ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಮಾರಮ್ಮ ದೇವಿ ಕರಗದ ಸಂದರ್ಭದಲ್ಲಿ ಕರಗ ನಿಮಿತ್ತ ನಡೆದ ಕೊಂಡೋತ್ಸವದಲ್ಲಿ ಕರಗ ಹೊತ್ತಿದ್ದ ದೇವರ ಗುಡ್ಡಪ್ಪ ನಿಯಂತ್ರಣ ತಪ್ಪಿ ಬೆಂಕಿ ಕೆಂಡದ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಜತೆಗೆ ಅವರನ್ನು ರಕ್ಷಿಸಲು ಮುಂದಾದ ಅವರ ಸಹೋದರಿ ರಾಜೇಶ್ವರಿ ಕೂಡ ಗಾಯಗೊಂಡಿದ್ದಾರೆ.
ಕರಗ ಹೊತ್ತು ಏಳೆಂಟು ಹೆಜ್ಜೆ ಹಾಕಿದ್ದ ದೇವರ ಗುಡ್ಡಪ್ಪ ಬಿ.ಕುಮಾರ್ ಅವರ ಕಾಲಿಗೆ ಪಂಚೆ ಸಿಕ್ಕಿಕೊಂಡು ಮುಗ್ಗರಿಸಿ ಮಕಾಡೆ ಬಿದ್ದರು. ಮುತ್ತು ಮಾರಮ್ಮನ ಕರಗ ಅವರ ತಲೆಯ ಮೇಲಿಂದ ಕಳಚಿ ಕೆಂಡದ ಮೇಲೆ ಬಿತ್ತು. ಈ ವೇಳೆ ಕೊಂಡದಲ್ಲಿ ಬಿದ್ದ ಕುಮಾರ್ ಅವರನ್ನು ರಕ್ಷಿಸಲು ಹೋಗಿ ಅವರ ಸಹೋದರಿ ರಾಜೇಶ್ವರಿ ಕೂಡ ಗಾಯಗೊಂಡರು. ತಕ್ಷಣ ಪಕ್ಕದಲ್ಲಿದ್ದವರು ಇಬ್ಬರನ್ನೂ ಕೊಂಡದಿಂದ ಮೇಲೆ ಎತ್ತಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನು ಕೆಲವರು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದರು. ಆದರೆ ಇದು ಸುಳ್ಳು ಸುದ್ದಿ ಅಲ್ಲ. ಶ್ರೀರಂಗಪಟ್ಟಣ ವರದಿಗಾರರಿಂದ ಬಂದ ಮಾಹಿತಿ ಪ್ರಕಾರ ಈ ಘಟನೆ ಆಗಿರುವುದು ನಿಜ. ಹೀಗಾಗಿ ಇದು ಫೇಕ್ ನ್ಯೂಸ್ ಅಲ್ಲ.
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…
ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…
ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…
ರೇಣುಕಾ ನಿಡುಗುಂದಿ ಜಂತರ್ ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…
ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…