ಮೈಸೂರು

ಸಂಚಾರಿ ಪೊಲೀಸರಿಗೆ ಟೆನ್ಸನ್: ಮೈಸೂರು ಖಾಸಗಿ ಆಂಬ್ಯುಲೆನ್ಸ್ ಗಳಿಂದ ಪರಿಸ್ಥಿತಿ ದುರ್ಬಳಕೆ

ಮೈಸೂರು : ಸರಕಾರದ 108 ಆಂಬ್ಯುಲೆನ್ಸ್ ಗಳನ್ನು ನಿರ್ವಹಿಸುವುದು ಕಷ್ಟವಲ್ಲ. ಏಕೆಂದರೆ ಅವುಗಳ ಬಗ್ಗೆ ಮೊದಲೇ ಮಾಹಿತಿ ಸಿಗುವುದರಿಂದ ಸುಲಭವಾಗಿ ದಾರಿ ಮಾಡಿಕೊಡಬಹುದು. ಆದರೆ ಖಾಸಗಿ ಆಂಬ್ಯುಲೆನ್ಸ್ ಗಳಲ್ಲಿ ರೋಗಿ ಇದ್ದರೂ, ಇರದಿದ್ದರೂ ದಾರಿ ಮಾಡಿಕೊಡಬೇಕಾಗಿರುವುದರಿಂದ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಮೈಸೂರು ಸಂಚಾರಿ ಪೊಲೀಸರು. ಇವರಿಗೆ ಒಂದೆಡೆ ದಿನನಿತ್ಯದ ವಾಹನ ದಟ್ಟಣೆಯನ್ನು ನಿರ್ವಹಣೆ ಮಾಡುವುದು ಒಂದು ಸಮಸ್ಯೆಯಾದರೆ, ಇನ್ನೊಂದೆಡೆ ದಿನವೂ ಆಂಬ್ಯುಲೆನ್ಸ್ ಗಳ ನಿರ್ವಹಣೆ ಮಾಡುವುದೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ಯಾವುದೇ ಮುನ್ಸೂಚನೆ ಇಲ್ಲದೆ ಕೇವಲ ಸೈರನ್ ಶಬ್ದ ಕೇಳಿಯೇ ಕನಿಷ್ಠ ಒಂದು ಸಾವಿರ ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಡುತ್ತಿದ್ದು, ಅವರು ಹೈರಾಣಾಗುತ್ತಿದ್ದಾರೆ.
ಸರಕಾರದ 108 ಆಂಬ್ಯುಲೆನ್ಸ್ ಗಳನ್ನು ನಿರ್ವಹಿಸುವುದು ಕಷ್ಟವಲ್ಲ. ಏಕೆಂದರೆ ಅವುಗಳ ಬಗ್ಗೆ ಮೊದಲೇ ಮಾಹಿತಿ ಸಿಗುವುದರಿಂದ ಸುಲಭವಾಗಿ ದಾರಿ ಮಾಡಿಕೊಡಬಹುದು. ಆದರೆ ಖಾಸಗಿ ಆಂಬ್ಯುಲೆನ್ಸ್ ಗಳಲ್ಲಿ ರೋಗಿ ಇದ್ದರೂ, ಇರದಿದ್ದರೂ ದಾರಿ ಮಾಡಿಕೊಡಬೇಕಾಗಿರುವುದರಿಂದ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ.
ಹೆಚ್ಚುತ್ತಿರುವ ದುರ್ಬಳಕೆ: ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ಗಳ ದುರ್ಬಳಕೆ ಹೆಚ್ಚುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ವಾಹನ ದಟ್ಟಣೆ ತಪ್ಪಿಸಿಕೊಳ್ಳುವ ಸಲುವಾಗಿಯೇ ಆಂಬ್ಯುಲೆನ್ಸ್ ಗಳು ಸೈರನ್ ಹಾಕಿಕೊಂಡು ಸಂಚರಿಸುತ್ತವೆ. ಹಲವು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ತುರ್ತಾಗಿ ಆಸ್ಪತ್ರೆಗೆ ಧಾವಿಸದಿದ್ದರೂ ಪರವಾಗಿಲ್ಲ. ಉದಾಹರಣೆಗೆ ಕೈ ಮುರಿದವರು, ಗಂಭೀರ ಕಾಯಿಲೆಗಳಿಲ್ಲದವರು, ಮೃತ ದೇಹಗಳ ರವಾನೆ ವೇಳೆ ಆಂಬ್ಯುಲೆನ್ಸ್ ಗಳಿಗೆ ಝೀರೋ ಟ್ರಾಫಿಕ್ ಬೇಕಿರುವುದಿಲ್ಲ. ಆದರೂ ಅಂತಹ ವಾಹನಗಳೂ ಸೈರನ್ ಹಾಕಿಕೊಂಡು ಬಂದಾಗ ಸಂಚಾರ ಪೊಲೀಸರಿಗೆ ಅವುಗಳ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡದೇ ಅನ್ಯ ದಾರಿಯಲ್ಲ. ಏಕೆಂದರೆ ಅಂಬ್ಯುಲೆನ್ಸ್ಲಿ ರೋಗಿ ಇದ್ದಾರೆಯೇ, ಇಲ್ಲವೇ? ಅವರಿಗೆ ನಿಜವಾಗಿಯೂ ಕಾಯಿಲೆ ಇದೆಯೇ, ಏನು ಎತ್ತ ಎಂಬುದನ್ನು ಪರಿಶೀಲಿಸುವಷ್ಟು ಸಮಯವಿರುವುದಿಲ್ಲ.ಹಾಗಾಗಿ ಹಲವು ಖಾಸಗಿ ಆಂಬ್ಯುಲೆನ್ಸ್ ಇದನ್ನೇ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ.

ಗ್ರೀನ್ ಕಾರ್ಡ್ ಸಮಸ್ಯೆಯಲ್ಲ:ಅಂಗಾಂಗ ದಾನ ಮತ್ತಿತರ ಸಂದರ್ಭದಲ್ಲಿ ಗ್ರೀನ್ ಕಾರಿಡಾರ್ ಒದಗಿಸುವುದು ಸಮಸ್ಯೆಯಾಗದು. ಏಕೆಂದರೆ ಮುಂಚಿತವಾಗಿಯೇ ಕಾರಿಡಾರ್ ಮಾರ್ಗ ಸಿದ್ಧವಾಗಿರುತ್ತದೆ. ಆ ವಾಹನ ಹೊರಟ ನಂತರ ಅದು ನಿರ್ದಿಷ್ಟ ಗುರಿ ತಲುಪುವವರೆಗೆ ಎಲ್ಲ ಜಂಕ್ಷನ್ ಗಳಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿ ಸಮಯಕ್ಕೆ ಸರಿಯಾಗಿ ತಲುಪಲು ವ್ಯವಸ್ಥೆ ಕಲ್ಪಿಸಲಾಗುವುದು” ಎನ್ನುತ್ತಾರೆ ಸಂಚಾರಿ ಪೊಲೀಸರು.
ಕೋಟ್
ಸಂಚಾರ ಪೊಲೀಸರು ಕೇವಲ ಸೈರನ್ ಶಬ್ದ ಕೇಳಿಯೇ ದಿನವೊಂದಕ್ಕೆ ಸಾವಿರಕ್ಕೂ ಅಧಿಕ ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಆದರೆ, ಖಾಸಗಿ ಆಂಬ್ಯುಲೆನ್ಸ್ ಗಳಿಂದ ಆಗಾಗ್ಗೆ ಸಮಸ್ಯೆ ಎದುರಾಗುತ್ತಿದ್ದು, ಅವರಿಗೆ ಸರಕಾರಿ ಅಂಬ್ಯುಲೆನ್ಸ್ ಸೇವೆ 108ರ ಜತೆ ಇಂಟಿಗ್ರೇಟ್ ಮಾಡಿಕೊಂಡು ಒಂದು ಚೆಕ್ಲಿಸ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಹೆಸರೇಳಲಿಚ್ಚಿಸದ ಸಂಚಾರಿ ಪೊಲೀಸ್.ಮೈಸೂರು ನಗರ

andolana

Recent Posts

ಮುಂಬೈನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.…

13 mins ago

ಓದುಗರ ಪತ್ರ | ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಕಸವೋ ಕಸ!

ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಅನಾರೋಗ್ಯಕ್ಕೊಳಗಾದವರು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ…

4 hours ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಪ್ರತೀ ವಾರಾಂತ್ಯ 100 ಜನರ ಹಸಿವು ತಣಿಸುವ ಸಂಡೇ ಬ್ರೇಕ್‌ಫಾಸ್ಟ್‌

2023ರಿಂದ "ಮಾತೋಶ್ರೀ ಫೌಂಡೇಶನ್‌"ಯಡಿ ಈ ಕಾರ್ಯಕ್ರಮಕ್ಕೆ ಚಾಲನೆ ಭಾನುವಾರ ಬಂತೆಂದರೆ ಸಾಮಾನ್ಯವಾಗಿ ಹೆಚ್ಚಿನ ಮಧ್ಯಮ ವರ್ಗದ ಮನೆಗಳಲ್ಲಿ ಅಡುಗೆ ಕೋಣೆಗಳು…

4 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 24 ಬುಧವಾರ

7 hours ago

ವಡ್ಡರದೊಡ್ಡಿ ಮನೆಯೊಂದರಲ್ಲಿ ಕಳ್ಳತನ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…

21 hours ago

ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…

22 hours ago