ಜಿಲ್ಲೆಗಳು

ನಾಗರಹೊಳೆ, ಬಂಡೀಪುರದಲ್ಲಿ ಡಬಲ್‌ ಧಮಾಕಾ…!

ಕಬಿನಿ ಹಿನ್ನೀರಿನಲ್ಲಿ 4 ಮರಿಗಳ ಜತೆ ಹುಲಿ ದರ್ಶನ, ಬಂಡೀಪುರಕ್ಕೆ ಮತ್ತೆ ಬಂದಿದ್ದಾಳೆ ಸುಂದರಿ…

ಮೈಸೂರು: ಬಂಡೀಪುರ ಮತ್ತು ನಾಗರಹೊಳೆಯ ವನ್ಯಪ್ರೇಮಿಗಳಿಗೆ ಈಗ ಖುಷಿಯೋ ಖುಷಿ. ಕಾರಣವಿಷ್ಟೆ. ಅಪರೂಪಕ್ಕೆ ಕಾಣ ಸಿಗುವ ಹುಲಿಗಳು ಈಗ ಮರಿಗಳ ಜತೆ ದರ್ಶನ ನೀಡುತ್ತಿವೆ. ಬಂಡೀಪುರ ಬಿಟ್ಟು ಮಧುಮಲೈ ಅರಣ್ಯಕ್ಕೆ ಹೋಗಿದ್ದ ಸುಂದರಿ 18 ತಿಂಗಳ ಬಳಿಕ ಮರಿಯ ಜತೆ ಮರಳಿ ಬಂದಿದ್ದಾಳೆ. ಇತ್ತ ನಾಗರಹೊಳೆಯ ಅಂತರ ಸಂತೆ ವಲಯದಲ್ಲಿ ಎರಡು ಹುಲಿಗಳು ನಾಲ್ಕು-, ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ತಾಯಿ ಮತ್ತು ಮರಿಗಳ ಜತೆ ಎರಡು ಗಂಡು ಹುಲಿಗಳೂ ಸೇರಿಕೊಂಡಿವೆ. ಸಫಾರಿ ಪ್ರಿಯರು ಅತ್ಯಪರೂಪದ ಈ ಗ್ರೂಪ್‌ ಫೋಟೊಗಳನ್ನು ಕ್ಲಿಕ್ಕಿಸಿ ಖುಷಿಪಡುತ್ತಿದ್ದಾರೆ.

ಎಚ್.‌ ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಡಿಸೆಂಬರ್‌ 10ರ ಬೆಳಿಗ್ಗೆ ವನ್ಯಜೀವಿ ಸಫಾರಿಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ದರ್ಶನವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎರಡು ಹೆಣ್ಣು ಹುಲಿಗಳು ತಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ಇದೇ ಪ್ರಥಮ ಬಾರಿ ಎಂದು ಅಂತರಸಂತೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಎಸ್.ಎಸ್. ಸಿದ್ದರಾಜು ಸಂತಸ ಹಂಚಿಕೊಂಡಿದ್ದಾರೆ.


ಎಚ್.‌ಡಿ.ಕೋಟೆಯ ತಾರಕ ಹಿನ್ನೀರು ವ್ಯಾಪ್ತಿಯಲ್ಲಿ ರಸೂಲ್ ಲೈನ್ ಫೀಮೇಲ್ ಹೆಸರಿನಿಂದ ಗುರುತಿಸಿಕೊಂಡಿರುವ ಹೆಣ್ಣು ಹುಲಿಯು 11 ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಹೆಣ್ಣು ಹುಲಿಗೆ ಸೀಳುತುಟಿ ಎಂಬ ಗಂಡುಹುಲಿ ಜೋಡಿಯಾಗಿದೆ. ಕಳೆದ ಅಕ್ಟೋಬರ್ 12ರಂದು ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಈ ಹೆಣ್ಣು ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ವನ್ಯಪ್ರಿಯರಿಗೆ ದರ್ಶನ ನೀಡಿತ್ತು.

ಅಂತರ ಸಂತೆಯ ಕಬಿನಿ ಹಿನ್ನೀರು ಪ್ರದೇಶದ ವನ್ಯಪ್ರಿಯರು ಬ್ಯಾಕ್ ವಾಟರ್ ಫೀಮೇಲ್ ಎಂದು ಕರೆಯುತ್ತಿರುವ ಹೆಣ್ಣು ಹುಲಿಯು ಆರು ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಗೆ ಈಗ ಟೈಗರ್ ಟ್ಯಾಂಕ್ ಗಂಡುಹುಲಿ ಜೋಡಿಯಾಗಿದೆ. ಈ ಹುಲಿಯೂ ಇತ್ತೀಚೆಗೆ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದೆ.

ಇನ್ನು ಬಂಡೀಪುರದ ರಾಯಭಾರಿ ಎಂದು ಕರೆಸಿಕೊಳ್ಳುತ್ತಿದ್ದ ” ಪ್ರಿನ್ಸ್‌ʼ ಹುಲಿಯ ಮರಣದ ಬಳಿಕ ಹುಲಿ ದರ್ಶನ ವಿರಳವಾಗಿತ್ತು. ಈ ಕೊರತೆಯನ್ನು ನೀಗಿಸಿದ್ದು ಸುಂದರಿ. ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದ್ದ ಸುಂದರಿ ಸುಮಾರು ಎರಡು ವರ್ಷಗಳ ಕಾಲ ಆಗಾಗ ಸಫಾರಿ ಹಾದಿಯಲ್ಲಿ ದರ್ಶನ ಕೊಡುತ್ತಿದ್ದಳು. ಇದ್ದಕ್ಕಿದ್ದಂತೆ ಅದೇನಾಯಿತೋ ಗೊತ್ತಿಲ್ಲ. ಸುಂದರಿ ತನ್ನ ಮರಿಗಳನ್ನು ತೊರೆದು ಮಧುಮಲೈ ಅರಣ್ಯಕ್ಕೆ ವಾಸ್ತವ್ಯ ಬದಲಿಸಿದ್ದಳು. ಈ ಮಧ್ಯೆ ಕೆಕ್ಕನಹಳ್ಳಿ ಸಮೀಪ ಮಾಯಾರ್ ರಾಣಿ ಎಂಬ ಹುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಇತ್ತೀಚೆಗೆ ಆಕೆ ಕಾಣಿಸುತ್ತಿಲ್ಲ.

ಈ ಮಧ್ಯೆ 18 ತಿಂಗಳ ಬಳಿಕ ಸುಂದರಿ ತನ್ನ ಮರಿ ಜತೆ ಬಂಡೀಪುರಕ್ಕೆ ಮರಳಿದ್ದಾಳೆ. ಮೊನ್ನೆ ತನ್ನ ಕಂದನಿಗೆ ರಸ್ತೆ ದಾಟುವ ಬಗೆಯನ್ನು ಹೇಳಿಕೊಡುತ್ತಿದ್ದ ಸುಂದರಿ ಸಫಾರಿಗೆ ಹೊರಟವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಅವಳದು ಈಗಲೂ ಅದೇ ನಿರ್ಭೀತ, ಸ್ವಚ್ಛಂದ ನೋಟ. ಆರೇಳು ತಿಂಗಳು ಪ್ರಾಯದ ಮರಿ ಜತೆ ಸುಂದರಿ ವಾಕ್‌ ಮಾಡುತ್ತಿದ್ದರೆ ಬಂಡೀಪುರದ ಸೌಂದರ್ಯ ಇಮ್ಮಡಿಸಿದಂತೆ ಕಾಣುತ್ತಿದೆ. ಒಟ್ಟಾರೆಯಾಗಿ ನಾಗರಹೊಳೆ ಮತ್ತು ಬಂಡೀಪುರಕ್ಕೆ ಸಫಾರಿಗೆ ಬಂದರೆ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಡಬಲ್‌ ಧಮಾಕಾ ಗ್ಯಾರಂಟಿ..

andolanait

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

3 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

11 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

11 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

12 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

14 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

14 hours ago