ಮಂಡ್ಯ

ಅಂದು ಸ್ಟಾರ್ ಬಾಲನಟಿ ಇಂದು ಐಎಎಸ್ ಅಧಿಕಾರಿ

ಅಂದು ಸ್ಟಾರ್ ಬಾಲನಟಿ ಇಂದು ಐಎಎಸ್ ಅಧಿಕಾರಿ

ಮಂಡ್ಯದ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ ಸಾಧನೆ

ಮಂಡ್ಯ: 4ನೇ ವಯಸ್ಸಿನಿಂದಲೇ ಸ್ಟಾರ್ ಬಾಲನಟಿಯಾಗಿ ಸಿನಿಮಾರಂಗದಲ್ಲಿ ಮಿಂಚಿದ ಎಚ್.ಎಸ್.ಕೀರ್ತನಾ ಇಂದು ಐ ಎ ಎಸ್ ಅಧಿಕಾರಿಯಾಗಿ ಮಂಡ್ಯದ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ನಡೆಸಿರುವುದು ಯುವಜನರಿಗೆ ಹೆಮ್ಮೆಯ ಸಂಗತಿ. ಸ್ಫೂರ್ತಿಯ ಚಿಲುಮೆಯಂತೆ ಚಿತ್ರರಂಗದ ಬಾಲನಟಿಯಾಗಿ ನಟಿಸಿದ್ದ ಎಚ್.ಎಸ್.ಕೀರ್ತನಾ ಅವರು ದೊರೆ, ಗಂಗಾ ಯಮುನಾ, ಕರ್ಪೂರದ ಗೊಂಬೆ, ಮುದ್ದಿನ ಅಳಿಯ, ಉಪೇಂದ್ರ, ಎ, ಹಬ್ಬ,  ಲೇಡಿ ಕಮಿಷನರ್, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ವಿಷ್ಣುವರ್ಧನ್, ಶಿವರಾಜ್‌ಕುವಾರ್, ಅಂಬರೀಶ್, ರಮೇಶ್, ಶಶಿಕುವಾರ್, ದೊಡ್ಡಣ್ಣ ಸೇರಿದಂತೆ ಎಲ್ಲ ಸ್ಟಾರ್ ನಟರೊಂದಿಗೆ ಸುವಾರು 32 ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ಚಿಗುರು, ಜನನಿ, ಪುಟಾಣಿ ಏಜೆಂಟ್ ಸೇರಿದಂತೆ 48 ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅತ್ಯುತ್ತಮ ಬಾಲನಟಿ ಪ್ರಶಸ್ತಿಯೊಂದಿಗೆ  2004 ರಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದಿದ್ದ ಕೀರ್ತನಾ 2020 ರಲ್ಲಿ ಯೂನಿಯನ್‌ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್‌ಸಿ) ಪರೀಕ್ಷೆಯಲ್ಲಿ   ಸರ್ಕಾರದ ಪ್ರಮುಖ ಹುದ್ದೆಗೇರಿದರು.

ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿ, ಬಳಿಕ ತಹಸಿಲ್ದಾರರಾಗಿಯೂ ಸೇವೆ ಆರಂಭಿಸಿದ ಕೀರ್ತನಾ ಅವರು ಇಂದು ಮಡಿವಾಳ ಜನಾಂಗದಲ್ಲಿ ನೇರವಾಗಿ ಐಎಎಸ್ ಅಧಿಕಾರಿಯಾಗಿರುವುದು ಮಾದರಿಯಾದದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ ನಿರ್ದೇಶಕ ಗಿರೀಶ್ ಕಾರ್ನಾಡ್ ಹಾಗೂ ಜಿ.ವಿ.ಐಯ್ಯರ್‌  ಅವರೊಂದಿಗೆ ಸಿನಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಗಳಿಸಿದ್ದು, ಒಂದು ಮರೆಯಲಾರದ ಅನುಭವವೂ ಹೌದು ಎನ್ನುವ ಕೀರ್ತನಾ ಹಿಂದುಳಿದ ವರ್ಗಗಳಿಗೆ ಸೇರಿದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಓರ್ವ ಹೆಣ್ಣಾಗಿ ನನ್ನಲ್ಲಿ ಒಂದಷ್ಟು ಗುರಿ ಹಾಗೂ ಉದ್ದೇಶಗಳಿವೆ. ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಅರ್ಹ ಬಡಜನರಿಗೆ ತಲುಪಿಸುವುದು, ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವುದು ಹಾಗೂ ಕೌಶಲ್ಯಾಭಿವೃದ್ಧಿ, ಮಕ್ಕಳ ಅಭಿವೃದ್ಧಿಗೆ ಆದ್ಯ ಗಮನ ನೀಡುವುದು ನನ್ನ ಆದ್ಯತೆಗಳಾಗಿವೆ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಉತ್ಸಾಹವಿದೆ ಎನ್ನುತ್ತಾರೆ ಎಚ್.ಎಸ್.ಕೀರ್ತನಾ.

ನನ್ನದು 6ನೇ ಪ್ರಯತ್ನ

ಮೊದಲಿಂದಲೂ ನನ್ನ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ವಿಶ್ವಾಸವಿತ್ತು. ನಾನು ಚಿತ್ರರಂಗದಲ್ಲಿ ಬಾಲನಟಿಯಾಗಿ ರಾಜ್ಯದ ಜನರ ಪ್ರೀತಿಯನ್ನು ಗಳಿಸಿದ್ದೆ. ಆದರೆ ಸಹಜವಾಗಿ ನಮ್ಮ ತಂದೆ ಶ್ರೀನಿವಾಸ್ ಅವರು ಇನ್ನು ಚಿತ್ರರಂಗ ಸಾಕು, ಓದಿನತ್ತ ಮುಖ ಮಾಡು ಏನಾದರೂ ಸಾಧನೆ ಮಾಡು ಎಂದು ಪ್ರೋತ್ಸಾಹಿಸಿದರು. ಅದರಂತೆ ನಿರಂತರ ಶ್ರಮ ಹಾಕಿದೆ. ಅದರ ಫಲವೇ ಇಂದು ಐಎಎಸ್ ಅಧಿಕಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಈ ಹುದ್ದೆಯನ್ನು ಶ್ರೀಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಹಾಗೂ ಕರ್ತವ್ಯದಲ್ಲಿ ಲೋಪಬಾರದ ರೀತಿ ಕಾರ್ಯನಿರ್ವಹಿಸುವುದು ನನ್ನ ಆದ್ಯತೆಯಾಗಿದೆ.

 

-ಎಚ್.ಎಸ್.ಕೀರ್ತನಾ, ಉಪ ವಿಭಾಗಾಧಿಕಾರಿಗಳು, ಮಂಡ್ಯ

andolana

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

3 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

3 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

3 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

4 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

4 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

4 hours ago