ಮೈಸೂರು: ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವನ್ನು ಅಳವಡಿಸುವ ಮೂಲಕ ಡಯಾಲಿಸಿಸ್ ಸೇವೆಯನ್ನು ಉನ್ನತೀಕರಿಸಿದೆ.
ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಯಾಲಿಸಿಸ್ ಯಂತ್ರವಾಗಿದ್ದು, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗಕ್ಕೆ ಈ ೫ ಯಂತ್ರಗಳ ಸೇರ್ಪಡೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸುರಕ್ಷತೆಯಲ್ಲಿ ನಿರಂತರ ಸುಧಾರಣೆಯ ಹಾದಿಗೆ ಸಾಕ್ಷಿಯಾಗಿದೆ.
ತೀವ್ರ ನಿಗಾ ಘಟಕದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ನೀಡುವ ಡಾಂಲಿಸಿಸ್ ಚಿಕಿತ್ಸೆಯಲ್ಲಿ ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಜನಪ್ರಿಯವಾಗುತ್ತಿರುವ ಚಿಕಿತ್ಸ ವಿಧಾನವಾಗಿದೆ. ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಸಾಂಪ್ರದಾಯಿಕ ಇಂಟರ್ಮಿಟೆಂಟ್ ಹಿಮೋ ಡಯಾಲಿಸಿಸ್ ಮತ್ತು ಕಂಟಿನ್ಯೂಸ್ ರೆನಲ್ ರಿಪ್ಲೇಸೆಮೆಂಟ್ ಥೆರಪಿ ನಡುವಿನ ಮಧ್ಯಂತರ ಹೈಬ್ರಿಡ್ ಡಯಾಲಿಸಿಸ್ ವಿಧಾನವಾಗಿದೆ.
ಸ್ಲೆಡ್ ಚಿಕಿತ್ಸಾ ವಿಧಾನದ ಪ್ರಯೋಜನಗಳೆಂದರೆ ಸಣ್ಣ ದ್ರಾವಣಗಳ ಸಮರ್ಥ ತೆರವು, ಉತ್ತಮ ಹಿಮೋಡೈನಾಮಿಕ್ ಸಹಿಷ್ಣುತೆ. ರೋಗಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ವಿಧಾನದಿಂದ ರೋಗಿಗಳು ಆಸ್ಪತ್ರೆಯಲ್ಲಿ ಕಳೆಯಬೇಕಾದ ಸಾಮ್ಯ ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚ ಎರಡೂ ಕಡಿಮೆಯಾಗಲಿವೆ.
ಉಚಿತ ಸಾರಿಗೆ ಸೌಲಭ್ಯ: ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಉಚಿತ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ. ಈ ಉಚಿತ ಸೇವೆಯು ತುಂಬಾ ಉಪಯುಕ್ತ ವಾಗಿದೆ. ಏಕೆಂದರೆ ಡಯಾಲಿಸಿಸ್ಗೆ ಒಳಗಾಗುವ ರೋಗಿಗಳು ದುರ್ಬಲರಾಗುತ್ತಾರೆ ಮತ್ತು ಕಾರ್ಯ ವಿಧಾನದ ನಂತರ ಸ್ನಾಯು ಸೆಳೆತ, ಬಿಪಿ ಏರಿಳಿತಗಳು ಮತ್ತು ಮುಂತಾದವುಗಳನ್ನು ಅನುಭವಿಸುತ್ತಾರೆ. ಸಾರಿಗೆಯನ್ನು ಹುಡುಕುವ ಯಾವುದೇ ಒತ್ತಡವಿಲ್ಲದೆ ರೋಗಿಗಳು ಮನೆಗೆ ತೆರಳಿ ಚೇತರಿಸಿಕೊಳ್ಳಬಹುದಾಗಿದೆ. ಡಯಾಲಿಸಿಸ್ ರೋಗಿಗಳು ಸಹಾಯವಾಣಿ ಸಂಖ್ಯೆ: 8884458893 ಕರೆ ಮಾಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಕುರಿತು ನಿನ್ನೆ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದ ಗೌತಮ್ ಎಂಬಾತನ…
ಮೈಸೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮಾರ್ಚ್.17ರವರೆಗೂ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ 35,835 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,…
ಮೇಲುಕೋಟೆ: ಮಾ.೨೩ರಿಂದ ಏ.೩ರವರೆಗೆ ನಡೆಯುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು…
ಮೊಬೈಲ್ ಸ್ಟೇಟಸ್ ! ಶಾಲೆಗಳಲ್ಲಿ ಮೊಬೈಲ್ ನಿಷೇಧ..? ಸರ್ಕಾರದ ಮೆಸೇಜ್ಗೆ ಲೈಕ್ ನೀಡಬಹುದು ಪೋಷಕರು ! ಆದರೆ, ಸ್ಟೂಡೆಂಟ್ಗಳು ?…
ಫೆ.೨೮ರ ಶನಿವಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಪಾಠವನ್ನು ಮುಗಿಸಿ ಮಾದರಿ ಪ್ರಶ್ನೆ ಪತ್ರಿಕೆ…
ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕು ವನಸಿರಿಗೆ ಹೆಸರುವಾಸಿ, ಇಲ್ಲಿನ ಉತ್ತಮ ಹವಾಗುಣಕ್ಕೆ ಸನಿಹದಲ್ಲೇ ಇರುವ ಅರಣ್ಯ ಪ್ರದೇಶ ಕೂಡ…