ಮಂಡ್ಯ

ಕಣ್ಮನ ಸೆಳೆದ ಕೃಷಿ ಪ್ರಾತ್ಯಕ್ಷಿಕೆಗಳು

ಮಂಡ್ಯ : ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ವಿಸಿ ಫಾರಂ ಆವರಣದಲ್ಲಿ ಕೃಷಿ ಪ್ರಾತ್ಯಕ್ಷೆಗಳು ನೋಡುಗರ ಕಣ್ಮನ ಸೆಳೆದವು.

ಕರ್ನಾಟಕದಲ್ಲಿ ಒಟ್ಟು ೧೮೦ ದೇಶಿ ಭತ್ತದ ತಳಿಗಳಿವೆ. ೧೮೦ ಭತ್ತದ ತಳಿಗಳನ್ನು ವಿಸಿ ಫಾರಂನಲ್ಲಿ ಬೆಳೆಸಲಾಗಿದೆ. ಜಿಂಕ್ ಮತ್ತು ಐರನ್ ಅಂಶಗಳು ಹೆಚ್ಚು ಇರುವ ಭತ್ತದ ತಳಿಗಳು ಇಲ್ಲಿವೆ. ಫಿಲಿಪೈನ್ಸ್ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ನಮ್ಮ ಹವಾಮಾನಕ್ಕೆ ಸರಿಹೊಂದುವ ಭತ್ತದ ತಳಿಗಳನ್ನು ಬೆಳೆಸಲಾಗುವುದು ಹಾಗೂ ಈ ಭತ್ತದವನ್ನು ಸಕ್ಕರೆ ಖಾಯಿಲೆ ಇರುವವರು ಕೂಡ ತಿನ್ನ ಬಹುದಾಗಿದೆ.

೧೮ ದೇಶಿ ರಾಗಿ ತಳಿಗಳನ್ನು ಅಭಿವೃದ್ಧಿಪಡಿಸಿ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಇವುಗಳಿಂದ ಧಾನ್ಯದ ಇಳುವರಿ ಹಾಗೂ ಬೇವಿನ ಇಳುವರಿ ಹೆಚ್ಚು ನಿರೀಕ್ಷಿಸಬಹುದು. ಸಾವಯವ ಕೃಷಿಯಿಂದ ರಾಗಿ, ಕಬ್ಬು, ಸೂರ್ಯಕಾಂತಿ, ಕಡಲೆಕಾಯಿ, ಸೋಯಾಬಿನ್, ಉದ್ದು, ಹೆಸರುಕಾಳು, ಗೋರಿ ಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ ಬೆಳೆಯಲಾಗಿದೆ.

ಇದನ್ನೂ ಓದಿ:-ಮೋದಿ-ಪುಟಿನ್‌ ಮಾತುಕತೆ : ರಕ್ಷಣಾ ಒಪ್ಪಂದಗಳ ಬಗ್ಗೆ ಚರ್ಚೆ

ಆಕರ್ಷಿಸಿದ ಕಸಿ ಟೊಮೊಟೊ ಬದನೆಕಾಯಿ ಗಿಡ
ಕೃಷಿ ವಿಜ್ಞಾನಿಗಳ ಮಂಡ್ಯ ವಿ.ಸಿ. ಫಾರಂ ಆವರಣದಲ್ಲಿ ಬೆಳೆಸಲಾದ ಕಸಿ ಟೊಮೋಟೊ ಮತ್ತು ಬದನೆಕಾಯಿ ಒಂದೇ ಗಿಡದಲ್ಲಿ ಟೊಮೋಟೊ ಮತ್ತು ಬದನೆಕಾಯಿ ಬಿಟ್ಟಿದ್ದು, ಇದು ನೋಡುಗರನ್ನು ಆಕರ್ಷಿಸುತ್ತದೆ. ವಿವಿಧ ಅಲಂಕಾರ ಹೂಗಳನ್ನು ವಿ.ಸಿ.ಫಾರಂನಲ್ಲಿ ಬೆಳೆಯಲಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಲಿ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಸಣಾಪುರ ಚಾಟಿಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳು ಅಪಮಾನ…

3 hours ago

ಓದುಗರ ಪತ್ರ: ಒಡೆಯರ್ ಪೋಸ್ಟ್ ಕಾರ್ಡ್ ಬಿಡುಗಡೆ ಶ್ಲಾಘನೀಯ

ಭಾರತೀಯ ಅಂಚೆ ಹಾಗೂ ಕರ್ನಾಟಕ ಅಂಚೆ ಚೀಟಿ ಸಂಗ್ರಹಣಾ ಸಂಘವು ಆಧುನಿಕ ಮೈಸೂರು ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿರುವ ಮೈಸೂರು…

4 hours ago

ಓದುಗರ ಪತ್ರ: ಮೈಸೂರು ದಟ್ಟಗಳ್ಳಿಯ ಪಿನ್ ಕೋಡ್ ಸಮಸ್ಯೆ ನಿವಾರಿಸಿ

ಮೈಸೂರಿನ ದಟ್ಟಗಳ್ಳಿ ೩ ನೇ ಹಂತದ ಕನಕದಾಸನಗರವು, ಬಡಾವಣೆ ನಿರ್ಮಾಣವಾದ ಆರಂಭದಲ್ಲಿ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಗೆ ಸೇರಿತ್ತು.…

4 hours ago

ಮಳೆಗಾಲದ ಸವಾಲು ಎದುರಿಸಲು ಸೆಸ್ಕ್ ಸಜ್ಜು

ಪುನೀತ್ ಮಡಿಕೇರಿ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ; ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳ ದಾಸ್ತಾನು ಮಡಿಕೇರಿ: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು…

4 hours ago

ರಸ್ತೆ ಇಲ್ಲದೆ ಯೋಧನ ಕುಟುಂಬ ಪರದಾಟ

ಮಹೇಶ್ ಕರೋಠಿ ಮುಚ್ಚಿರುವ ರಸ್ತೆಯನ್ನು ಪುನಃ ತೆರೆದು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರ ಒತ್ತಾಯ ಕಿಕ್ಕೇರಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶದ ಭದ್ರತೆಗಾಗಿ…

4 hours ago

ಕುತೂಹಲ ಮೂಡಿಸಿದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ

ಮಂಜು ಕೋಟೆ ಕೋಟೆ: ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಪೈಪೋಟಿ; ಮುಖಂಡರಿಗೆ ಪ್ರತಿ ಎಚ್.ಡಿ.ಕೋಟೆ: ಕ್ಷೇತ್ರದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ…

4 hours ago