ಮೈಸೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿಸಹಸ್ರಾರು ಜಾನುವಾರುಗಳಲ್ಲಿಕಾಣಿಸಿಕೊಂಡಿರುವ ಚರ್ಮ ಗಂಟು ರೋಗದಿಂದ ಹಾಲಿನ ಉತ್ಪಾದನೆ ಇಳಿಕೆಯಾಗುವ ಆತಂಕ ಎದುರಾಗಿದೆ.
ರಾಜ್ಯದಲ್ಲಿಸುಮಾರು 3,076 ಜಾನುವಾರುಗಳಲ್ಲಿ ರೋಗ ಪತ್ತೆಯಾಗಿದೆ. ಈ ಕಾಯಿಲೆ ಹರಡದಂತೆ ತಡೆಯಲು ಈಗಾಗಲೇ 5 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 25 ಲಕ್ಷ ಲಸಿಕೆ ಸಂಗ್ರಹವಿದ್ದು, ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಪೂರೈಸಲಾಗುವುದು. ಮೈಸೂರು ಜಿಲ್ಲೆಯ ಸರಗೂರು, ಕೆ ಆರ್ ನಗರ, ಟಿ ನರಸೀಪುರ ದಲ್ಲಿ ಮಾತ್ರ ಗಂಟು ರೋಗ ಹಸು ಇದ್ದು ಅದಕ್ಕೆ ಲಸಿಕೆಯನ್ನು ನೀಡಲಾಗಿದೆ.ಮತ್ತು ಮರಣ ಹೊಂದಿದ ಹಸುವಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಕೂಡ ಸಲ್ಲಿಸಲಾಗಿದೆ. ಸದ್ಯದ ಪರಿಸ್ಥಿತಿಗೆ ಉಳಿದ ಯಾವುದೇ ತಾಲ್ಲೂಕಿನಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂದು ಇಲಾಖೆಯ ಉಪ ನಿರ್ದೇಶಕ ಡಾ. ಬಿ ಎನ್ ಷಡಕ್ಷರ ಮೂರ್ತಿ ʼಆಂದೋಲನ ಪತ್ರಿಕೆಗೆʼತಿಳಿಸಿದರು.
ರೋಗ ಹರಡುವುದು ಹೇಗೆ : ಈ ವರ್ಷ ಮಳೆ ಹೆಚ್ಚಾದ ಪರಿಣಾಮ ನೊಣ, ಸೊಳ್ಳೆ ಹಾಗೂ ಉಣ್ಣೆ ಹುಳಗಳ ಉತ್ಪತ್ತಿ ಹೆಚ್ಚಾಗಿದೆ. ಇವು ಅನ್ಯ ರಾಜ್ಯಗಳಿಂದ ಹಾರಿ ಬಂದು ಈ ಕಾಯಿಲೆಯನ್ನು ಹರಡಿವೆ. ಅದೂ ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್ನ ಗಡಿ ಜಿಲ್ಲೆಗಳಲ್ಲಿಈ ಕಾಯಿಲೆ ಹೆಚ್ಚು ಕಾಣಿಸಿಕೊಂಡಿದೆ ಇದರಿಂದ ಮುನ್ನೆಚ್ಚ್ರಿಕೆ ಕ್ರಮವಹಿಸಿದ್ದಲ್ಲಿ ಈ ರೋಗ ಹರಡುವುದಿಲ್ಲ
ಮೂರು ವರ್ಷಕ್ಕೊಮ್ಮೆ ಬರುವ ಗಂಟು ರೋಗ : ಒಮ್ಮೆ ಲಸಿಕೆ ಹಾಕಿದರೆ ಮೂರು ವರ್ಷದವರೆಗೆ ಚರ್ಮಗಂಟು ಕಾಯಿಲೆ ಬರದಂತೆ ತಡೆಯಬಹುದಾದ ರೋಗ ನಿರೋಧಕ ಶಕ್ತಿ ಹೊಂದಿದೆ. ಆದರೆ, ಕಾಯಿಲೆ ಬಂದ ಹಸುವಿಗೆ ಈ ಲಸಿಕೆ ಹಾಕಬಾರದು. ಏಕೆಂದರೆ ಒಂದು ಬಾರಿ ಕಾಯಿಲೆ ಬಂದರೆ ಆ ಹಸುವಿಗೆ ಮತ್ತೆ ಮೂರು ವರ್ಷಗಳ ಕಾಲ ಆ ಕಾಯಿಲೆ ಮರುಕಳುಹಿಸುವುದಿಲ್ಲ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…