ, ಹೋಬಳಿಯಿÄಂದ ಹೋರಾಟ P ತಾಲೂಕು ಕೇಂದ್ರಗಳಲ್ಲಿ ನಮ್ಮ ಸಂವಿಧಾನ ಬದ್ದ ಹಕ್ಕುನ್ನು ಕೊಡಲೇಬೇಕು ಎಂದು ಹೋರಾಟ ಕೈಗೆತ್ತಿಕೊಂಡು ತಹಸೀಲ್ದಾರ್ ಅವರ ಮುಖೇನಾ ಮುಖ್ಯಮಂತ್ರಿ ಸಂದೇಶ ರವಾನೆ ಮಾಡಿದ್ರಿ ನಂತರ ೧೫೨ ದಿನಕ್ಕೆ ರಾಜ್ಯದ ೩೧ ಜಿಲ್ಲೆಗಳಲ್ಲಿ ಹೋರಾಟವನ್ನು ಕೈಗೆತ್ತಿಕೊಂಡು ಜಿಲ್ಲಾಧಿಕಾರಿಗಳ ಮುಖೇನಾ ಸಂದೇಶವನ್ನು ಮುಖ್ಯಮಂತ್ರಿ ರವಾನಿಸುವ ಮೂಲಕ ಎಸ್ಸಿ,ಎಸ್ಟಿಗಳು ನಾವೆಲ್ಲ ಒಂದಾಗಿದ್ದೇವೆ ಎಂಬ ಉತ್ತರವನ್ನು ಕೊಟ್ರಿ. ಕರ್ನಾಟಕ ಎಸ್ಸಿ, ಎಸ್ಟಿಗಳು ಒಂದು ಹೆಜ್ಜೆ ಇಟ್ಟಿದ್ದೇವೆ. ಇನ್ನೂ ೨೨ ಹೆಜ್ಜೆ ಇಡಬೇಕು. ಇದಕ್ಕಾಗಿ ಜಾಗೃತರಾಗಬೇPಕಿದೆ ಎಂದರು. ರುವಂದನಾ ಸ್ವೀಕರಿಸಿ ಮಾತನಾಡಿದರು.
ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…
ಮಡಿಕೇರಿ : ಶಿಕ್ಷಕಿಯೊಬ್ಬರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.…
ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)…
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…
ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…
ಮೈಸೂರು : ನಗರದ ಇಟ್ಟಿಗೆಗೂಡಿನ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ೧೦೨ನೇ ಕರಗಮಹೋತ್ಸವ…