ಜಿಲ್ಲೆಗಳು

ಸಿನಿಮಾ ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನೇ ಬಾರ್‌ ಆಗಿ ಪರಿವರ್ತಿಸಿದ ಚಿತ್ರತಂಡ

ಮಂಡ್ಯ : ಜಿಲ್ಲೆಯ ಪ್ರಸಿದ್ದ ಸ್ಥಳವಾದ ಮೇಲುಕೋಟೆಯಲ್ಲಿ ತೆಲುಗು ಸಿನಿಮಾ ಚಿತ್ರತಂಡವು ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನೇ ಬಾರ್‌ ಆಗಿ ಪರಿವರ್ತಿಸಿದ ಘಟನೆ ನಡೆದಿದೆ.
ಈ ಮೂಲಕ ಐತಿಹಾಸಿಕ ಪಾರಂಪರೆ, ಸಂಸ್ಕೃತಿಗೆ ದಕ್ಕೆಯನ್ನುಂಟುಮಾಡಿದೆ.ಸಿನಿಮಾ ತಂಡ.
ಪಾರಂಪರಿಕ ಸ್ಥಳವಾದ ರಾಯಗೋಪುರದಲ್ಲಿ ಬಾರ್‌ ರೀತಿಯ ಸೆಟ್‌ ಹಾಕಿ ವಿವಿಧ ಬ್ರಾಂಡ್‌ ಮದ್ಯದ ಬಾಟಲಿಗಳನ್ನಿಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಜನರು ಆರೋಪಿಸಿದ್ದಾರೆ.

ಈ ಚಿತ್ರದಲ್ಲಿ ನಾಯಕ ನಟನಾಗಿ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಅವರು ನಟಿಸುತ್ತಿದ್ದು, ಈ ಸ್ಥಳಗಳಲ್ಲಿ 2 ದಿನಗಳ ಕಾಲ ಚಿತ್ರೀಕರಣವನ್ನು ಮಾಡಲು ಷರತ್ತು ಬದ್ದ ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದರು.
ಆದರೆ ಈ ಸಿನಿಮಾ ತಂಡವು ಸೆಟ್‌ ನಿರ್ಮಿಸಲು ಭಾರೀ ಗಾತ್ರದ ಕಬ್ಬಿಣದ ಕಂಬಗಳನ್ನು ಬಳಸಿದ್ದಲ್ಲದೆ ಅಲ್ಲಿಯ ನಿಯಮವನ್ನು ಉಲ್ಲಂಘಿಸಿದೆ. ಈ ಸಂಬಂಧ ಚಿತ್ರ ತಂಡಕ್ಕೆ ನೋಟಿಸ್‌ ನೀಡಲಾಗಿದ್ದು. ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.

andolanait

Recent Posts

ಮುಂಗಾರು ವೈಫಲ್ಯ: ಬಿತ್ತನೆ ಶೇ.15.95ಕ್ಕೆ ಕುಸಿತ

ಮಹಾದೇಶ್ ಎಂ.ಗೌಡ ಹನೂರು: ಕುಡಿಯುವ ನೀರು, ಮೇವಿಗೂ ತೀವ್ರ ಹಾಹಾಕಾರ ಹನೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು,…

11 seconds ago

ಅಪ್ಪಂದಿರ ಬದಲು ತಾವೇ ನಾಯಕತ್ವ ಹೊರಲು ಸಜ್ಜಾದ ಪುತ್ರರು

ಕೆ.ಬಿ.ರಮೇಶನಾಯಕ ಈಗಾಗಲೇ ಜವಾಬ್ದಾರಿ ಹೊತ್ತಿರುವ ಡಾ.ಯತೀಂದ್ರ, ಸುನಿಲ್‌ಬೋಸ್, ಜಿ.ಡಿ.ಹರೀಶ್ ಗೌಡ ತಂದೆಯಂದಿರ ನಿಧನದಿಂದ ತೆರವಾದ ಸ್ಥಾನ ತುಂಬಿದ ಅನಿಲ್ ಚಿಕ್ಕಮಾದು,…

6 mins ago

ಮಂಡ್ಯ | ಜೈಲಿನಲ್ಲಿ ದುಡ್ಡು ಕೊಟ್ಟರೆ ರಾಜಾತಿಥ್ಯ ಆರೋಪ ; ಕಾರಾಗೃಹದ ಅದೀಕ್ಷಕಿ ವರ್ಗಾವಣೆ

ಕಾರಾಗೃಹದ ಅಧೀಕ್ಷಕಿ ಎಂ.ಶಾಂತಮ್ಮ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಂಡ್ಯ: ವಿಚಾರಣಾಧೀನ ಕೈದಿ ಶ್ರೀರಂಗಪಟ್ಟಣ ಎಡಿಎಲ್‌ಆರ್ ಮೊಹಮದ್ ಹುಸೇನ್‌ಗೆ ಅನಧಿಕೃತ…

9 hours ago

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ನಿರ್ಮಾಣ : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : 26,000 ಕೋಟಿ ಸಾಲ ಪಡೆದು ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣವಾಗುತ್ತಿದೆ ಎಂದು…

10 hours ago

ಗೃಹಜ್ಯೋತಿ | ಮನೆ-ಮನೆ ಸಮೀಕ್ಷೆ ಅವಧಿ ಸೆಪ್ಟೆಂಬರ್‌ 30ರವರೆಗೆ ವಿಸ್ತರಣೆ

ಬೆಂಗಳೂರು : ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ. 2023ರ…

11 hours ago