ಜಿಲ್ಲೆಗಳು

ಮೈಸೂರು ಜೂನಲ್ಲಿ ಗೊರಿಲ್ಲಾದ ಹುಟ್ಟು ಹಬ್ಬದ ಸಂಭ್ರಮ

ಮೈಸೂರು: ಮೈಸೂರಿನ ಮೃಗಾಲಯದಲ್ಲಿ ಗೊರಿಲ್ಲಾದ ಹುಟ್ಟು ಹಬ್ಬದ ಸಂಭ್ರಮ ಮನೆ ಮಾಡಿತ್ತು. ೧೫ನೇ ವಸಂತಕ್ಕೆ ಕಾಲಿರಿಸಿದ್ದ ‘ತಬೋ’ ಹೆಸರಿನ ಗೊರಿಲ್ಲಾಗೆ ಇಷ್ಟದ ಹಣ್ಣು-ತರಕಾರಿ ನೀಡಿ ಜನ್ಮ ದಿನ ಆಚರಿಸಲಾಯಿತು.

ಕೊರೊನಾದ ಬಳಿಕ ಕಳೆದ ವರ್ಷ ಜರ್ಮನಿಯಿಂದ ಮೈಸೂರು ಮೃಗಾಲಯಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಎರಡು ಗೊರಿಲ್ಲಾ ತರಲಾಗಿತ್ತು. ಅದರಲ್ಲಿ ತಬೋ ಎಂಬ ಗಂಡು ಗೊರಿಲ್ಲಾ ಇಂದು ೧೫ನೇ ವರ್ಷ ಕಾಲಿರಿತ್ತು. ಈ ಹಿಂದೆ ಜರ್ಮನಿ ಮೃಗಾಲಯದಲ್ಲೂ ಪ್ರತಿ ವರ್ಷ ತಬೋಗೆ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು.

ಮೈಸೂರು ಮೃಗಾಲಯಕ್ಕೆ ಕರೆತಂದ ಬಳಿಕ ಕಳೆದ ಜನವರಿಗೆ ಡೆಂಬಾ ಎಂಬ ಗೊರಿಲ್ಲಾಗೆ ೯ನೇ ವರ್ಷದ ಜನ್ಮ ದಿನವನ್ನು ಆಚರಿಸಲಾಗಿತ್ತು. ಇಂದು ತಬೋಗೆ ಹುಟ್ಟು ಹಬ್ಬ ಆಚರಿಸಿ, ವಿವಿಧ ಹಣ್ಣು, ತರಕಾರಿಂನ್ನು ವಿಶಿಷ್ಟವಾಗಿ ಜೋಡಿಸಿ, ಅದಕ್ಕೆ ತಿನ್ನಲು ನೀಡಿ ಸಂಭ್ರಮಿಸಲಾಯಿತು.

ಗೊರಿಲ್ಲಾದ ಮನೆ ಆವರಣದಲ್ಲಿ ‘ಹ್ಯಾಪಿ ಬರ್ತ್‌ಡೇ ತಬೋ ಎಂದು ತರಕಾರಿಯಿಂದ ಬರೆಯಲಾಗಿತ್ತು. ಫೈನಾಪಲ್, ಪರಂಗಿ ಹಣ್ಣು, ಸೇಬು, ಕಿತ್ತಳೆ, ಕರ್ಬೂಜಾ, ದ್ರಾಕ್ಷಿ, ಕಲ್ಲಂಗಡಿ, ಕರ್ಜೂರ, ಬಾದಾಮಿ, ಗೋಡಂಬಿ ಸೇರಿದಂತೆ ವಿವಿಧ ಹಣ್ಣುಗಳಿಂದ ವಿಶಿಷ್ಟವಾಗಿ ಜೋಡಿಸಲಾಗಿತ್ತು. ಗೊರಿಲ್ಲಾ ಮನೆ ಆವರಣದಲ್ಲಿ ಹಣ್ಣು, ತರಕಾರಿಗಳಿಂದ ಅಲಂಕಾರ ಮಾಡಿರುವುದನ್ನು ಗಮನಿಸಿದ ಪ್ರವಾಸಿಗರು ಕುತೂಹಲದಿಂದ ಕಾಯುತ್ತಿದ್ದರು.

ಈ ವೇಳೆ ಬೋನ್‌ನಿಂದ ಹೊರಗೆ ಬಂದ ತಬೋ ಪ್ರವಾಸಿಗರು ನಿಂತಿದ್ದ ಸ್ಥಳದತ್ತ ಬಂದು ಅಲ್ಲಿರಿಸಲಾಗಿದ್ದ ಹಣ್ಣು-ತರಕಾರಿಯನ್ನು ತಿಂದು ಸಂಭ್ರಮಿಸಿತು. ಈ ವೇಳೆ ನೆರೆದಿದ್ದ ಪ್ರವಾಸಿಗರು ‘ಹ್ಯಾಪಿ ಬರ್ತ್ ಡೇ ತಬೋ ಎಂದು ಕೂಗಿ ಶುಭ ಕೋರಿ ಧೀರ್ಘಕಾಲ ಸುಖವಾಗಿ ಬಾಳಲಿ ಎಂದು ಹರಸಿದರು.


ಮೈಸೂರು ಮೃಗಾಲಯಕ್ಕೆ ತಂದಿರುವ ತಬೋ ಹೆಸರಿನ ಗೊರಿಲ್ಲಾಗೆ ೧೫ನೇ ವರ್ಷದ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಲಾಗಿದೆ. ಗೊರಿಲ್ಲಾ ಇರುವ ಬೋನ್‌ನ ಆವರಣದಲ್ಲಿ ವಿವಿಧ ಹಣ್ಣು, ತರಕಾರಿಯನ್ನು ಕತ್ತರಿಸಿ ಜೋಡಿಸಿಡಲಾಗಿತ್ತು. ಪ್ರವಾಸಿಗರು ನೆರೆದಿದ್ದ ಸಂದರ್ಭದಲ್ಲಿ ತಬೋ ಬೋನ್‌ನಿಂದ ಹೊರಬಂದು ಇಷ್ಟದ ಹಣ್ಣು-ತರಕಾರಿ ತಿಂದಿದೆ. ಪಾಲಕರು ವಿಶೇಷ ಆಸಕ್ತಿವಹಿಸಿ ತಬೋದ ಜನ್ಮ ದಿನ ಆಚರಿಸಿದ್ದಾರೆ. ಪ್ರವಾಸಿಗರು ತಬೋ ಜನ್ಮ ದಿನಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದ್ದಾರೆ.

-ಅಜಿತ್ ಎಂ.ಕುಲಕರ್ಣಿ, ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

 

andolanait

Recent Posts

ಉತ್ತರ ಪ್ರದೇಶ: ಕಟ್ಟಡದಲ್ಲಿ ಅಗ್ನಿ ಅವಘಡ: 15 ವಿದ್ಯಾರ್ಥಿಗಳು ಸಾವು

ಲಖನೌ: ಉತ್ತರ ಪ್ರದೇಶದ ಅಲಿಗಂಜ್‌ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು…

6 hours ago

ಕಾಂಗೋದಲ್ಲಿ ಎಬೋಲಾ ಅಟ್ಟಹಾಸ: 1000 ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೀನ್ಯಾ: ಕಾಂಗೋದಲ್ಲಿ ಎಬೋಲಾ ವೈರಸ್‌ನ ಅಟ್ಟಹಾಸ ಮುಂದುವರಿದಿದ್ದು, ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1003ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ…

8 hours ago

ಗಾಣಾಳು ಜಲಪಾತದಲ್ಲಿ ಈಜಲು ಹೋದ ಯುವಕ ಸಾವು

ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಜಲಪಾತದಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.…

9 hours ago

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

9 hours ago

ಶೀಘ್ರದಲ್ಲೇ ಬಸ್‌ ಪ್ರಯಾಣ ದರ ಹೆಚ್ಚಳ?

ಬೆಂಗಳೂರು: ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ…

10 hours ago

ಎರಡೇ ವರ್ಷಕ್ಕೆ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ರಾಜೀನಾಮೆ

ಲಂಡನ್:‌ ನಿರೀಕ್ಷೆಯಂತೆ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್‌ ಪಕ್ಷದೊಳಗೆ…

11 hours ago