ಮೈಸೂರು : ರಾಮಕೃಷ್ಣನಗರದಲ್ಲಿನ ಕೆ ಬ್ಲಾಕ್ ನಟನ ರಂಗಶಾಲೆಯಲ್ಲಿ ಇದೇ ಭಾನುವಾರದಂದು ಬೆಳಿಗ್ಗೆ 10.30 ಕ್ಕೆ 5 ಛಂದ ಪುಸ್ತಕಗಳು ಮಂಡ್ಯ ರಮೇಶ್ ರವರ ಸಹಕಾರದೊಂದಿಗೆ ಬಿಡುಗಡೆಗೊಳ್ಳಲಿವೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ಓ ಎಲ್.ನಾಗಭೂಷಣ ಸ್ವಾಮಿ ಹಾಗೂ ದಾದಾಪೀರ್ ಜೈಮನ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕುಸುಮಾ ಆಯರಹಳ್ಳಿ, ದರ್ಶನ್ ಜಯಣ್ಣ, ಪ್ರೀತಿ ನಾಗರಾಜ, ಜಯಶ್ರೀ ಭಟ್, ವಿಕ್ರಮ ವಿಸಾಜಿ ಉಪಸ್ಥಿತಿ ವಹಿಸಲಿದ್ದಾರೆ.
ಅಂದು ಬಿಡುಗಡೆಗೊಳ್ಳಲಿರುವ ಪುಸ್ತಕಗಳು :
ಕುಸುಮಾ ಆಯರಹಳ್ಳಿ ಅವರ ಕಾದಂಬರಿ “ದಾರಿ”
ದರ್ಶನ್ ಜಯಣ್ಣ ಬರೆದ ಅವರ ತಂದೆಯ ಕತೆ “ಅಪ್ಪನ ರ್ಯಾಲೀಸ್ ಸೈಕಲ್”
ಪ್ರೀತಿ ನಾಗರಾಜ ಅವರು ಅನುವಾದಿಸಿರುವ, ಮಾರ್ಜಾನ್ ಸತ್ರಪಿ ಅವರ ಗ್ರಾಫಿಕ್ ಕಾದಂಬರಿ “ಪರ್ಸೆಪೊಲಿಸ್”
ಜಯಶ್ರೀ ಭಟ್ ಅನುವಾದಿಸಿರುವ, ಈಡಿತ್ ಎಗರ್ ಆತ್ಮಕತೆ “ದಿ ಚಾಯ್ಸ್ ”
ವಿಕ್ರಮ ವಿಸಾಜಿ ಅನುವಾದಿಸಿರುವ, ಗರಿಮಾ ಶ್ರೀವಾಸ್ತವ ಅವರ ಪ್ರವಾಸ ಕಥನ ” ದೇಹವೇ ದೇಶ”
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…