ಜಾತ್ರೆ ಸಮೀಪಿಸುತ್ತಿದೆ ಈ ಬಣಗಳ ಜಗಕ್ಕೆ ನಾಂದಿಹಾಡುವಂತೆ ಗ್ರಾಮಸ್ಥರ ಒತ್ತಾಯ
ಕೊಳ್ಳೇಗಾಲ: ಪ್ರಸಿದ್ಧ ಸಿದ್ದಪ್ಪಾಜಿ ದೇವಾಲಯ ಇರುವ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಆಸ್ತಿ ಹಾಗೂ ಆಡಳಿತ ಸಂಬಂಧ ಎರಡು ಬಣಗಳು ಹುಟ್ಟಿಕೊಂಡಿದ್ದು ಈ ಸಂಬಂಧ ಎರಡು ಪ್ರತ್ಯೇಕ ದೂರುಗಳು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠ ಮತ್ತು ಚಿಕ್ಕಲ್ಲೂರು ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಭುದೇವರಾಜೇ ಅರಸ್ ಮಗ ಭರತ್ರಾಜೇ ಅರಸ್ ನಡುವೆ ವಿವಾದ ಹುಟ್ಟಿಕೊಂಡಿದ್ದು ಭರತ್ ರಾಜೇ ಅರಸ್ ರವರನ್ನು ಇಲ್ಲಿಂದ ಪದಚ್ಯುತಿಗೊಳಿಸಲು ಜ್ಞಾನನಂದ ಅರಸ್ರವರ ಪತ್ನಿ ಸಮ್ಮತಿ ಅರಸ್ ತಮ್ಮ ದಾಖಲಾತಿಗಳೊಡನೆ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅದೇ ರೀತಿ ಭರತ್ರಾಜೇ ಅರಸ್ರವರು ಕೂಡ ತಮ್ಮ ತಂದೆಯ ಕಾಲದಿಂದಲೂ ಆಡಳಿತ ನಡೆಸುತ್ತಿರುವುದಾಗಿ ತಮ್ಮ ದಾಖಲಾತಿಗಳನ್ನು ಠಾಣೆಗೆ ನೀಡಿದ್ದಾರೆ. ಎರಡು ಗುಂಪುನಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕೆಂದು ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಇದೇ ಸಂಬಂಧ ಚಿಕ್ಕಲ್ಲೂರು ದೇವಸ್ಥಾನಕ್ಕೆ ಸೇರಿದ ಸಾಮಗ್ರಿಗಳು ತುಂಬಿದ್ದ ಗೋಡೌನ್ಗೆ ಬೆಂಕಿ ಹಾಕಿ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಈ ಸಂಬಂಧ ಕೂಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಜನವರಿ ತಿಂಗಳು ಐದು ದಿನಗಳ ಜಾತ್ರೆ ಇರುವುದರಿಂದ ಜಿಲ್ಲಾಡಳಿತ ಅಷ್ಟರೊಳಗೆ ಎರಡು ಬಣಗಳ ನಡುವೆ ಇರುವ ವೈಮನಸ್ಸುಗಳಿಗೆ ನಾಂದಿ ಹಾಡಬೇಕೆಂಬುದು ಈ ಜನರ ಒತ್ತಾಯವಾಗಿದೆ.
ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್ನವರು: ಪ್ರತಿಪಕ್ಷ…
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…
ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…
ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…
ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…