ಜಿಲ್ಲೆಗಳು

ಕಾಡಾನೆಗಳೇಕೆ ನಾಡಮುಖಿ !

ನಾಡಿನತ್ತ ಮುಖ ಮಾಡುತ್ತಿರುವ ಗಜಪಡೆ ತಡೆಗೆ ಅರಣ್ಯ ಇಲಾಖೆ ಏನು ಮಾಡಬೇಕು?

– ಪ್ರಶಾಂತ್ ಎಸ್ ಮೈಸೂರು

ಮೈಸೂರು: ಆಹಾರ ಅರಸಿ ನಾಡಿಗೆ ಬಂದು ಜನರ ಜೀವ ತೆಗೆದ ಆರೋಪದ ಜತೆಗೆ ತಮ್ಮ ಜೀವವನ್ನೂ ಕಳೆದುಕೊಳ್ಳುತ್ತಿರುವ ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಏನು ಮಾಡಬೇಕು?. ಕಾಡಿಗೆ ಅಟ್ಟಬೇಕೋ ಅಥವಾ ಸೆರೆ ಹಿಡಿದು ಪಳಗಿಸಬೇಕೋ?. ಇಂಥ ದ್ವಂದ್ವದಲ್ಲಿ ಅರಣ್ಯ ಇಲಾಖೆ ದಶಕಗಳನ್ನೇ ಕಳೆದಿದೆ.

ದೇಶದಲ್ಲಿ ೬,೦೦೦ಕ್ಕಿಂತ ಹೆಚ್ಚೂ ಆನೆಗಳು ಕರ್ನಾಟಕದಲ್ಲಿದೆ. ಆನೆಗಳ ರಕ್ಷಣೆಗೆ ೧೯೯೨ರಲ್ಲಿಯೇ ಆನೆ ಯೋಜನೆಯನ್ನೂ ಜಾರಿಗೊಳಿಸಲಾಗಿದೆ. ದಟ್ಟವಾದ ಅರಣ್ಯಕ್ಕೆ ಸಮೀತವಾಗಿದ್ದ ಗಜರಾಜ ಇತ್ತೀಚಿನ ದಿನಗಳಲ್ಲಿ ಗ್ರಾಮಗಳತ್ತ ಕಾಲಿಡುತ್ತಿರುವುದು ಕ್ರಮೇಣ ಹೆಚ್ಚಾಗಿದೆ. ಇದು ಆತಂಕದ ಜತೆಗೆ ನಿರ್ವಹಣೆ ಸವಾಲುಗಳನ್ನು ತಂದೊಡ್ಡಿದೆ.

ಕರ್ನಾಟಕದಲ್ಲಿ ಪ್ರತಿ ವರ್ಷ ಸಾಯುತ್ತಿರುವ ಆನೆಗಳ ಸಂಖ್ಯೆಯೇ ಸರಾಸರಿ ೧೦೦. ಕಳೆದ ಹತ್ತು ವರ್ಷದಲ್ಲಿ ಒಂದು ಸಾವಿರಕ್ಕೂ ಆನೆಗಳು ಅಂತ್ಯ ಕಂಡಿವೆ. ಇದರಲ್ಲಿ ಸಹಜ ಸಾವಿನ ಪ್ರಮಾಣ ೬೦ರಿಂದ ೬೫ರಷ್ಟಿದ್ದರೆ, ಅಸ್ವಾಭಾವಿಕವಾಗಿ ಶೇ.೩೦ರಿಂದ ೩೫ ರಷ್ಟಿರುವುದು ಅರಣ್ಯ ಇಲಾಖೆ ಅಂಕಿ ಸಂಖ್ಯೆಗಳೇ ಹೇಳುತ್ತವೆ. ಮತ್ತೊಂದು ಕಡೆ ಆನೆ ದಾಳಿಯಿಂದ ಮಾನವ ಸಾವಿನ ಪ್ರಮಾಣವೂ ಏರಿಕೆಯಾಗಿದೆ. ೮ ವರ್ಷದಲ್ಲಿ ಮಾನವ ಹಾನಿ ಪ್ರಮಾಣ ಸರಿ ಸುಮಾರು ೨೦೦. ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಸೇರಿ ೧೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಡಾನೆ ಉಪಟಳವಿದ್ದರೆ ಹಾಸನ, ಕೊಡಗು ಜಿಲ್ಲೆಯಲ್ಲಂತೂ ಮಿತಿ ಮೀರಿದೆ. ಇಲ್ಲಿಯೇ ಸಾವಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ.

ಬಿ ಕೆ ಸಿಂಗ್‌ ಮತ್ತು ರಂಗರಾವ್‌ ರವರು

ಸಮಸ್ಯೆಗಳ ನಾನಾ ಮುಖ: ಮತ್ತೊಂದು ಕಡೆ ಆನೆಗಳ ಸಂಘರ್ಷ ತಪ್ಪಿಸಲು ಸಮಸ್ಯೆ ಇರುವ ಹಳೆ ಮೈಸೂರು ಭಾಗದ ಹಲವು ಕಡೆ ರೈಲು ಕಂಬಿ ಅಳವಡಿಸಲಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ರೂಪಿಸಿಲ್ಲ . ಸರ್ಕಾರ ಯೋಜನೆಗೆ ಅನುದಾನವನ್ನು ಸೂಕ್ತ ಸಮಯದಲ್ಲಿ ಒದಗಿಸದಿದ್ದರೆ ಯೋಜನೆ ಉದ್ದೇಶವೇ ಈಡೇರುವುದೇ ಇಲ್ಲ ಎನ್ನುವ ಅಭಿಪ್ರಾಯಗಳು ಅರಣ್ಯ ಇಲಾಖೆಯಲ್ಲೇ ಇದೆ.
ಇದನ್ನೇ ಪಿಸಿಸಿಎಫ್ ಆಗಿ ದಕ್ಷತೆಯಿಂದ ಕೆಲಸ ಮಾಡಿ ನಿವೃತ್ತರಾಗಿ ಈಗಲೂ ಬೇರೆ ರಾಜ್ಯಗಳ ಅರಣ್ಯ ಸಮಿತಿಗಳಲ್ಲಿ ಸಕ್ರಿಯರಾಗಿರುವ ಬಿ.ಕೆ.ಸಿಂಗ್ ಅವರು ಒತ್ತಿ ಹೇಳುತ್ತಾರೆ.
ಆನೆಗಳು ಹಾಗೂ ವಾನವನ ಸಂಘರ್ಷ ತಡೆುಂಲು ಸರ್ಕಾರ ಈಗಾಗಲೇ ಕೈಗೊಂಡಿರುವ ಯೋಜನೆ ಸರಿಯಿಲ್ಲ. ಯಾಕೆಂದರೆ ಆನೆಗಳು ಇರುವ ಎಲ್ಲ ಕಡೆ ರೈಲ್ವೆ ಕಂಬಿ ಹಾಕಿದರೆ ಆನೆಗಳು ಹೊರಗೆ ಬರುವುದಿಲ್ಲ ಅಂದುಕೊಂಡಿದ್ದಾರೆ. ಆದರೆ ಹೆಚ್ಚು ಆನೆಗಳು ಇರುವ ಜಾಗಕ್ಕೆ ಹೆಚ್ಚು ಗಮನಕೊಟ್ಟು ಮೊದಲು ಆ ಭಾಗಕ್ಕೆ ರೈಲ್ವೆ ಕಂಬಿ ವ್ಯವಸ್ಥೆ ಮಾಡಿದಲ್ಲಿ ಮಾತ್ರ ಈ ಸಂಘರ್ಷ ಕಡಿಮೆ ಆಗುತ್ತದೆ ಎನ್ನುವ ಬಿಕೆ ಸಿಂಗ್ ಅವರ ಅಭಿಪ್ರಾಯ ಸಮಸ್ಯೆಯ ಆಳ ಅಗಲವನ್ನು ತೆರೆದಿಡುತ್ತದೆ.

ಸೆರೆ ಕಾರ್ಯಾಚರಣೆ ಸೂಕ್ತ: ೮ ವರ್ಷದ ಹಿಂದೆ ಹಾಸನ ಹಾಗೂ ಕೊಡಗಿನಲ್ಲಿ ಕಾರ್ಯಾಚರಣೆ ನಡೆಸಿ ೨೨ ಆನೆಗಳನ್ನು ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆ ನಡೆಯದೇ ಮತ್ತೆ ಆನೆಗಳ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ.

೨೦೧೪ರಲ್ಲಿ ಹಾಸನ– ಕೊಡಗಿನಲ್ಲಿ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಹಿರಿಯ ಐಎಫ್‌ಎಸ್ ಅಧಿಕಾರಿ ಜಿ.ವಿ.ರಂಗರಾವು ಅವರು ಈ ಸಮಸ್ಯೆಗೆ ನೀಡುವ ಸಲಹೆ ಸೂಕ್ತವೇ ಆಗಿದೆ. ಪ್ರತಿ ವರ್ಷ ೩೦ರಿಂದ ೪೦ ಮಂದಿ ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಬೆಳೆ ನಷ್ಟ, ಮನೆ ಹಾನಿ ಸೇರಿ ಪರಿಹಾರವನ್ನೂ ನೀಡಲೇಬೇಕಿದೆ. ವರ್ಷಕ್ಕೆ ಇದೇ ೫ರಿಂದ ೬ ಕೋಟಿ ದಾಟಲಿದೆ. ಇದರ ಬದಲು ಆನೆಗಳ ಸೆರೆ ಕಾರ್ಯಾಚರಣೆ ಮಾಡಿದರೆ ೧ ಕೋಟಿ ರೂ.ಗಳಷ್ಟು ಬೇಕಾಗಬಹುದು. ಜನರ ನೆಮ್ಮದಿಗಿಂತ ಮತ್ತೇನಿದೆ ಎಂದು ಪ್ರಶ್ನಿಸುವ ಅವರ ಮಾತುಗಳಲ್ಲಿಯೇ ಈ ಸಮಸ್ಯೆಗೆ ಸಲಹೆಯಿದೆ.

ಅರಣ್ಯ ಇಲಾಖೆ ರೂಪಿಸಿದ ಯೋಜನೆಗಳು ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ನೀಡುವಂತಿರಬೇಕು. ಸರ್ಕಾರದ ಆರ್ಥಿಕ ನೆರವು ಸಮರ್ಪಕವಾಗಿರಬೇಕು. ಆನೆ ಹಾವಳಿ ಇರುವ ಪ್ರದೇಶದಲ್ಲಿ ನಿರಂತರ ಜಾಗೃತಿ ಮೂಡಿಸಿ ಜೀವ ಹಾನಿ ತಡೆಯಬೇಕು ಎನ್ನುವ ಸಲಹೆಗಳನ್ನು ಸರ್ಕಾರಕ್ಕೆ ದಶಕದ ಹಿಂದೆ ರೂಪಿಸಿದ ಟಾಸ್ಕ್ ಫೋರ್ಸ್ ನೀಡಿತ್ತು. ಈಗಲೂ ಅದನ್ನು ಜಾರಿಗೊಳಿಸಿದರೆ ಮತ್ತೊಂದು ಟಾಸ್ಕ್‌ಫೋರ್ಸ್ ಅಗತ್ಯವೇ ಇಲ್ಲ ಎಂದು ಹಲವರು ಸಲಹೆ ನೀಡುತ್ತಾರೆ.

==============


ಆನೆ ನೋಡುವುದಕ್ಕೆ ಆಳೆತ್ತರವಿದ್ದರೂ ಮೃದು ಸ್ವಭಾವವುಳ್ಳ ಅಪರೂಪದ ಪ್ರಾಣಿ. ಯಾರ ಮೇಲೂ ಏಕಾಏಕಿ ದಾಳಿ ಮಾಡುವುದಿಲ್ಲ. ಆಹಾರ ಅರಸಿ ಬರುವ ಜತೆಗೆ ಆನೆ ಹೆಚ್ಚು ನಡೆಯುತ್ತದೆ. ಸಮಸ್ಯೆ ಇರುವ ಕಡೆಗೆ ಅರಣ್ಯ ಅಧಿಕಾರಿಗಳು ಆಗಾಗ್ಗೆ ಆನೆಗಳ ಬಗ್ಗೆ ಜಾಗೃತಿ ಮೂಡಿಸಿದರೆ ಸಂಘರ್ಷ ತಗ್ಗಿಸಬಹುದು.
-ಮನೋಜ್ ಗಾನಾ, ವನ್ಯಜೀವಿ ಪ್ರಿಯರು



ಸರ್ಕಾರದ ಆದೇಶದಂತೆ ಸಮಯಕ್ಕೆ ಸರಿಯಾಗಿ ಕಾರ್ಯಪಡೆ ಸಮಿತಿ ಮಾಡುತ್ತಿದ್ದು, ಆನೆ ಮತ್ತು ಮಾನವ ಸಂಘರ್ಷ ತಡೆಯಲು ಈಗಾಗಲೇ ಸೂಕ್ತ ವ್ಯವಸ್ಥೆ ಮಾಡಿದೆ.ಹೆಚ್ಚು ಆನೆಗಳು ಇರುವ ಪ್ರದೇಶದಲ್ಲಿ ರೈಲ್ವೆ ಕಂಬಿ, ಸೋಲಾರ್ ಅಳವಡಿಕೆ ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ.
– ಶಾಶ್ವತಿ ಮಿಶ್ರಾ ಆನೆ ಯೋಜನೆ ನಿರ್ದೇಶಕರು.

andolanait

Recent Posts

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

50 seconds ago

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

24 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

24 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

24 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

24 hours ago