ಜಿಲ್ಲೆಗಳು

‘ಕನ್ನಡ ನರ್ಸರಿ ಶಾಲೆ ಮರು ನಿರ್ಮಾಣಕ್ಕೆ 25 ತಿಂಗಳಾದ್ರೂ ಅನುಮತಿ ಇಲ್ಲ’

ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಕೇಳಿ ೨೫ ತಿಂಗಳಾಯಿತು: ರಾಮಕೃಷ್ಣ ಅಳಲು

ಮೈಸೂರು: ‘ಕುಸಿದಿರುವ ಕನ್ನಡ ಶಾಲೆಯೊಂದನ್ನು ಮರು ನಿರ್ಮಾಣ ಮಾಡಲು ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಕೋರಿ ೨೫ ತಿಂಗಳಾದ್ರೂ ನಗರಪಾಲಿಕೆ ವತಿಯಿಂದ ಇನ್ನು ಅನುಮತಿ ನೀಡಿಲ್ಲ’ ಎಂದು ಶ್ರೀ ವಿದ್ಯಾಶಂಕರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಮಕೃಷ್ಣ ಅಳಲು ತೋಡಿಕೊಂಡರು.
ನಗರದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಬುಧವಾರ ಮೈಸೂರು ನಗರಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ‘ಅಂತಿಮ ಪಾಲಿಕೆ ಅದಾಲತ್’ನಲ್ಲಿ ಸಮಸ್ಯೆಗಳನ್ನು ತಿಳಿಸಿದರು.

೧೯೭೫ರಿಂದ ಉದಯಗಿರಿ ಮತ್ತು ಸಿದ್ಧಾರ್ಥನಗರದಲ್ಲಿ ಶ್ರೀವಿದ್ಯಾಶಂಕರ ಶಿಕ್ಷಣ ಸಂಸ್ಥೆಯು ಸಂಪೂರ್ಣ ಉಚಿತವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ. ಸಿದ್ದಾರ್ಥನಗರದಲ್ಲಿನ ಮೈಸೂರ್ ಒನ್ ಬಳಿ ಇರುವ ಸಂಸ್ಥೆಯ ಕನ್ನಡ ನರ್ಸರಿ ಶಾಲೆಯ ಕಟ್ಟಡ ೨೦೧೬-೧೭ರಲ್ಲಿ ಕುಸಿದಿತ್ತು. ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ೨೦೨೦ರಲ್ಲಿಯೇ ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಅರ್ಜಿ ಹಾಕಿದ್ದೆ. ಶಿಲ್ಪನಾಗ್ ಅವರು ಮತ್ತು ಇಂದಿನ ಪಾಲಿಕೆ ಆಯುಕ್ತರಾದ ಲಕ್ಷೀಕಾಂತ್ ರೆಡ್ಡಿ ಅವರು ತಲಾ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ನಾನಾ ಕಾರಣಗಳನ್ನು ಹೇಳಿ ಇನ್ನೂ ಲೈಸೆನ್ಸ್ ಮತ್ತು ಪ್ಲಾನ್ ಅನ್ನು ನೀಡಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್ ಮತ್ತು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರು ‘ ಡಿ.೮ರಂದು ನಡೆಯುವ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗುವುದು’ ಎಂದು ಭರವಸೆ ನೀಡಲಾಗುವುದು ಎಂದರು.

ಗಾಯಿತ್ರಿಪುರಂನ ಕೃಷ್ಣ ಎಂಬವರು ಓರಿಯಂಟಲ್ ವಿಮೆ ಕಾನೂನು ಅನ್ವಯ ಹಣಕಟ್ಟಿ ರಸ್ತೆಯೊಂದನ್ನು ನಿರ್ವಹಣೆ ಮಾಡಲು ಎನ್‌ಒಸಿ ನೀಡುವಂತೆ ಕೇಳಿದರು. ಇದಕ್ಕೆ ಆಯುಕ್ತ ಲಕ್ಷೀಕಾಂತ್ ರೆಡ್ಡಿ, ಹಾಗೆ ನೀಡಲು ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದರು. ೨೦೧೮ರಲ್ಲಿ ಬೋಗಾದಿಯ ಸಿಎಫ್‌ಟಿಆರ್‌ಐ ಲೇಔಟ್‌ನಲ್ಲಿ ರಸ್ತೆ ನಿರ್ವಹಣೆ ಮಾಡಲು ವಾಸು ಎಂಬವರಿಗೆ ಎನ್‌ಒಸಿ ನೀಡಿ ಅವಕಾಶ ನೀಡಲಾಗಿದೆ. ನಮಗೆ ಯಾಕೆ ನೀಡುವುದಿಲ್ಲ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀಕಾಂತ್ ರೆಡ್ಡಿ, ಈಗ ಹೀಗೆ ನೀಡಬಹುದಾದ ಯಾವುದೇ ನಿಯಮವಿಲ್ಲ. ಹಾಗಾಗಿ, ಕೊಡಲಾಗುವುದಿಲ್ಲ ಎಂದರು.

 

 

 

andolana

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

5 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

14 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

14 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

14 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

16 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

17 hours ago