ಮಂಡ್ಯ: ಪಡಿತರ ಅಂಗಡಿಗಳ ಎದುರು ಇದೀಗ ರಾತ್ರಿವರೆಗೂ ಮೈಲುದ್ದದ ಸರತಿ ಸಾಲು ಕಂಡು ಬರುತ್ತಿದೆ. ರೇಶನ್ ಅಂಗಡಿ ಸಿಬ್ಬಂದಿ ಜತೆಗೆ ವಾಗ್ಯುದ್ಧ, ರಂಪಾಟ ಎಲ್ಲೆಡೆ ಸಾಮಾನ್ಯವಾಗಿದೆ. ನೆಟ್ವರ್ಕ್ ಸಮಸ್ಯೆ ಜತೆಯಲ್ಲಿ ಒಂದು ಒಟಿಪಿ ಜತೆಯಲ್ಲಿ ಎರಡು ಒಟಿಪಿ ಪಡೆಯಬೇಕಾಗಿರುವುದರಿಂದ ಅನಗತ್ಯ ವಿಳಂಬವಾಗುತ್ತಿದೆ. ಇದರಿಂದ ಸರತಿಯಲ್ಲಿ ಪಡಿತರಕ್ಕಾಗಿ ಕಾಯುವ ಜನಸಾಮಾನ್ಯರು ಸಾಮಗ್ರಿ ಪಡೆಯಲು ನಿತ್ಯ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ
ಹಿಂದೆ ಪಡಿತರ ಅಂಗಡಿಗಳಲ್ಲಿ ನಿಮಿಷಕ್ಕೆ ಒಂದು ಕಾರ್ಡ್, ಗಂಟೆಗೆ 40 ಕಾರ್ಡ್ ನಿರ್ವಹಣೆ ಆಗುತ್ತಿತ್ತು. ಈಗ ಒಂದು ಕಾರ್ಡ್ಗೆ 10ರಿಂದ 20 ನಿಮಿಷ ಬೇಕಾಗುತ್ತದೆ. ಸರ್ವರ್ ವಿಳಂಬ ಜತೆಗೆ ಕೆಲವು ಸಲ ಸರ್ವರ್ ಕೈಕೊಡುತ್ತಿರುವುದರಿಂದ ದಿನಕ್ಕೆ 40 ಕಾರ್ಡ್ ಕೂಡ ನಿರ್ವಹಣೆ ಆಗದ ದಿನಗಳಿವೆ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸೆಪ್ಟೆಂಬರ್ವರೆಗೆ ಒಂದು ಬಾರಿ ಪಡಿತರ ಪಡೆಯಲು ಒಂದು ಸಲ ಮಾತ್ರ ಒಟಿಪಿ ನೀಡಬೇಕಾಗಿತ್ತು. ಈಗ ಕೇಂದ್ರದ ಪಾಲಿನ ಅಕ್ಕಿಗೆ, ರಾಜ್ಯದ ಪಾಲಿನ ಅಕ್ಕಿಗೆ ಎರಡು ಪ್ರತ್ಯೇಕ ಒಟಿಪಿ ಪಡೆಯಬೇಕಾಗಿದೆ.
ಇದು ರಾಜ್ಯವ್ಯಾಪಿ ಸಮಸ್ಯೆ. ಕೇಂದ್ರದ ಮಹತ್ವಾಕಾಂಕ್ಷೆಯ ವನ್ ನೇಶನ್ ವನ್ ರೇಶನ್ ಯೋಜನೆ ಪ್ರಕ್ರಿಯೆ ಆರಂಭವಾಗಿರುವ ಭಾಗವೂ ಆಗಿದೆ. ಹಾಗಾಗಿ ಆರಂಭಿಕವಾಗಿ ಈ ಸಮಸ್ಯೆ ಎದುರಿಸಬೇಕಾಗಿದೆ ಎಂದು ಇಲಾಖಾ ಆಧಿಕಾರಿಗಳು ಸಮಜಾಯಿಶಿಕೆ ನೀಡುತ್ತಿದ್ದಾರೆ.
ಹಿಂದೆ ಪಡಿತರ ಅಂಗಡಿಗಳಲ್ಲಿ ನಿಮಿಷಕ್ಕೆ ಒಂದು ಕಾರ್ಡ್, ಗಂಟೆಗೆ 40 ಕಾರ್ಡ್ ನಿರ್ವಹಣೆ ಆಗುತ್ತಿತ್ತು. ಈಗ ಒಂದು ಕಾರ್ಡ್ಗೆ 10ರಿಂದ 20 ನಿಮಿಷ ಬೇಕಾಗುತ್ತದೆ. ಸರ್ವರ್ ವಿಳಂಬ ಜತೆಗೆ ಕೆಲವು ಸಲ ಸರ್ವರ್ ಕೈಕೊಡುತ್ತಿರುವುದರಿಂದ ದಿನಕ್ಕೆ 40 ಕಾರ್ಡ್ ಕೂಡ ನಿರ್ವಹಣೆ ಆಗದ ದಿನಗಳಿವೆ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ
ನೆಲಮಂಗಲ: ಕೆನಡಾ ದೇಶದಲ್ಲಿ ಕನ್ನಡಿಗನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರವನ್ನು ಕೆನಡಾದ ಟೊರಂಟೊ ಪೊಲೀಸರು…
ಕೊಡಗು: ಸಂಸದ ಯದುವೀರ್ ಕೃಷ್ಣದತತ ಚಾಮರಾಜ ಒಡೆಯರ್ ಅವರ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್ಪೋರ್ಟ್ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ…
ಟೆಹರಾನ್: ಇರಾನ್ ಸರ್ವೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರು ಮಗ ಉತ್ತರಾಧಿಕಾಗಲು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಇರಾನ್ನ ಮುಂದಿನ ಸರ್ವೋಚ್ಛ…
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಟಾಕ್ಸಿಕ್ ಇರಾನ್- ಇಸ್ರೇಲ್ ಯುದ್ಧದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಮಾರ್ಚ್.19ರಂದು ಬಿಡುಗಡೆಯಾಗಬೇಕಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…