ಮೈಸೂರು: 15 ದಿನಗಳ ಕಾಲ ಸಮಯ ಕೊಡುತ್ತೇನೆ, ತಾಕತ್ತು, ಧಮ್ ಇದ್ರೆ ನನ್ನ ವಿರುದ್ಧ ಐಟಿ, ಇಡಿ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಕೋತ್ವಾಲ್ ನ ಮೂಲವೇ ಚಿಕ್ಕಮಗಳೂರು, ಸಿ.ಟಿ ರವಿ ಕೋತ್ವಾಲ್ ನ ಸಂತತಿ.,ನಾನು ಗ್ರಾಮ ಪಂಚಾಯಿತಿ ಚುನಾವಣೆ ನಿಂತು ಗೆದ್ದಿಲ್ಲ ನಿಜಾ. ವಿಶ್ವಗುರು ಮೋದಿ ಯಾವ ಚುನಾವಣೆ ಗೆದ್ದು ಗುಜರಾತ್ ನ ಸಿಎಂ ಆಗಿದ್ದು? ಸಿಟಿ ರವಿ ಹಾಗೆ ನಾನು ಜಾತಿ, ಹಣ ಬಲದಿಂದ ಚುನಾವಣೆ ಎದುರಿಸುವ ಕ್ರಿಮಿನಲ್ ಅಲ್ಲ ಎಂದು ಸಿಟಿ ರವಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಜೀವನದಲ್ಲಿ ಎಲ್ಲಾದ್ರೂ ಎಫ್ ಐ ಆರ್ ಆಗಿದ್ರೆ , ನಾನು ನನ್ನ ರಾಜಕೀಯ ಜೀವನವನ್ನೇ ಬಿಡ್ತೇನೆ. ಸಿಟಿ ರವಿ ಕೋಟ್ಯಾಧೀಶ, ಸಿ ಟಿ ರವಿ ಎಂ ಎಲ್ ಎ ಆದಾಗ ಎಷ್ಟು ದುಡ್ಡು ಇತ್ತು, ಇವಾಗ ಎಷ್ಟಿದೆ ಅಂತ ಲೆಕ್ಕ ಕೊಡ್ಲಿ ಎಂದು ಸವಾಲು ಹಾಕಿದರು.ಸಿ ಟಿ ರವಿ ಆಲ್ದಳ್ಳಿಯಿಂದ ಬಂದವರು. ಅವರು, ರಸ್ತೆ ಮೇಲೆ ಲಿಫ್ಟ್ ಗಾಗಿ ಕಾಯ್ತಿದ್ದ ಕಾಲದಲ್ಲೇ ನನ್ನ ಬಳಿ ಸ್ಕೂಟರ್ ಇತ್ತು. ಅವರ ಭಾಷೆ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ. ಕುಡಿದ ನಶೆಯಲ್ಲಿ ಕಾರ್ ಓಡಿಸಿ ಅಮಾಯಕ ಜನರನ್ನು ಕೊಂದವನಲ್ಲ ನಾನು. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಏನು ಅಂತಾ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನವದೆಹಲಿ: ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್ಗೆ…
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಜುಲೈನಲ್ಲಿ…
ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…
ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…
ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…
ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…