ಮೈಸೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿಸಹಸ್ರಾರು ಜಾನುವಾರುಗಳಲ್ಲಿಕಾಣಿಸಿಕೊಂಡಿರುವ ಚರ್ಮ ಗಂಟು ರೋಗದಿಂದ ಹಾಲಿನ ಉತ್ಪಾದನೆ ಇಳಿಕೆಯಾಗುವ ಆತಂಕ ಎದುರಾಗಿದೆ.
ರಾಜ್ಯದಲ್ಲಿಸುಮಾರು 3,076 ಜಾನುವಾರುಗಳಲ್ಲಿ ರೋಗ ಪತ್ತೆಯಾಗಿದೆ. ಈ ಕಾಯಿಲೆ ಹರಡದಂತೆ ತಡೆಯಲು ಈಗಾಗಲೇ 5 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 25 ಲಕ್ಷ ಲಸಿಕೆ ಸಂಗ್ರಹವಿದ್ದು, ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಪೂರೈಸಲಾಗುವುದು. ಮೈಸೂರು ಜಿಲ್ಲೆಯ ಸರಗೂರು, ಕೆ ಆರ್ ನಗರ, ಟಿ ನರಸೀಪುರ ದಲ್ಲಿ ಮಾತ್ರ ಗಂಟು ರೋಗ ಹಸು ಇದ್ದು ಅದಕ್ಕೆ ಲಸಿಕೆಯನ್ನು ನೀಡಲಾಗಿದೆ.ಮತ್ತು ಮರಣ ಹೊಂದಿದ ಹಸುವಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಕೂಡ ಸಲ್ಲಿಸಲಾಗಿದೆ. ಸದ್ಯದ ಪರಿಸ್ಥಿತಿಗೆ ಉಳಿದ ಯಾವುದೇ ತಾಲ್ಲೂಕಿನಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂದು ಇಲಾಖೆಯ ಉಪ ನಿರ್ದೇಶಕ ಡಾ. ಬಿ ಎನ್ ಷಡಕ್ಷರ ಮೂರ್ತಿ ʼಆಂದೋಲನ ಪತ್ರಿಕೆಗೆʼತಿಳಿಸಿದರು.
ರೋಗ ಹರಡುವುದು ಹೇಗೆ : ಈ ವರ್ಷ ಮಳೆ ಹೆಚ್ಚಾದ ಪರಿಣಾಮ ನೊಣ, ಸೊಳ್ಳೆ ಹಾಗೂ ಉಣ್ಣೆ ಹುಳಗಳ ಉತ್ಪತ್ತಿ ಹೆಚ್ಚಾಗಿದೆ. ಇವು ಅನ್ಯ ರಾಜ್ಯಗಳಿಂದ ಹಾರಿ ಬಂದು ಈ ಕಾಯಿಲೆಯನ್ನು ಹರಡಿವೆ. ಅದೂ ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್ನ ಗಡಿ ಜಿಲ್ಲೆಗಳಲ್ಲಿಈ ಕಾಯಿಲೆ ಹೆಚ್ಚು ಕಾಣಿಸಿಕೊಂಡಿದೆ ಇದರಿಂದ ಮುನ್ನೆಚ್ಚ್ರಿಕೆ ಕ್ರಮವಹಿಸಿದ್ದಲ್ಲಿ ಈ ರೋಗ ಹರಡುವುದಿಲ್ಲ
ಮೂರು ವರ್ಷಕ್ಕೊಮ್ಮೆ ಬರುವ ಗಂಟು ರೋಗ : ಒಮ್ಮೆ ಲಸಿಕೆ ಹಾಕಿದರೆ ಮೂರು ವರ್ಷದವರೆಗೆ ಚರ್ಮಗಂಟು ಕಾಯಿಲೆ ಬರದಂತೆ ತಡೆಯಬಹುದಾದ ರೋಗ ನಿರೋಧಕ ಶಕ್ತಿ ಹೊಂದಿದೆ. ಆದರೆ, ಕಾಯಿಲೆ ಬಂದ ಹಸುವಿಗೆ ಈ ಲಸಿಕೆ ಹಾಕಬಾರದು. ಏಕೆಂದರೆ ಒಂದು ಬಾರಿ ಕಾಯಿಲೆ ಬಂದರೆ ಆ ಹಸುವಿಗೆ ಮತ್ತೆ ಮೂರು ವರ್ಷಗಳ ಕಾಲ ಆ ಕಾಯಿಲೆ ಮರುಕಳುಹಿಸುವುದಿಲ್ಲ.
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…
ಬೆಳಗಾವಿ: ಬೆಳಗಾವಿ ಅಧಿವೇಶನದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು 377 ಪ್ರಕರಣಗಳ ಪೈಕಿ…
ಎಚ್.ಡಿ.ಕೋಟೆ: ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಿಸಲು ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಕಾಡಂಚಿನ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಗಡಿಭಾಗದ…
ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…