ಮೈಸೂರು

ಮೈಸೂರು | ಕ್ರಿಸ್ತಶಕ 948ರ ಗಂಗಲ ಕಾಲದ ಶಾಸನ ಪತ್ತೆ

ಮೈಸೂರು : ಕ್ರಿಸ್ತಶಕ 948ರ ಗಂಗರ ಕಾಲದ ಅಪ್ರಕಟಿತ ಶಾಸನವು ನಗರದ ನಾಡನಹಳ್ಳಿಯಲ್ಲಿ ಪತ್ತೆಯಾಗಿದೆ. ಪುರಾತತ್ವಜ್ಞ ಪ್ರೊ. ರಂಗರಾಜು ಹಾಗೂ ಪುರಾತತ್ವ ಸಂಶೋಧಕ ಡಾ. ಶಶಿಧರ ತಂಡವು ಈ ಪತ್ತೆ ಕಾರ್ಯವನ್ನು ನಡೆಸಿದೆ.

ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರದಿಂದ ಪೂರ್ವ ದಿಕ್ಕಿಗೆ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ನಾಡನಹಳ್ಳಿಯ ಪ್ರವೇಶದ್ವಾರದ ಬಲದ್ವಾರದಲ್ಲಿ ಗಂಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಮಹಾಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯದ ಆವರಣ ಗೋಡೆಯ ಒಳಗೆ ಬಲಪಾರ್ಶ್ವಾದಲ್ಲಿ ಪೂರ್ವ ದಿಕ್ಕಿಗೆ ಮುಖಮಾಡಿ ನಿಲ್ಲಿಸಿರುವ ಗಂಗ ದೊರೆ ಇಮ್ಮಡಿ ಬೂತುಗನ ಕಾಲದ ಶಾಸನವನ್ನು ಕಂಡುಹಿಡಿಯಲಾಗಿದೆ. ಇದು ಅಪ್ರಕಟಿತ ಶಾಸನವಾಗಿದ್ದು, ಎರಡು ಅಡಿ ಅಗಲ ಹಾಗೂ ಎರಡುವರೆ ಅಡಿಗಳಷ್ಟು ಎತ್ತರವಾದ ‘ಬಿಳಿಕಣಶಿಲೆಯಲ್ಲಿ’ ಕೆತ್ತಲ್ಪಟ್ಟಿದ್ದು ಆರು ಸಾಲುಗಳನ್ನು ಹೊಂದಿದೆ. ಇದು ಇಂದಿಗೆ ಸರಿಸುಮಾರು ೧,೦೭೬ ವರ್ಷಗಳಷ್ಟು ಪ್ರಾಚೀನವಾದ ‘ಕನ್ನಡ ಭಾಷೆ ಮತ್ತು ಲಿಪಿ’ಯಲ್ಲಿ ಬರೆಯಲ್ಪಟ್ಟಿರುವ ಶಾಸನವಾಗಿದೆ ಎಂದು ತಂಡ ಹೇಳಿದೆ.

ಇದನ್ನು ಓದಿ: ನ.11ಕ್ಕೆ ಆರ್.ಎಸ್.ಎಸ್ ವಿರುದ್ಧ ʼದಸಂಸ ಪ್ರತಿರೋಧ ಸಮಾವೇಶʼ

ಶಾಸನದ ಸಾರಾಂಶ ಹೀಗಿದೆ….
ಕ್ರಿ.ಶ. 948ರ ಕಾಲದ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕೆತ್ತಲ್ಪಟ್ಟಿದ್ದು, ಆರು ಸಾಲುಗಳನ್ನು ಹೊಂದಿದೆ. ಗಂಗ ಸಾಮ್ರಾಜ್ಯದ ದೊರೆ ಎರಡನೇ ಬೂತುಗನ ಆಳ್ವಿಕೆಯ ಸಂದರ್ಭದಲ್ಲಿ ಬೂತುಗನ ಅಂಗರಕ್ಷಕನಾದ ತೊರೆಯ(ಬೆಸ್ತ) ಜನಾಂಗದ ಮಾರೆಮ್ಮಾ ಎಂಬುವನು ತೆರಿಗೆಯಿಲ್ಲದೆ ಹೂತೋಟವನ್ನು ದೇವಾಲಯಕ್ಕೆ ದಾನ ನೀಡಿ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮದ ಮುಖ್ಯಸ್ಥನಾದ ವಿಜಕೇತ ಗಾವುಂಡನಿಗೆ ವಹಿಸಿದ್ದಿರಬಹುದು. ಈ ಶಾಸನ ತ್ರುಟಿತಗೊಂಡಿರುವುದರಿಂದ ಶಾಸನದ ಪೂರ್ಣಪಾಠವನ್ನು ನಿಖರವಾಗಿ ಹೇಳಲಾಗುವುದಿಲ್ಲ.

ಆದರೆ ‘ವಿಜಕೇತ ಗಾವುಂಡ ದಿಕ್ಕು’ ಎಂದು ಶಾಸನದಲ್ಲಿ ಉಲ್ಲೇಖವಿರುವುದರಿಂದ ತೋಟದ ನಿರ್ವಹಣೆಯನ್ನು ಗ್ರಾಮದ ಮುಖ್ಯಸ್ಥನಾದ ವಿಜಕೇತ ಗಾವುಂಡನಿಗೆ ವಹಿಸಿದ್ದಿರಬಹುದು ಎಂದು ಹೇಳಬಹುದಾಗಿದೆ. ಈ ಶಾಸನದಲ್ಲಿ ದೇವಾಲಯದ ಉಬ್ಬುಚಿತ್ರವನ್ನು ಸಾಂಕೇತಿಕವಾಗಿ ಕೆತ್ತಲಾಗಿದ್ದು ಈ ಉಬ್ಬುಚಿತ್ರವು ದೇವಾಲಯಕ್ಕೆ ಸಂಬಂಧಿಸಿದ ದಾನ ಶಾಸನವೆಂಬುದನ್ನು ಖಚಿತಪಡಿಸುತ್ತದೆ. ಆದರೆ ಯಾವ ದೇವಾಲಯಕ್ಕೆ ಸಂಬಂಧಿಸಿದ ದಾನಶಾಸನ ಎಂಬ ಮಾಹಿತಿ ಇಲ್ಲ. ಶಾಸನ ದೊರೆತಿರುವ ಮಹಾಲಿಂಗೇಶ್ವರ ದೇವಾಲಯದಲ್ಲಿರುವ ಶಿವಲಿಂಗವು ಗಂಗರ ವಾಸ್ತುಶೈಲಿಯಲ್ಲಿರುವುದರಿಂದಲೂ ಹಾಗೂ ಶಾಸನವೂ ಗಂಗರ ಕಾಲದ್ದಾಗಿರುವುದರಿಂದಲೂ ಇದು ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ದಾನಶಾಸನ ಎಂದು ತಿಳಿಯಬಹುದಾಗಿದೆ. ಈ ಶಾಸನದ ಪಾಠದ ಕೊನೆಯಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಉಬ್ಬುಶಿಲ್ಪವನ್ನು ಕೆತ್ತಲಾಗಿದ್ದು, ಇದು ಈ ಶಾಸನವನ್ನು ಹಾಳು/ನಾಶ ಮಾಡಿದವರಿಗೆ ಗೋವನ್ನು ಕೊಂದ ಪಾಪ ಬರುತ್ತದೆ ಎಂಬ ಶಾಪಾಶಯದ ಸಂಕೇತವಾಗಿದೆ.

ಆಂದೋಲನ ಡೆಸ್ಕ್

Recent Posts

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…

49 mins ago

ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’

ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…

2 hours ago

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

8 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

8 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

8 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

8 hours ago