ಜಿಲ್ಲೆಗಳು

ಮೈಸೂರು ಕಾರಾಗೃಹ ವಾಸಿಗಳಿಗೆ ಕೌಶಲ ತರಬೇತಿ

ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ೧೪೦ ಕೈದಿಗಳಿಗೆ ಸುಧಾರಿತ ಕೌಶಲ ಕಲಿಕೆ

-ಬಿ.ಎನ್.ಧನಂಜಯಗೌಡ

ಮೈಸೂರು: ಜೈಲಿನಿಂದ ಬಂಧಮುಕ್ತರಾದ ನಂತರ ಸಾಮಾನ್ಯರಂತೆ ದುಡಿದು ಬದುಕಲು ಪೂರಕವಾಗುವಂತೆ ಸುಧಾರಿತ ಕೌಶಲ ತರಬೇತಿಯನ್ನು ೧೪೦ ಕೈದಿಗಳಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನೀಡಲಾಗುತ್ತಿದೆ.

ತಿಳಿದೋ, ತಿಳಿಯದೆಯೋ ನಾನಾ ತರದ ತಪ್ಪುಗಳನ್ನು ಮಾಡಿ, ಕಾರಾಗೃಹ ಸೇರುವ ಕೈದಿಗಳಿಗೆ ಬಂಧಮುಕ್ತರಾದ ನಂತರ ಎಲ್ಲರಂತೆ ನ್ಯಾಯಯುತ ಮಾರ್ಗದಲ್ಲಿ ಬದುಕಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆ ಜಂಟಿಯಾಗಿ ನಾನಾ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ಪುರುಷ, ಮಹಿಳಾ ಕಾರಾಗೃಹ ವಾಸಿಗಳಿಗೆ ಟೈಲರಿಂಗ್, ಎಲೆಕ್ಟ್ರಿಷಿಯನ್, ತೋಟಗಾರಿಕೆ, ಡೇಟಾ ಎಂಟ್ರಿ, ಬ್ಯೂಟಿಷಿಯನ್, ಕೇಶ ವಿನ್ಯಾಸದಂತಹ ಸುಧಾರಿತ ಕೌಶಲ ತರಬೇತಿಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು (ಕೆಎಸ್‌ಡಿಸಿ) ನೀಡಲಾಗುತ್ತಿದೆ.

ಸರ್ಟಿಫಿಕೇಟ್ ಕೋರ್ಸ್: ಈ ತರಬೇತಿಗಳನ್ನು ಸರ್ಟಿಫಿಕೇಟ್ ಕೋರ್ಸ್ ಆಧಾರದಲ್ಲಿ ಹಮ್ಮಿಕೊಂಡಿದ್ದು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವೇ ತರಬೇತಿ ಪಡೆಯುವ ಕೈದಿಗಳ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಸರ್ಟಿಫಿಕೇಟ್ ನೀಡಲಿದೆ. ವಿದ್ಯಾರ್ಹತೆ ಮತ್ತು ಆಸಕ್ತಿಯನ್ನು ಆಧರಿಸಿ, ೧೪೦ ಕೈದಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.

ತರಬೇತಿಯ ವಿವರ: ಜನಶಿಕ್ಷಣ ಸಂಸ್ಥೆಯ ಎನ್‌ಎಸ್‌ಡಿಸಿ ಅಡಿಯಲ್ಲಿ ೨೦ ಪುರುಷ ಕೈದಿಗಳಿಗೆ ೧೦೫ದಿನಗಳ ಎಲೆಕ್ಟ್ರಿಷಿಯನ್ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗೆ ಎನ್‌ಎಸ್‌ಡಿಸಿಯಿಂದಲೇ ಸರ್ಟಿಫಿಕೇಟ್ ನೀಡಲಾಗುತ್ತದೆ.

ಇನ್ನು ಜೆಕೆ ಟೈರ್ಸ್‌ ಸಿಎಸ್‌ಆರ್ ಫಂಡ್‌ನಿಂದ ೨೦ ಮಹಿಳಾ ಕೈದಿಗಳಿಗೆ ೨೫೦ ಗಂಟೆಗಳ ಬ್ಯೂಟಿಷಿಯನ್, ೨೦ ಪುರುಷ ಕೈದಿಗಳಿಗೆ ೨೫೦ ಗಂಟೆಗಳ ಕೇಶ ವಿನ್ಯಾಸ, ೨೦ ಪುರುಷ ಕೈದಿಗಳಿಗೆ ೩೦೦ ಗಂಟೆಗಳ ಡೊಮೆಸ್ಟಿಕ್ ಹೆಲ್ಫ್ ಡೆಸ್ಕ್ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಗಳನ್ನು ಸಿಎಸ್‌ಆರ್ ಚಟುವಟಿಕೆಯಡಿ ಹಮ್ಮಿಕೊಂಡಿದ್ದರೂ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.

ಕೆಎಸ್‌ಡಿಸಿ, ಕಾರಾಗೃಹ ಇಲಾಖೆಯ ತರಬೇತಿ: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆಯಿಂದ ೩೦ ಕೈದಿಗಳಿಗೆ ೨೭೦ ಗಂಟೆಗಳ ಟೈಲರಿಂಗ್, ೩೦ ಕೈದಿಗಳಿಗೆ ೩೦೦ ತೋಟಗಾರಿಕೆ ತರಬೇತಿ ನೀಡಲಾಗುತ್ತಿದೆ. ಈ ೬೦ ಮಂದಿಯೂ ಪುರುಷ ಕೈದಿಗಳಾಗಿದ್ದಾರೆ. ಇದಕ್ಕೂ ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.

ವೆಚ್ಚ: ಈ ಎಲ್ಲ ತರಬೇತಿಗಳು ಪ್ರತಿದಿನ ೩ರಿಂದ ೪ ಗಂಟೆಗಳ ಕಾಲ ನಡೆಯಲಿದೆ. ಜನಶಿಕ್ಷಣ ಸಂಸ್ಥೆಯು ತರಬೇತಿ ನೀಡಲು ಒಬ್ಬರನ್ನು ನಿಯೋಜಿಸಿದ್ದು, ಬಹಳ ಹಿಂದಿನಿಂದಲೂ ಸಂಸ್ಥೆ ತರಬೇತಿ ನೀಡುತ್ತಾ ಬರುತ್ತಿದೆ. ಇನ್ನುಳಿದ ಎಲ್ಲ ತರಬೇತಿ ಕಾರ್ಯಕ್ರಮಗಳಿಗೂ ತರಬೇತಿ ನೀಡಲು ತಲಾ ಇಬ್ಬರನ್ನು ನಿಯೋಜಿಸಲಾಗಿದೆ. ಜೆಕೆ ಟೈರ್ಸ್‌ನಿಂದ ಹಮ್ಮಿಕೊಂಡಿರುವ ಮೂರು ತರಬೇತಿ ಕಾರ್ಯಕ್ರಮಗಳಿಗೆ ೬.೬೨ ಲಕ್ಷ ರೂ., ಕೆಎಸ್‌ಡಿಸಿ, ಕಾರಾಗೃಹ ಇಲಾಖೆ ಮತ್ತು ಕಾರಾಗೃಹ ಇಲಾಖೆ ಸಹಯೋಗದ ಎರಡು ತರಬೇತಿ ಕಾರ್ಯಕ್ರಮಗಳಿಗೆ ೭.೦೪ ಲಕ್ಷ ರೂ. ವೆಚ್ಚವಾಗಲಿದೆ.

ಈ ಎಲ್ಲ ತರಬೇತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಟಿಫಿಕೇಟ್ ಕೋರ್ಸ್‌ಗಳಾಗಿವೆ. ಈ ಪ್ರಮಾಣ ಪತ್ರಗಳಿಗೆ ಲೈಫ್ ಟೈಮ್ ವಾರಂಟಿ ಇರಲಿದೆ. ಬಂಧಮುಕ್ತವಾದ ನಂತರ ಇದರ ಆಧಾರದಲ್ಲಿ ಸಾಲ ಸೌಲಭ್ಯ ಪಡೆದು ಉದ್ಯಮ ನಡೆಸಬಹುದು. ಕೈದಿಗಳ ಮನಃಪರಿವರ್ತನೆ ಜೊತೆಗೆ ಕ್ರಿಯಾಶೀಲವಾಗಿಟ್ಟು, ಅವರ ಜೀವನೋಪಾಯಕ್ಕೂ ನೆರವಾಗುವ ಕೌಶಲ ತರಬೇತಿ ನೀಡಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ನೆರವು ನೀಡಲಾಗುತ್ತಿದೆ. – ದಿವ್ಯಶ್ರೀ, ಮುಖ್ಯ ಅಧೀಕ್ಷಕರು, ಮೈಸೂರು ಕೇಂದ್ರ ಕಾರಾಗೃಹ

 

 

andolana

Recent Posts

ಚೇತನ್ ಅಹಿಂಸಾ ಗಡಿಪಾರಿಗೆ ಆಗ್ರಹ

ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…

2 hours ago

ಕೊಡಗು | ಗುಂಡು ಹೊಡೆದುಕೊಂಡು ಶಿಕ್ಷಕಿ ಆತ್ಮಹತ್ಯೆ

ಮಡಿಕೇರಿ : ಶಿಕ್ಷಕಿಯೊಬ್ಬರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.…

2 hours ago

ಬಿಜೆಪಿಗೆ ಸೇರ್ಪಡೆಗೊಂಡ 7 ರಾಜ್ಯಸಭಾ ಸದಸ್ಯರ ವಿರುದ್ಧ ಕ್ರಮಕ್ಕೆ ಎಎಪಿ ಆಗ್ರಹ

ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)…

2 hours ago

ಶಾಲೆಗಳಲ್ಲಿ ದಿನಪತ್ರಿಕೆ ಓದುವುದು ಇನ್ಮುಂದೆ ಕಡ್ಡಾಯ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…

3 hours ago

ಜನಗಣತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲ್ಗೊಳ್ಳುವಿಕೆ ಅತ್ಯಗತ್ಯ: ಪ್ರಧಾನಿ ಮೋದಿ

ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…

3 hours ago

ಮೈಸೂರು | ಕರಗ ಮಹೋತ್ಸವ ಸಂಪನ್ನ

ಮೈಸೂರು : ನಗರದ ಇಟ್ಟಿಗೆಗೂಡಿನ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ೧೦೨ನೇ ಕರಗಮಹೋತ್ಸವ…

3 hours ago