ಜಿಲ್ಲೆಗಳು

ದೊಡ್ಡಗೌಡರ ಕಾಲಿಗೆ ಎರಗಿ ಕಣ್ಣೀರಿಟ್ಟ ಜಿಟಿಡಿ

ಮೈಸೂರು: ಮೂರು ವರ್ಷಗಳಿಂದ ಜಾ.ದಳದೊಂದಿಗೆ ಮುನಿಸಿಕೊಂಡು ದೂರವೇ ಉಳಿದಿದ್ದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅದೇ ಪಕ್ಷದಲ್ಲಿ ಉಳಿಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಜಿ.ಟಿ.ದೇವೇಗೌಡರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದವು. ಪಕ್ಷದಲ್ಲೇ ಉಳಿಸಿಕೊಳ್ಳಲು ಮುಂದಾಗಿದ್ದ ಜಾ.ದಳದ ಪ್ರಯತ್ನ ಯಶಸ್ಸು ಕೊಟ್ಟಿದ್ದು, ತೀವ್ರ ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಅನಾರೋಗ್ಯದ ನಡುವೆಯೂ ಖುದ್ದು ಜಿ.ಟಿ.ದೇವೇಗೌಡರ ಮನೆಗೆ ಗುರುವಾರ ಆಗಮಿಸಿದ್ದರು. ಇದರಿಂದ ಭಾವುಕರಾದ ಜಿ.ಟಿ.ದೇವೇಗೌಡ ಅವರು ಕಣ್ಣೀರು ಹಾಕುತ್ತಲೇ ಜಾ.ದಳದಲ್ಲಿ ಉಳಿಯುತ್ತೇನೆ ಎಂದು ಪ್ರಕಟಿಸಿದರು. ಜಾ.ದಳವನ್ನು ಮತ್ತೆ ಅಧಿಕಾರಕ್ಕೆ ತರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸುವುದಾಗಿಯೂ ತಿಳಿಸಿದರು. ಅಲ್ಲದೆ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನನ್ನನ್ನು ಆಯಾ ಪಕ್ಷಗಳಿಗೆ ಆಹ್ವಾನಿಸಿದ್ದರು. ಉಭಯ ಪಕ್ಷಗಳ ನಾಯಕರಿಗೂ ಕ್ಷಮೆ ಕೋರುತ್ತೇನೆ ಎಂದೂ ಹೇಳಿದರು. ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸೈಲೆಂಟ್ ಶೋರ್ಸ್‌ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಜಾ.ದಳ ಕಾರ್ಯಾಗಾರದ ಗುರುವಾರದ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಾಹ್ನ 1.30ರ ಒಳಗೆ ರಾಹುಕಾಲ ಆರಂಭವಾಗುವ ಮುನ್ನ ವಿ.ವಿ.ಪುರಂನಲ್ಲಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ಪುತ್ರ ಎಚ್.ಡಿ.ಕುಮಾರಸ್ವಾಮಿ, ಮೊಮ್ಮಗ ಸೂರಜ್ ರೇವಣ್ಣ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರೊಂದಿಗೆ ಬಂದಿಳಿಯುತ್ತಿದ್ದಂತೆ ಕುಟುಂಬದವರು ಆತ್ಮೀಯವಾಗಿ ಬರಮಾಡಿಕೊಂಡರು. ಜಿ.ಟಿ.ದೇವೇಗೌಡರ ಪತ್ನಿ ಲಲಿತಾ, ಪುತ್ರಿ ಸೇರಿ ಎಚ್.ಡಿ.ದೇವೇಗೌಡರಿಗೆ ಆರತಿ ಬೆಳಗಿ ಬರಮಾಡಿಕೊಂಡರು.

ಜಿ.ಡಿ.ಹರೀಶ್‌ಗೌಡರನ್ನು ಎಡಗಡೆ ಕೂರಿಸಿಕೊಂಡರೆ, ಬಲಗಡೆ ಮರಿಗೌಡರನ್ನು ಕೂರಿಸಿ ಅವರ ಕೈ ಹಿಡಿದುಕೊಂಡರು. ಬೆನ್ನು ಮತ್ತು ತಲೆ ಸವರಿದಾಗ ಅವರ ಕಂಗಳಲ್ಲಿ ಆನಂದಬಾಷ್ಪ ಕಾಣಿಸಿತು. ಕುಟುಂಬದವರಿಗೆ ಆಶೀರ್ವಾದ ಮಾಡಿದ ದೇವೇಗೌಡರು ಮುಂದಿನ ದಿನಗಳಲ್ಲಿ ಒಟ್ಟಿಗೆ ಹೋಗುವ ಮತ್ತು ನಿಮ್ಮದೇ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಬೇಕೆಂಬ ಮಾತನ್ನು ಹೇಳಿದರು. ನಂತರ, ಜಿ.ಟಿ.ದೇವೇಗೌಡರು ದೊಡ್ಡಗೌಡರಿಗೆ ಹೂವಿನ ಹಾರ ಹಾಕಿ ಕಾಲಿಗೆ ಎರಗಿ ನಮಸ್ಕರಿಸಿದರಲ್ಲದೆ, ಕಣ್ಣೀರು ಸುರಿಸಿದರು. ಈ ವೇಳೆ ಎಚ್.ಡಿ.ದೇವೇಗೌಡರು ಭಾವುಕರಾದರಲ್ಲದೆ, ಪಕ್ಕದಲ್ಲೇ ಕೂರಿಸಿಕೊಂಡರು. ನಂತರ,ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಸೇರಿದಂತೆ ಅನೇಕರಿಗೆ ಶಾಲು ಹೊದಿಸಿ ಹಾರ ಹಾಕಿದರು. ಈ ವೇಳೆ ನೆರೆದಿದ್ದ ಮುಖಂಡರು ನಾಯಕರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.

ಹರೀಶ್‌ ಗೌಡರಿಗೆ ಟಿಕೆಟ್‌ ಖಚಿತ

“ನನ್ನ ಮಗ, ಮೊಮ್ಮಗ ಚುನಾವಣೆಯಲ್ಲಿ ನಿಲ್ಲುವಾಗ ಜಿ.ಟಿ.ದೇವೇಗೌಡರ ಮಗ ಯಾಕೆ ನಿಲ್ಲಬಾರದು? ಈ ಪ್ರಶ್ನೆಯನ್ನು ಯಾಕೆ ಕೇಳುತ್ತೀರಾ? ಈ ಮಾತನ್ನು ನಮ್ಮನ್ನೇ ಯಾಕೆ ಕೇಳ್ತೀರಾʼʼ ಎನ್ನುವ ಮೂಲಕ ದೇವೇಗೌಡರು ಜಿಟಿಡಿ ಜತೆಗೆ ಪುತ್ರ ಹರೀಶ್‌ ಗೌಡರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವುದು ಪಕ್ಕಾ ಎನ್ನುವ ಸುಳಿವು ಮಾಡಿದರು. “ಜಿಟಿ ಅವರಿಗೆ ಈ ಭಾಗದ ನೇತೃತ್ವ ವಹಿಸುತ್ತೇವೆʼʼ ಎಂದು ಹೇಳುವ ಮೂಲಕ ನಾಯಕತ್ವದ ಗೊಂದಲವನ್ನೂ ಪರಿಹರಿಸಿದರು.

ಗೌಡರ ಕನಸು ನನಸು ಮಾಡುವೆ…

“ಮಾಜಿ ಪ್ರಧಾನಿ ದೊಡ್ಡಗೌಡರ ಪ್ರೀತಿ ಕಟ್ಟಿ ಹಾಕಿದೆ. ಮುಂದೆ ಜಾ.ದಳದಲ್ಲಿ ಉಳಿಯುತ್ತೇನೆ. ಮೂರು ವರ್ಷಗಳ ಕಾಲ ದೂರ ಇದ್ದರೂ ನನ್ನ ಬಗ್ಗೆ ಒಂದಿಷ್ಟು ಪ್ರೀತಿ ಕಡಿಮೆಯಾಗಿರಲಿಲ್ಲ. ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದ್ದಾರೆ. ಅವರು ಕಂಡ ಕನಸು ನನಸು ಮಾಡುತ್ತೇವೆ-ʼʼ ಎನ್ನುವ ಮೂಲಕ ಜಿ.ಟಿ.ದೇವೇಗೌಡರು ಮೂರು ವರ್ಷಗಳ ತಮ್ಮ ರಾಜಕೀಯ ಗೊಂದಲಕ್ಕೆ ತೆರೆ ಎಳೆದರು

andolana

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

10 hours ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

12 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

14 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

14 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

16 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

16 hours ago