ಮಹಾನಗರ ಪಾಲಿಕೆ ವಲಯ ಕಚೇರಿ-1 ಮತ್ತು 2ರಲ್ಲಿ ಇ-ಖಾತೆ ಹಂಚಿಕೆ
ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾನಗರ ಪಾಲಿಕೆ ಕಚೇರಿ-1 ಮತ್ತು 2ರಲ್ಲಿ ಶಾಸಕ ಶ್ರೀವತ್ಸ ಅವರು ೨೫೦ಕ್ಕೂ ಹೆಚ್ಚು ಮಂದಿಗೆ ಇ-ಖಾತೆ ಪತ್ರ ಹಂಚಿಕೆ ಮಾಡಿದರು.
ನಗರದ ವಲಯ ಕಚೇರಿ-1ರಲ್ಲಿ ಇ-ಖಾತೆ ಹಂಚಿಕೆ ಮಾಡಿ ಮಾತನಾಡಿದ ಅವರು, ಆಯುಕ್ತ ತನ್ವೀರ್ ಅವರು ಆಯುಕ್ತರಾಗಿ ಬಂದ ನಂತರ ಸಾರ್ವಜನಿಕರಿಗೆ ಇ-ಖಾತೆ ಹಂಚಿಕೆಯ ವೇಗ ಹೆಚ್ಚಾಗಿದ್ದು, ವಲಯ ಕಚೇರಿಗಳ ಆಯುಕ್ತರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟು ಖಾತೆ ವಿತರಣೆ ಮಾಡಿಸುತ್ತಿರುವುದರಿಂದ ರಾಜ್ಯದಲ್ಲಿ ಮೈಸೂರು ಜಿಲ್ಲೆ ಎರಡನೇ ಸ್ಥಾನ ಪಡೆದು ಕೊಂಡಿದೆ ಎಂದು ಹೇಳಿದರು.
ಆಯುಕ್ತ ತನ್ವೀರ್ ಅವರು ಮಾತನಾಡಿ, ವಲಯ ಕಚೇರಿ-1ರ ಸಹಾಯಕ ಆಯುಕ್ತರು 7/10 ದಿನಗಳಲ್ಲಿ ಇ-ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ದಾಖಲೆ ನೀಡಿ ಸಾರ್ವಜನಿಕರು ಸಹಕರಿಸಿ. ಈಗಾಗಲೇ 45 ದಿನಗಳಲ್ಲಿ 9 ಸಾವಿರ ಇ-ಖಾತೆ ವಿತರಿಸಲಾಗಿದೆ. ಈ ವಲಯದಲ್ಲಿ ಪ್ರತೀ ತಿಂಗಳು 800/900 ಖಾತೆ ವಿತರಿಸುವ ಮೂಲಕ ಗುರಿ ಮುಟ್ಟಬೇಕಿದೆ. ಸಾರ್ವಜನಿಕರು ದಾಖಲೆ ನೀಡಿ ಪಡೆದುಕೊಳ್ಳಿ ಎಂದರು
ಸ್ವಚ್ಛ ಸರ್ವೇಕ್ಷಣ್ ನಡೆಯುತ್ತಿದೆ. ಈ ಸಾಲಿನಲ್ಲಿ ಮೈಸೂರು ನಗರ ೧ನೇ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಿಮ್ಮ ದೂರವಾಣಿಗಳ ಮೂಲಕ ಈ ವಿಚಾರವಾಗಿ ಹೆಚ್ಚು ಪ್ರಚಾರ ಮಾಡುವ ಮೂಲಕ ಸಹಕರಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಆಯುಕ್ತ(ಕಂದಾಯ) ಸೋಮಶೇಖರ್, ವಲಯ-೧ರ ಸಹಾಯಕ ಆಯುಕ್ತ ಮನನ ಮಂಜುನಾಥ ರೆಡ್ಡಿ, ಕಂದಾಯಾಧಿಜಾರಿ ಸ್ವರ್ಣಲತಾ, ಸಹಾಯಕ ಕಂದಾಯಾಧಿಕಾರಿ ಪ್ರತಾಪ್ ಮುಂಯಾದವರು ಉಪಸ್ಥಿತರಿದ್ದರು.
ವಲಯ ಕಚೇರಿ -2ರಲ್ಲಿ 100 ಇ-ಖಾತೆ ವಿತರಣೆ:
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರಲ್ಲಿ ಶಾಸಕ ಶ್ರೀವತ್ಸ ಈ ಭಾಗದ 100 ಮಂದಿ ಸಾರ್ವಜನಿಕರಿಗೆ ಇ- ವಿತರಿಸಿದರು.
ನಂತರ ಮಾತನಾಡಿದ ಅವರು, ಅತ್ಯಂತ ಸಾಧಾರಣವಾದ ನಿಮ್ಮಲ್ಲಿ ಈಗಾಗಲೇ ಇರುವ ದಾಖಲಾತಿಗಳಾದ ಟೈಟಲ್ ಡೀಡ್, ರಿಜಿಸ್ಟ್ರೇಷನ್ ಪ್ರತಿ, ಇಸಿ, ಆಸ್ತಿಯ ಛಾಯಾಚಿತ್ರ, ಪಾಸ್ ಪೋರ್ಟ್ ಫೋಟೋ, ತೆರಿಗೆ ಪಾವತಿಸಿರುವ ರಸೀದಿ, ಐಡಿ ದಾಖಲೆ ಇವಿಷ್ಟು ದಾಖಲೆ ನೀಡಿ ಇ-ಖಾತೆ ಪಡೆದುಕೊಳ್ಳಿ ಎಂದು ಹೇಳಿದರು.
ಈ ವೇಳೆ ವಲಯ ಕಚೇರಿ-2ರ ವಲಯ ಆಯುಕ್ತ ನಾಗರಾಜು, ಸಹಾಯಕ ಕಂದಾಯಾಧಿಕಾರಿ ಬೆಟ್ಟಸಾಮಯ್ಯ, ಜಂದಾಯ ನಿರೀಕ್ಷಕ ಡಿ.ಎಸ್. ಅಶೋಕ್ ಪಾಲಿಕೆ ಮಾಜಿ ಸದಸ್ಯೆ ಚಂಪಕ ಮುಂತಾದವರು ಉಪಸ್ಥಿತರಿದ್ದರು.
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…
ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…