ಜಿಲ್ಲೆಗಳು

ದಸರಾ ಆನೆ ಲಕ್ಷ್ಮಿಗೂ ಅರಮನೆಗೂ ಇರುವ ನಂಟೇನು ಗೊತ್ತಾ ?

ಆಂದೋಲನ ವಿಶೇಷ
ಮೈಸೂರು: ಮೈಸೂರು: ಗಂಡಾನೆ ಮರಿಗೆ ಜನ್ಮ ನೀಡಿರುವ ದಸರೆ ಆನೆ ಲಕ್ಷ್ಮಿ ಈಗ ಮೈಸೂರು ಅರಮನೆ ಆವರಣದಲ್ಲಿ ಬಾಣಂತನದ ಸಂಭ್ರಮದಲ್ಲಿದೆ. ಲಕ್ಷ್ಮಿ ಪುತ್ರನಿಗೆ ಸ್ವತ: ರಾಜವಂಶಸ್ಥೆ ಪ್ರಮೋದಾದೇವಿ ಅವರೇ “ಶ್ರೀ ದತ್ತಾತ್ತೇಯʼ ಎಂದು ನಾಮಕರಣವನ್ನೂ ಮಾಡಿದ್ದಾರೆ. ಆದರೆ ಲಕ್ಷ್ಮಿಗೂ ರಾಜಮನೆತನಕ್ಕೂ ಇರುವ ನಿಕಟ ಸಂಬಂಧದ ವಿಚಾರ ನಿಮಗೆ ಗೊತ್ತಾ ? ಮರಿಯಾಗಿದ್ದ ಈ ಆನೆಯನ್ನು ಪೋಷಿಸಿ ಬೆಳೆಸಿದ್ದು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಕೊನೆಯ ಪುತ್ರಿ ವಿಶಾಲಾಕ್ಷಿ ದೇವಿ ಅವರು. ಶ್ರೀಕಂಠದತ್ತ ಒಡೆಯರ್ ಅವರ ಕೊನೆಯ ತಂಗಿ ವಿಶಾಲಾಕ್ಷಿ ದೇವಿ ಮತ್ತವರ ಪತಿ ಗಜೇಂದ್ರ ಸಿಂಗ್ ದಂಪತಿಯ ವನ್ಯಜೀವಿ ಪ್ರೇಮ ಮೈಸೂರಿನ ಎಲ್ಲರಿಗೂ ತಿಳಿದ ವಿಚಾರ.
ಈ ದಂಪತಿ ಬಂಡೀಪುರದಲ್ಲಿ ʼಟಸ್ಕರ್ ಟ್ರೈಲ್ಸ್ʼ ಹೆಸರಿನಲ್ಲಿ ಅನಾಥ ಕಾಡು ಪ್ರಾಣಿಗಳ ಆರೈಕೆಗಾಗಿಯೇ ರೆಸಾರ್ಟ್ ವೊಂದನ್ನು ತೆರೆದಿದ್ದರು. ಅರಣ್ಯ ಇಲಾಖೆ ಕೊಡ ಮಾಡಿದ ಎರಡು ಚಿರತೆ ಮರಿಗಳು ಇವರ ಕುಟುಂಬದ ಭಾಗವಾಗಿಯೇ ಬೆಳೆದಿದ್ದವು. ಈ ಚಿರತೆ ಮರಿಗಳನ್ನು ಬೆಳೆದು ದೊಡ್ಡದಾದ ಬಳಿಕ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಅರಣ್ಯದತ್ತ ಇವರು ಬಂದಾಗಲೆಲ್ಲಾ ಈ ಚಿರತೆ ಜೋಡಿ ಇವರನ್ನು ಕಂಡು ಓಡೋಡಿ ಬಂದು ಜೀಪು ಏರುತ್ತಿತ್ತು. ಕಾಡಾನೆ ಮರಿಯಾಗಿ ತಾಯಿಯಿಂದ ಬೇರ್ಪಟ್ಟಿದ್ದ ಲಕ್ಷ್ಮೀ ಕೂಡ ಇವರ ಪೋಷಣೆಯಲ್ಲಿ ಬೆಳೆದಿದ್ದಳು. ಲಕ್ಷ್ಮೀ ದೊಡ್ಡವಳಾಗುವ ಹೊತ್ತಿಗೆ ಆನೆ ಸೇರಿದಂತೆ ಕಾಡು ಪ್ರಾಣಿಗಳನ್ನು ಸಾಕುವುದನ್ನು ನಿರ್ಬಂಧಿಸುವ ನ್ಯಾಯಾಲಯದ ಆದೇಶ ಹೊರ ಬಿದ್ದಿತ್ತು.
ಕಾಡು ಸೇರಿದ ಲಕ್ಷ್ಮಿ ಅಲ್ಲಿನ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟಪಟ್ಟಿದ್ದಳು. ನಂತರ ಆಕೆಯನ್ನು ಅರಣ್ಯ ಇಲಾಖೆ ಶಿಬಿರಕ್ಕೆ ಸೇರಿಸಲಾಗಿತ್ತು. ಮೊದಲಿನಿಂದಲೂ ಮನುಷ್ಯರ ಒಡನಾಟದಲ್ಲಿ ಬೆಳೆದ ಆಕೆಯನ್ನು ದಸರೆ ಗಜಪಡೆಗೂ ಸೇರಿಸಿಕೊಳ್ಳಲಾಗಿತ್ತು. ಈ ಬಾರಿಯೂ ಗಜ ಪಡೆಯ ಭಾಗವಾಗಲು ಬಂದ ಆಕೆ ಗರ್ಭಿಣಿಯಾಗಿರುವ ವಿಚಾರ ಅರಣ್ಯ ಇಲಾಖೆಗೆ ತಿಳಿದಿರಲಿಲ್ಲ.

ದಸರೆಯ ತಂಡದ ಭಾಗವಾಗಿ ಕಳೆದ ಒಂದು ತಿಂಗಳಿನಿಂದ ಉತ್ತಮ ಆರೈಕೆ ಪಡೆದ ಲಕ್ಷ್ಮಿ ಈಗ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಅರಮನೆಯ ಆವರಣದಲ್ಲಿಯೇ ಬಾಣಂತನದ ಆರೈಕೆ ಪಡೆಯುತ್ತಿದ್ದಾಳೆ. ಲಕ್ಷ್ಮಿಯನ್ನು ಬಾಲ್ಯದಲ್ಲಿ ಸಾಕಿ ಬೆಳೆಸಿದ ರಾಜವಂಶಸ್ಥೆ ವಿಶಾಲಾಕ್ಷಿ ಈಗ ನಮ್ಮೊಂದಿಗಿಲ್ಲ. 2018ರ ಅಕ್ಟೋಬರಿನಲ್ಲಿ ವಿಜಯ ದಶಮಿ ದಿನವೇ ಅವರು ನಿಧನರಾಗಿದ್ದರು. ಅವರು ಇದ್ದಿದ್ದರೆ ಲಕ್ಷ್ಮಿಯನ್ನು ಕಂಡು ಎಲ್ಲರಿಗಿಂತ ಹೆಚ್ಚು ಸಂಭ್ರಮಿಸುತ್ತಿದ್ದರು. ಇದೇ ನೆನಪಿನಲ್ಲಿ ಡಿಸಿಎಫ್ ಡಾ. ವಿ.ಕರಿಕಾಳನ್ ಅವರು ಲಕ್ಷ್ಮಿಗೆ ಹೆಸರಿಡುವಂತೆ ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಕೇಳಿಕೊಂಡಿದ್ದರು. ಅವರು ಅರಮನೆ ನಂಟಿರುವ ಆನೆಗೆ ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರ ನೆನಪಿನಲ್ಲಿ ʼ ಶ್ರೀ ದತ್ತಾತ್ತೇಯʼ ಎಂದು ಹೆಸರಿಟ್ಟಿದ್ದಾರೆ.

andolanait

Recent Posts

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

4 hours ago

ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…

5 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

6 hours ago

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…

6 hours ago

ಕಾಡಿನಲ್ಲಿ ಅಕ್ರಮವಾಗಿ ಚರ್ಚ್‌ ನಿರ್ಮಾಣ: 40ಕ್ಕೂ ಹೆಚ್ಚು ಜನರ ಬಂಧನ

ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್‌ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…

7 hours ago

ಹಾರ್ಮುಜ್‌ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್‌ ಎಲ್‌ಪಿಜಿ ಟ್ಯಾಂಕರ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ…

7 hours ago