ಜಿಲ್ಲೆಗಳು

ದೊಡ್ಡಗಟ್ಟಿ ಪ್ರಕಾಶನದಿಂದ ‘ಮಹಾ ದಾಸೋಹಿ’ ಕೃತಿ ಬಿಡುಗಡೆ

ಮೈಸೂರು: ಕಾಯಕ ಮತ್ತು ದಾಸೋಹದ ತತ್ವ, ಸಜ್ಜನಿಕೆ, ಸರಳತೆ, ಅರಿವಿನ ನಾಡಿನ ಪ್ರಖ್ಯಾತ ಧರ್ಮಗುರು, ಮಹಾಚೇತನ ಗುರುಮಲ್ಲೇಶ್ವರರು ಎಂದು ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.

ನಗರದ ಅಗ್ರಹಾರದ ಜೆಎಸ್‌ಎಸ್ ಶ್ರೀ ರಾಜೇಂದ್ರ ಭವನದಲ್ಲಿ ದೊಡ್ಡಗಟ್ಟಿ ಪ್ರಕಾಶನ  ಸಂಸ್ಥೆಯು ಹೊರ ತಂದಿರುವ ‘ಮಹಾ ದಾಸೋಹಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ನೂರಾರು ವರ್ಷಗಳಿಂದ ಹಸಿದವರಿಗೆ ದೇವನೂರು ಗುರುಮಲ್ಲೇಶ್ವರ ಮಠ ದಾಸೋಹ ನಡೆಸುತ್ತ ಬಂದಿದೆ. ಇಂತಹ ಅನ್ನದಾಸೋಹ ಪರಂಪರೆಯನ್ನುಗುರು ಮಲ್ಲೇಶ್ವರರು ಹುಟ್ಟು ಹಾಕಿ. ಹಸಿದು ಬಂದವರಿಗೆ ದಾಸೋಹ ನೀಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಅನ್ನ ಭಿಕ್ಷೆ ಪಡೆದು ಬರುತ್ತಿದ್ದರು ಎಂದರು.

ಆ ಪರಂಪರೆ ಇಂದಿಗೂ ಮುಂದುವರಿದೆ. ಲೇಖಕರು ಪುಸ್ತಕವನ್ನು ಕಳುಹಿಸುವ ಜೊತೆಗೆ ಕಾರ್ಯಕ್ರಮಕ್ಕೆ ಪತ್ರ ಕೂಡ ಹಾಕಿದ್ದರು. ದೊಡ್ಡ ವ್ಯಕ್ತಿತ್ವ ಕುರಿತು ಪುಸ್ತಕ ಬರೆದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಾರದೆ ಇರಲು ಸಾಧ್ಯವಿಲ್ಲ. ಹಾಗಾಗಿ ಬಂದಿರುವೆ ಎಂದರು.

ಲೇಖಕರು ಕೃತಿಯಲ್ಲಿ ಶರಣ ಸಾಹಿತ್ಯದ ಸಂದೇಶಗಳನ್ನು ಅಳವಡಿಸಿದ್ದಾರೆ. ಕಾದಂಬರಿ ಪ್ರಕಾರವನ್ನು ಬಳಸಿದ್ದಾರೆ. ಈ ಕೃತಿಗಾಗಿ ೫೦ ಆಕಾರ ಗ್ರಂಥಗಳನ್ನು ಅಧ್ಯಯನ ಮಾಡಿದ್ದು, ಗುರುಮಲ್ಲೇಶ್ವರರು ಪವಾಡ ಪುರುಷರೆಂದು ಕೃತಿಯಲ್ಲಿ ದಾಖಲಿಸಲಾಗಿದೆ. ಪವಾಡವೆಂದರೆ ಮಂತ್ರದಿಂದ ಮಾಡುವುದಲ್ಲ. ಒರಟನಾದವನನ್ನು ಸಾತ್ವಿಕವಾಗಿ ಮಾಡುವುದೇ ಪವಾಡ. ಒಂದು ಕಾಲಮಾನದ ನೈಜ ಅಂಶಗಳನ್ನು ದಾಖಲು ಮಾಡಿದ್ದಾರೆ ಎಂದು ಹೇಳಿದರು.

ಗುರುಮಲ್ಲೇಶ್ವರರು ವಿರಾಟ ಚೇತನ ಅವರು ದಾಖಲಿಸಲಿರುವ ಪುಸ್ತಕ ಇದು. ಗುರುಮಲ್ಲೇಶ್ವರರು ಶ್ರೇಷ್ಠ ಲೋಕ ಪ್ರಜ್ಞಾ ಜೀವಿ. ಅವರ ಬಗ್ಗೆ ಇಂದಿನ ತಲೆಮಾರಿಗೆ ತಿಳಿಸಲು ೭೦೦ ಪುಟಗಳ ಬೃಹತ್ ಗ್ರಂಥವನ್ನು ಲೇಖಕರು ರಚಿಸಿದ್ದಾರೆ ಎಂದು ಬಣ್ಣಿಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ಸೋಮಳ್ಳಿಯ ಶ್ರೀ ವೀರಸಿಂಹಾಸನ ಶಿಲಾಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ, ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಚಂದ್ರಶೇಖರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಶೂನ್ಯದ ಭಾಷೆ:

೪೫೦ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಏಕನಾಥ, ನಿವೃತಿ ನಾಥ ಮತ್ತು ಮುಕ್ತಬಾಯಿ ಎಂಬ ಮೂರು ಜನ ಸಂತರಿದ್ದರು. ಏಕನಾಥರು ಪತ್ರವೊಂದನ್ನು ಬರೆದು, ತಮ್ಮ ಶಿಷ್ಯನ ಕೈಯಲ್ಲಿ ಕೊಟ್ಟು ನಿವೃತ್ತಿ ನಾಥನಿಗೆ ತಲುಪಿಸಲು ಹೇಳಿದರು. ನಿವೃತಿನಾಥರು ಪತ್ರವನ್ನು ಓದಿ ಕಣ್ಣಿಗೆ ಒತ್ತಿಕೊಂಡು ಆ ಶಿಷ್ಯನ ಕೈಯಲ್ಲಿಯೇ ಮುಕ್ತಬಾಯಿ ಅವರಿಗೆ ತಲುಪಿಸಿದರು. ಮುಕ್ತಬಾಯಿ ಅವರು ಪತ್ರವನ್ನು ನೋಡಿ, ಮತ್ತೆ ಏಕನಾಥನಿಗೆ ತಲುಪಿಸುವಂತೆ ಶಿಷ್ಯನಿಗೆ ಕೊಟ್ಟರು. ಈ ವೇಳೆ ಶಿಷ್ಯನು ತನ್ನ ಕುತೂಹಲ ತಡೆಯಲಾರದೆ ಪತ್ರವನ್ನು ತೆರೆದು ನೋಡಿಯೇ ಬಿಟ್ಟನು. ಆ ಪತ್ರವೂ ಖಾಳೆ ಅಳೆಯಾಗಿತ್ತು. ಮತ್ತೆ ಅದನ್ನು ಏಕನಾಥನ ಕೈಗೆ ಕೊಟ್ಟು ಗುರುಗಳೇ ಇದರಲ್ಲಿ ಏನು ಇಲ್ಲ… ಇದರ ಅರ್ಥ ಏನೆಂದು ಕೇಳುತ್ತಾನೆ.

ಆಗ ಏಕನಾಥರು, ‘ಬದುಕಿಗೆ ಬೇಕಾದ ಎಲ್ಲವೂ ಖಾಲಿ ಅಳೆಯಲ್ಲಿಯೇ ಇದೆ. ಆದರೆ, ಇಲ್ಲಿರುವ ಭಾಷೆ ಶೂನ್ಯ ಭಾಷೆಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಬೇಕಿರುವುದು ಅಂತರಂಗ. ಆಗ ಶೂನ್ಯ ಭಾಷೆ ಕಲಿಯಲು ಏನು ಬೇಕೆಂದು ಪ್ರಶ್ನೆ ಕೇಳುತ್ತಾನೆ ಆಗ ಜ್ಞಾನ ಮತ್ತು ಮೌನದ ಮೂಲಕ ಶೂನ್ಯ ಭಾಷೆಯನ್ನು ಅರ್ಥ ಮಾಡಿಕೊಳ್ಳಬಹುದು’ ಸಂದೇಶವನ್ನು ಕಥೆಯ ಮೂಲಕ ಡಾ.ಗೊ.ರು.ಚನ್ನಬಸಪ್ಪ ಬಿಡಿಸಿ ಹೇಳಿದರು.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

7 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

9 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

9 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

23 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago