ಜಿಲ್ಲೆಗಳು

ಲಾಟರಿ ಮೂಲಕ ಕುರಿಮರಿ, ನೀರಿನ ಟ್ಯಾಂಕ್‌ ವಿತರಣೆ

ಮೈಸೂರು: ಎಸ್.ಪ್ರಕಾಶ್ ಪ್ರಿಯಾದರ್ಶನ್ ಸ್ನೇಹಬಳಗದ ವತಿಯಿಂದ ಶನಿವಾರ 10 ಕುರಿಮರಿಗಳು ಮತ್ತು ನೀರಿನ ಕ್ಯಾನ್‌ಗಳನ್ನು ವಿತರಿಸಲಾಯಿತು.

ನಗರದ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ‘ಕುರುಬರಿಂದ ಕುರುಬರಿಗಾಗಿ’ ಆಯೋಜಿಸಿದ್ದ ಕುರಿಮರಿಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಲಾಟರಿ ಎತ್ತುವ ಮೂಲಕ ಹತ್ತು ಕುರಿಮರಿ ಮತ್ತು ನೀರಿನ ಕ್ಯಾನ್‌ಗಳನ್ನು ಆಧ್ಯಾತ್ಮಿಕ ಗುರು ರಾಮಲಿಂಗು ಗುರೂಜಿ ಅವರು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಕುರಿಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಿ, ಪ್ರತಿಯೊಬ್ಬರೂ ಸಹಾಯ ಮನೋಭಾವ ಬೆಳಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರರಿಗೆ ಸ್ಪಂದಿಸಬೇಕು, ಮಾನವೀಯತೆಯನ್ನು ಬೆಳಸಿಕೊಳ್ಳಬೇಕು. ಇದು ಶ್ಲಾಘನೀಯ ಸೇವಾ ಕಾರ್ಯ ಎಂದರು.

ಹುಣಸೂರು, ಕೆ.ಆರ್.ನಗರ, ಪಿರಿಯಾಪಟಣ್ಣ ತಾಲ್ಲೂಕಿನ ಇಬ್ಬರಿಗೆ, ತಿ.ನರಸೀಪುರ ತಾಲ್ಲೂಕಿನ ಮೂವರಿಗೆ ಮತ್ತು ವರುಣ ಕ್ಷೇತ್ರದ ಒಬ್ಬರಿಗೆ ಕುರಿಮರಿಗಳನ್ನು ವಿತರಣೆ ಮಾಡಲಾಯಿತು. ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯಾದರ್ಶನ್, ಪ್ರೊ.ಪ್ರೇಮಕುಮಾರಿ, ಮುಖಂಡರಾದ ಗಿರೀಶ್ ಗೌಡ, ಪ್ರಮೋದ್, ಅಕ್ಷಯ್, ಉಷಾ ರಮೇಶ್, ಬಾನು, ಮಹೇಂದ್ರಕಾಗಿನೆಲೆ, ಸುರೇಶ್, ಸುಂದರ್‌ರಾಜ್, ಪ್ರಕಾಶ್ ಗೌಡ, ಪುರುಷೋತ್ತಮ್, ಎಂ.ದೀಪಕ್,ಲಿಂಗರಾಜು, ಎಲ್.ಆರ್.ಪ್ರಮೋದ್, ಪವನ್ ಕುಮಾರ್ ಇತರರು ಹಾಜರಿದ್ದರು.

 

andolanait

Recent Posts

ಇರಾನ್‌ ಮೇಲೆ ಅಮೇರಿಕಾ-ಇಸ್ರೇಲ್‌ ವೈಮಾನಿಕ ದಾಳಿ: ಇರಾನ್‌ ಗುಪ್ತಚರ ಸಚಿವ ಸಾವು

ಟೆಹರಾನ್:‌ ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ಜಂಟಿ ದಾಳಿ ಮುಂದುವರಿಸಿದ್ದು, ಇರಾನ್‌ ಗುಪ್ತಚರ ಸಚಿವ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.…

35 mins ago

ಸರ್ಕಾರ ರಾಜ್ಯದ ಜನರ ಭರವಸೆ ನುಚ್ಚು ನೂರು ಮಾಡಿದೆ: ವಿಜಯೇಂದ್ರ ಆಕ್ರೋಶ

ಕಲಬುರ್ಗಿ: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗೆ ಆಡಳಿತ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ಮಾಡಿದ್ದಾರೆ.…

47 mins ago

ಧುರಂಧರ್‌-2 ಚಿತ್ರ ವೀಕ್ಷಿಸಿ ನಟಿ ರಮ್ಯಾ ಗರಂ: ಫ್ಯಾನ್ಸ್‌ಗೆ ಏನಂದು ಗೊತ್ತಾ?

ಬಹುನಿರೀಕ್ಷಿತ ಧುರಂಧರ್‌-2 ಸಿನಿಮಾ ಬಗ್ಗೆ ನಟಿ ರಮ್ಯಾ ಬರೆದಿರುವ ಟೂ ಪೇಜ್‌ ವಿಮರ್ಶೆ ಈಗ ಸೋಚಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಬ್ಬಿಸಿದೆ.…

1 hour ago

ಕಬಿನಿ ಕಾಡಿನಲ್ಲಿ ಹುಲಿಗಳ ಸ್ವಚ್ಛಂದ ವಿಹಾರ: ವಿಡಿಯೋ ವೈರಲ್‌

ಎಚ್.ಡಿ.ಕೋಟೆ: ಕಬಿನಿ ಕಾಡಿನಲ್ಲಿ ಹುಲಿ ಮರಿಗಳು ಮಣ್ಣಿನ ವಾಸನೆ ಸವಿದು ಮೈಮರೆತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.…

1 hour ago

ಮಂಡ್ಯ| ಮೂರು ಮರಿಗಳಿಂದ ದೂರವಾಗಿದ್ದ ತಾಯಿ ಚಿರತೆ ಕೊನೆಗೂ ಸೆರೆ

ಮಂಡ್ಯ: ತಾಲ್ಲೂಕಿನ ಭೂತನಹೊಸೂರು ಗ್ರಾಮದ ಸಮೀಪದ ಕಬ್ಬಿನ ಗದ್ದಯೊಂದರಲ್ಲಿ ಪತ್ತೆಯಾಗಿದ್ದ ಮೂರು ಚಿರತೆ ಮರಿಗಳಿಂದ ದೂರವಾಗಿದ್ದ ತಾಯಿ ಚಿರತೆ ಬೋನಿನಲ್ಲಿ…

2 hours ago

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆಹಾರ ರೈಸ್‌ಮಿಲ್‌ನಲ್ಲಿ ಪತ್ತೆ

ಕೆ.ಆರ್‌.ಪೇಟೆ: ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿದ ಆಹಾರದ ದಾಸ್ತಾನು ರೈಸ್‌ಮಿಲ್‌ನಲ್ಲಿ ಪತ್ತೆಯಾಗಿದೆ. ಮಾರ್ಚ್.‌17ರಂದು ರೈತ…

2 hours ago