ಮಡಿಕೇರಿ :ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳದಲ್ಲಿ ಕಾಡಾನೆ ದಾಂಧಲೆ ಎಗ್ಗಿಲ್ಲದೆ ಸಾಗಿದೆ. ನೆನ್ನೆ ರಾತ್ರಿ ಅಮೃತ ಹರೀಶ್ ರವರ ಮನೆಯ ತೋಟ ಹಾಗೂ ಅಂಗಳಕ್ಕೆ ದಾಳಿಯಿಟ್ಟಿರುವ ಕಾಡಾನೆ ಬಾಳೆ ಮತ್ತಿತರ ಗಿಡಗಳನ್ನು ದ್ವಂಸಗೊಳಿಸಿವೆ. ಪಿ.ಕೆ. ರಾಮನ್ ರವರ ಮನೆ ಮುಂಭಾಗದ ಕಂಪೌಂಡ್ ಅನ್ನು ಪುಡಿ ಮಾಡಿ ಮರವನ್ನು ಹಾನಿಗೊಳಿಸಿದೆ.
ದಾಸವಾಳ ಭಾಗದ ಅರಣ್ಯದಂಚಿನಲ್ಲಿ ಕಾಡಾನೆಗಳು ನಾಡಿನ ಒಳಗೆ ಬರದಂತೆ ಅರಣ್ಯ ಇಲಾಖೆ ಲಕ್ಷಾಂತರ ರೂ. ವ್ಯಯಿಸಿ ರೈಲ್ವೆ ಬ್ಯಾರಿ ಕೇಡ್ ಗಳನ್ನು ಅಳವಡಿಸಿದೆ. ಆದರೆ ಅವೈಜ್ಞಾನಿಕವಾಗಿ ಕಳಪೆಯಿಂದ ನಿರ್ಮಿಸಿರುವ ಬ್ಯಾರಿ ಕೇಡ್ ಗಳನ್ನು ನಾಜುಕಾಗಿ ದಾಟಿ ಬರುತ್ತಿರುವ ಕಾಡಾನೆಗಳು, ಫಸಲನ್ನು ತಿಂದು ಕೃಷಿಕರಿಗೆ ನಷ್ಟಪಡಿಸುತ್ತಾ ಅರಣ್ಯ ಇಲಾಖೆಗೆ ದಾಸವಾಳ ಮುಡಿಸುತ್ತಿವೆ. ಹೀಗಾಗಿ ಬ್ಯಾರಿ ಕೇಡ್ ಗಳು ಕಾಡಾನೆಗಳನ್ನು ತಡೆಯುವ ಬದಲು ಸ್ಥಳೀಯರಿಗೆ ಕೇವಲ “ಬರೀ ಕೇಡು” ಆಗಿ ಪರಿಣಮಿಸಿದೆ.
ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಯೊಂದಿಗೆ ತೋಡಿ ಕೊಂಡಿರುವ ಅಹವಾಲು ಅರಣ್ಯರೋಧನೆ ಆಗಿದೆ.
ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…
ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…
ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…
ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…