ಜಿಲ್ಲೆಗಳು

ಮೈಸೂರು ಜೂನಲ್ಲಿ ಗೊರಿಲ್ಲಾದ ಹುಟ್ಟು ಹಬ್ಬದ ಸಂಭ್ರಮ

ಮೈಸೂರು: ಮೈಸೂರಿನ ಮೃಗಾಲಯದಲ್ಲಿ ಗೊರಿಲ್ಲಾದ ಹುಟ್ಟು ಹಬ್ಬದ ಸಂಭ್ರಮ ಮನೆ ಮಾಡಿತ್ತು. ೧೫ನೇ ವಸಂತಕ್ಕೆ ಕಾಲಿರಿಸಿದ್ದ ‘ತಬೋ’ ಹೆಸರಿನ ಗೊರಿಲ್ಲಾಗೆ ಇಷ್ಟದ ಹಣ್ಣು-ತರಕಾರಿ ನೀಡಿ ಜನ್ಮ ದಿನ ಆಚರಿಸಲಾಯಿತು.

ಕೊರೊನಾದ ಬಳಿಕ ಕಳೆದ ವರ್ಷ ಜರ್ಮನಿಯಿಂದ ಮೈಸೂರು ಮೃಗಾಲಯಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಎರಡು ಗೊರಿಲ್ಲಾ ತರಲಾಗಿತ್ತು. ಅದರಲ್ಲಿ ತಬೋ ಎಂಬ ಗಂಡು ಗೊರಿಲ್ಲಾ ಇಂದು ೧೫ನೇ ವರ್ಷ ಕಾಲಿರಿತ್ತು. ಈ ಹಿಂದೆ ಜರ್ಮನಿ ಮೃಗಾಲಯದಲ್ಲೂ ಪ್ರತಿ ವರ್ಷ ತಬೋಗೆ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು.

ಮೈಸೂರು ಮೃಗಾಲಯಕ್ಕೆ ಕರೆತಂದ ಬಳಿಕ ಕಳೆದ ಜನವರಿಗೆ ಡೆಂಬಾ ಎಂಬ ಗೊರಿಲ್ಲಾಗೆ ೯ನೇ ವರ್ಷದ ಜನ್ಮ ದಿನವನ್ನು ಆಚರಿಸಲಾಗಿತ್ತು. ಇಂದು ತಬೋಗೆ ಹುಟ್ಟು ಹಬ್ಬ ಆಚರಿಸಿ, ವಿವಿಧ ಹಣ್ಣು, ತರಕಾರಿಂನ್ನು ವಿಶಿಷ್ಟವಾಗಿ ಜೋಡಿಸಿ, ಅದಕ್ಕೆ ತಿನ್ನಲು ನೀಡಿ ಸಂಭ್ರಮಿಸಲಾಯಿತು.

ಗೊರಿಲ್ಲಾದ ಮನೆ ಆವರಣದಲ್ಲಿ ‘ಹ್ಯಾಪಿ ಬರ್ತ್‌ಡೇ ತಬೋ ಎಂದು ತರಕಾರಿಯಿಂದ ಬರೆಯಲಾಗಿತ್ತು. ಫೈನಾಪಲ್, ಪರಂಗಿ ಹಣ್ಣು, ಸೇಬು, ಕಿತ್ತಳೆ, ಕರ್ಬೂಜಾ, ದ್ರಾಕ್ಷಿ, ಕಲ್ಲಂಗಡಿ, ಕರ್ಜೂರ, ಬಾದಾಮಿ, ಗೋಡಂಬಿ ಸೇರಿದಂತೆ ವಿವಿಧ ಹಣ್ಣುಗಳಿಂದ ವಿಶಿಷ್ಟವಾಗಿ ಜೋಡಿಸಲಾಗಿತ್ತು. ಗೊರಿಲ್ಲಾ ಮನೆ ಆವರಣದಲ್ಲಿ ಹಣ್ಣು, ತರಕಾರಿಗಳಿಂದ ಅಲಂಕಾರ ಮಾಡಿರುವುದನ್ನು ಗಮನಿಸಿದ ಪ್ರವಾಸಿಗರು ಕುತೂಹಲದಿಂದ ಕಾಯುತ್ತಿದ್ದರು.

ಈ ವೇಳೆ ಬೋನ್‌ನಿಂದ ಹೊರಗೆ ಬಂದ ತಬೋ ಪ್ರವಾಸಿಗರು ನಿಂತಿದ್ದ ಸ್ಥಳದತ್ತ ಬಂದು ಅಲ್ಲಿರಿಸಲಾಗಿದ್ದ ಹಣ್ಣು-ತರಕಾರಿಯನ್ನು ತಿಂದು ಸಂಭ್ರಮಿಸಿತು. ಈ ವೇಳೆ ನೆರೆದಿದ್ದ ಪ್ರವಾಸಿಗರು ‘ಹ್ಯಾಪಿ ಬರ್ತ್ ಡೇ ತಬೋ ಎಂದು ಕೂಗಿ ಶುಭ ಕೋರಿ ಧೀರ್ಘಕಾಲ ಸುಖವಾಗಿ ಬಾಳಲಿ ಎಂದು ಹರಸಿದರು.


ಮೈಸೂರು ಮೃಗಾಲಯಕ್ಕೆ ತಂದಿರುವ ತಬೋ ಹೆಸರಿನ ಗೊರಿಲ್ಲಾಗೆ ೧೫ನೇ ವರ್ಷದ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಲಾಗಿದೆ. ಗೊರಿಲ್ಲಾ ಇರುವ ಬೋನ್‌ನ ಆವರಣದಲ್ಲಿ ವಿವಿಧ ಹಣ್ಣು, ತರಕಾರಿಯನ್ನು ಕತ್ತರಿಸಿ ಜೋಡಿಸಿಡಲಾಗಿತ್ತು. ಪ್ರವಾಸಿಗರು ನೆರೆದಿದ್ದ ಸಂದರ್ಭದಲ್ಲಿ ತಬೋ ಬೋನ್‌ನಿಂದ ಹೊರಬಂದು ಇಷ್ಟದ ಹಣ್ಣು-ತರಕಾರಿ ತಿಂದಿದೆ. ಪಾಲಕರು ವಿಶೇಷ ಆಸಕ್ತಿವಹಿಸಿ ತಬೋದ ಜನ್ಮ ದಿನ ಆಚರಿಸಿದ್ದಾರೆ. ಪ್ರವಾಸಿಗರು ತಬೋ ಜನ್ಮ ದಿನಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದ್ದಾರೆ.

-ಅಜಿತ್ ಎಂ.ಕುಲಕರ್ಣಿ, ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

 

andolanait

Recent Posts

ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ನಡೆಯಲಿಲ್ಲ, ನಾವೇ ಗೆದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ಏನೂ ನಡೆಯಲಿಲ್ಲ. ನಾನೇ ಗೆಲುವು ಸಾಧಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ…

28 mins ago

ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವವರೇ ಎಚ್ಚರ ಎಚ್ಚರ.

ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ! ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ…

58 mins ago

ಜನಗಣತಿ ಮಾಡುವ ವೇಳೆಯೇ ಹೃದಯಾಘಾತ: ಶಿಕ್ಷಕ ಸಾವು

ಕೆ.ಆರ್.ನಗರ: ಜನಗಣತಿ ಮಾಡುವ ವೇಳೆ ಸರ್ಕಾರಿ ಶಾಲೆಯ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ…

2 hours ago

ಓದುಗರ ಪತ್ರ: ಪಂಚ.. ತಂತ್ರ !

ಪಂಚ.. ತಂತ್ರ ! ಚುನಾವಣೆಯಲ್ಲಿ ಗೆದ್ದವರಿಗೆ ಸಿಎಂ ಚಿಂತೆ, ಸೋತವರಿಗೆ ಇವಿಎಂನದೇ ಚಿಂತೆ ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

3 hours ago

ಓದುಗರ ಪತ್ರ: ಮರದ ಕೊಂಬೆಯನ್ನು ತೆರವುಗೊಳಿಸಿ

ಮೈಸೂರಿನ ಕುವೆಂಪುನಗರದ ‘ಎಂ’ ಬ್ಲಾಕ್‌ನ ನೃಪತುಂಗ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹೊಸ…

3 hours ago

ಓದುಗರ ಪತ್ರ: ತಮಿಳುನಾಡಿನಲ್ಲಿ ವಿಜಯ್ ವಿಜಯ

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ೨೩೪ ಕ್ಷೇತ್ರಗಳ ಪೈಕಿ ೧೦೮ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ…

3 hours ago