ಮೈಸೂರು

ಹುಲಿ ಉಪಟಳ; ಗ್ರಾಮಸ್ಥರ ತಳಮಳ

ಬಳ್ಳೂರಹುಂಡಿ ಗ್ರಾಮಸ್ಥರಿಗೆ ಪರಿಹಾರ ಮರೀಚಿಕೆ

ಶ್ರೀನಿವಾಸ ಟಿ.ಎಲ್.

ಮೈಸೂರು: ಹುಲಿ ದಾಳಿಯಿಂದ ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂಜನಗೂಡು ತಾಲ್ಲೂಕಿನ ಬಳ್ಳೂರು ಹುಂಡಿಯ ದನಗಾಹಿ ಸ್ವಾಮಿ ದಾಸಯ್ಯ (೫೪) ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ವಾಮಿ ಮೇಲಿನ ದಾಳಿ ಬಳಿಕ ಅವರ ಹಸುವಿನ ಮೇಲೆ ದಾಳಿ ಮಾಡಿರುವ ಹುಲಿ ಅದನ್ನು ಕೊಂದು ಮಾಂಸವನ್ನು ಭಕ್ಷಿಸಿದೆ.

ಹಾಡಹಗಲೇ ನಡೆದ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬಳ್ಳೂರು ಹುಂಡಿಗೆ ಮಂಗಳವಾರ ಭೇಟಿ ನೀಡಿದ ” ಆಂದೋಲನʼ ತಂಡದೊಂದಿಗೆ ಮಾತನಾಡಿದ ಗ್ರಾಮಸ್ಥರು “” ಅರಣ್ಯ ಇಲಾಖೆ ನಮಗೆ ಬೇರೆ ಕಡೆ ಜಾಗ ನೀಡಲಿ. ನಾವು ಅಲ್ಲಿಗೆ ಹೋಗಿ ಬದುಕುತ್ತೇವೆ. ಇಲ್ಲಿ ನಮ್ಮ ಜೀವಕ್ಕೆ ರಕ್ಷಣೆಯಿಲ್ಲʼʼ ಎಂದು ಅಳಲು ತೋಡಿಕೊಂಡರು. ಹುಲಿಯು ಹಸು “ಪೂಜಾʼಳ ಕಾಲು ಮತ್ತು ತಲೆ ಭಾಗ ಬಿಟ್ಟು ಪೂರ್ಣವಾಗಿ ಕಬಳಿಸಿದ್ದು ಕಂಡುಬಂತು. ಅದರ ಎರಡು ತಿಂಗಳ ಗಂಡು ಕರು ಅನಾಥವಾಗಿದೆ.

ಹುಲಿ ದಾಳಿಗೆ ತುತ್ತಾಗಿರುವ ಸ್ವಾಮಿ ದಾಸಯ್ಯ ಖಾಸಗಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ” ಆಂದೋಲನ ಡಿಜಿಟಲ್‌ ʼ ಗೆ ದೃಢಪಡಿಸಿವೆ.

“” ತಿಂಗಳಿಗೆ ಮೂರ್ನಾಲ್ಕು ರಾಸುಗಳನ್ನು ಹುಲಿ ಕಬಳಿಸುತ್ತಾ ಬಂದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡಿಲ್ಲ. ರೈತರು ಆನೆ, ಕಡವೆ,ಜಿಂಕೆ, ಚಿರತೆ,ಕಾಡುಹಂದಿ,ಮುಳ್ಳುಹಂದಿ,ನವಿಲುಗಳೂ ಹೊಲಕ್ಕೆ ಬಂದು ನಾವು ಬೆಳೆದ ಕೃಷಿಯನ್ನು ನಾಶಪಡಿಸುತ್ತಿವೆ. ಲಕ್ಷಗಟ್ಟಲೆ ಬೆಳೆನಾಶವಾದರೂ ಅರಣ್ಯ ಇಲಾಖೆ ಕೇವಲ ಎರಡು, ಮೂರು ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ನಮಗೆ ಪರಿಹಾರಕ್ಕಿಂತಲೂ ವನ್ಯಪ್ರಾಣಿ ಜನವಸತಿಯತ್ತ ಬರದಂತೆ ತಡೆಗಟ್ಟಲಿʼʼ ಎಂದು ಕೃಷಿಕರು ಅಳಲು ತೋಡಿಕೊಂಡರು.

“” ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುತ್ತಿರುವುದು ಹುಲಿದಾಳಿಗೆ ಕಾರಣವಾಗುತ್ತಿದೆ. ಕೆಲವು ರೈತರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದು ದಾಖಲೆ ಇಲ್ಲದ ಜಾಗದಲ್ಲಿ ಫಸಲು ನಷ್ಟವಾದರೆ ಪರಿಹಾರ ಅಸಾಧ್ಯ. ಈವರೆಗೆ ಸಾಧ್ಯವಾದಷ್ಟೂ ಶೀಘ್ರ ಪರಿಹಾರ ನೀಡಲಾಗಿದೆ. ಕೆಲವರಿಗೆ ಪರಿಹಾರ ವಿತರಣೆ ಪ್ರಗತಿಯಲ್ಲಿದೆ. ಸ್ವಾಮಿ ದಾಸಯ್ಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಿಸಲಾಗುವುದು. ಅವರ ಆಸ್ಪತ್ರೆ ಖರ್ಚನ್ನು ಅರಣ್ಯ ಇಲಾಖೆ ಭರಿಸಲಿದೆ.ʼʼ ಎಂದು ಆರ್‌ ಎಫ್‌ ಒ ಕೆ.ಆರ್.ನಾರಾಯಣ ಆಂದೋಲನ ಡಿಜಿಟಲ್‌ ಗೆ ಮಾಹಿತಿ ನೀಡಿದ್ದಾರೆ.

10 ಮಂದಿ ಅರಣ್ಯ ಸಿಬ್ಬಂದಿಯ ತಂಡ ಮಂಗಳವಾರದಿಂದಲೇ ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ. ಬುಧವಾರದಿಂದ ಹುಲಿಯ ಚಲನ ವಲನ ವೀಕ್ಷಣೆಗೆ ಡ್ರೋಣ್ ಬಳಸಿಕೊಳ್ಳಲಾಗುವುದು. ಹುಲಿಯನ್ನು ಸೆರೆ ಹಿಡಿಯಲು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅನುಮತಿ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

andolanait

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

1 hour ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

1 hour ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

1 hour ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

2 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

2 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

2 hours ago