ಜಿಲ್ಲೆಗಳು

ಮೈಸೂರು ಕಾರಾಗೃಹ ವಾಸಿಗಳಿಗೆ ಕೌಶಲ ತರಬೇತಿ

ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ೧೪೦ ಕೈದಿಗಳಿಗೆ ಸುಧಾರಿತ ಕೌಶಲ ಕಲಿಕೆ

-ಬಿ.ಎನ್.ಧನಂಜಯಗೌಡ

ಮೈಸೂರು: ಜೈಲಿನಿಂದ ಬಂಧಮುಕ್ತರಾದ ನಂತರ ಸಾಮಾನ್ಯರಂತೆ ದುಡಿದು ಬದುಕಲು ಪೂರಕವಾಗುವಂತೆ ಸುಧಾರಿತ ಕೌಶಲ ತರಬೇತಿಯನ್ನು ೧೪೦ ಕೈದಿಗಳಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನೀಡಲಾಗುತ್ತಿದೆ.

ತಿಳಿದೋ, ತಿಳಿಯದೆಯೋ ನಾನಾ ತರದ ತಪ್ಪುಗಳನ್ನು ಮಾಡಿ, ಕಾರಾಗೃಹ ಸೇರುವ ಕೈದಿಗಳಿಗೆ ಬಂಧಮುಕ್ತರಾದ ನಂತರ ಎಲ್ಲರಂತೆ ನ್ಯಾಯಯುತ ಮಾರ್ಗದಲ್ಲಿ ಬದುಕಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆ ಜಂಟಿಯಾಗಿ ನಾನಾ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ಪುರುಷ, ಮಹಿಳಾ ಕಾರಾಗೃಹ ವಾಸಿಗಳಿಗೆ ಟೈಲರಿಂಗ್, ಎಲೆಕ್ಟ್ರಿಷಿಯನ್, ತೋಟಗಾರಿಕೆ, ಡೇಟಾ ಎಂಟ್ರಿ, ಬ್ಯೂಟಿಷಿಯನ್, ಕೇಶ ವಿನ್ಯಾಸದಂತಹ ಸುಧಾರಿತ ಕೌಶಲ ತರಬೇತಿಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು (ಕೆಎಸ್‌ಡಿಸಿ) ನೀಡಲಾಗುತ್ತಿದೆ.

ಸರ್ಟಿಫಿಕೇಟ್ ಕೋರ್ಸ್: ಈ ತರಬೇತಿಗಳನ್ನು ಸರ್ಟಿಫಿಕೇಟ್ ಕೋರ್ಸ್ ಆಧಾರದಲ್ಲಿ ಹಮ್ಮಿಕೊಂಡಿದ್ದು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವೇ ತರಬೇತಿ ಪಡೆಯುವ ಕೈದಿಗಳ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಸರ್ಟಿಫಿಕೇಟ್ ನೀಡಲಿದೆ. ವಿದ್ಯಾರ್ಹತೆ ಮತ್ತು ಆಸಕ್ತಿಯನ್ನು ಆಧರಿಸಿ, ೧೪೦ ಕೈದಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.

ತರಬೇತಿಯ ವಿವರ: ಜನಶಿಕ್ಷಣ ಸಂಸ್ಥೆಯ ಎನ್‌ಎಸ್‌ಡಿಸಿ ಅಡಿಯಲ್ಲಿ ೨೦ ಪುರುಷ ಕೈದಿಗಳಿಗೆ ೧೦೫ದಿನಗಳ ಎಲೆಕ್ಟ್ರಿಷಿಯನ್ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗೆ ಎನ್‌ಎಸ್‌ಡಿಸಿಯಿಂದಲೇ ಸರ್ಟಿಫಿಕೇಟ್ ನೀಡಲಾಗುತ್ತದೆ.

ಇನ್ನು ಜೆಕೆ ಟೈರ್ಸ್‌ ಸಿಎಸ್‌ಆರ್ ಫಂಡ್‌ನಿಂದ ೨೦ ಮಹಿಳಾ ಕೈದಿಗಳಿಗೆ ೨೫೦ ಗಂಟೆಗಳ ಬ್ಯೂಟಿಷಿಯನ್, ೨೦ ಪುರುಷ ಕೈದಿಗಳಿಗೆ ೨೫೦ ಗಂಟೆಗಳ ಕೇಶ ವಿನ್ಯಾಸ, ೨೦ ಪುರುಷ ಕೈದಿಗಳಿಗೆ ೩೦೦ ಗಂಟೆಗಳ ಡೊಮೆಸ್ಟಿಕ್ ಹೆಲ್ಫ್ ಡೆಸ್ಕ್ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಗಳನ್ನು ಸಿಎಸ್‌ಆರ್ ಚಟುವಟಿಕೆಯಡಿ ಹಮ್ಮಿಕೊಂಡಿದ್ದರೂ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.

ಕೆಎಸ್‌ಡಿಸಿ, ಕಾರಾಗೃಹ ಇಲಾಖೆಯ ತರಬೇತಿ: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆಯಿಂದ ೩೦ ಕೈದಿಗಳಿಗೆ ೨೭೦ ಗಂಟೆಗಳ ಟೈಲರಿಂಗ್, ೩೦ ಕೈದಿಗಳಿಗೆ ೩೦೦ ತೋಟಗಾರಿಕೆ ತರಬೇತಿ ನೀಡಲಾಗುತ್ತಿದೆ. ಈ ೬೦ ಮಂದಿಯೂ ಪುರುಷ ಕೈದಿಗಳಾಗಿದ್ದಾರೆ. ಇದಕ್ಕೂ ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.

ವೆಚ್ಚ: ಈ ಎಲ್ಲ ತರಬೇತಿಗಳು ಪ್ರತಿದಿನ ೩ರಿಂದ ೪ ಗಂಟೆಗಳ ಕಾಲ ನಡೆಯಲಿದೆ. ಜನಶಿಕ್ಷಣ ಸಂಸ್ಥೆಯು ತರಬೇತಿ ನೀಡಲು ಒಬ್ಬರನ್ನು ನಿಯೋಜಿಸಿದ್ದು, ಬಹಳ ಹಿಂದಿನಿಂದಲೂ ಸಂಸ್ಥೆ ತರಬೇತಿ ನೀಡುತ್ತಾ ಬರುತ್ತಿದೆ. ಇನ್ನುಳಿದ ಎಲ್ಲ ತರಬೇತಿ ಕಾರ್ಯಕ್ರಮಗಳಿಗೂ ತರಬೇತಿ ನೀಡಲು ತಲಾ ಇಬ್ಬರನ್ನು ನಿಯೋಜಿಸಲಾಗಿದೆ. ಜೆಕೆ ಟೈರ್ಸ್‌ನಿಂದ ಹಮ್ಮಿಕೊಂಡಿರುವ ಮೂರು ತರಬೇತಿ ಕಾರ್ಯಕ್ರಮಗಳಿಗೆ ೬.೬೨ ಲಕ್ಷ ರೂ., ಕೆಎಸ್‌ಡಿಸಿ, ಕಾರಾಗೃಹ ಇಲಾಖೆ ಮತ್ತು ಕಾರಾಗೃಹ ಇಲಾಖೆ ಸಹಯೋಗದ ಎರಡು ತರಬೇತಿ ಕಾರ್ಯಕ್ರಮಗಳಿಗೆ ೭.೦೪ ಲಕ್ಷ ರೂ. ವೆಚ್ಚವಾಗಲಿದೆ.

ಈ ಎಲ್ಲ ತರಬೇತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಟಿಫಿಕೇಟ್ ಕೋರ್ಸ್‌ಗಳಾಗಿವೆ. ಈ ಪ್ರಮಾಣ ಪತ್ರಗಳಿಗೆ ಲೈಫ್ ಟೈಮ್ ವಾರಂಟಿ ಇರಲಿದೆ. ಬಂಧಮುಕ್ತವಾದ ನಂತರ ಇದರ ಆಧಾರದಲ್ಲಿ ಸಾಲ ಸೌಲಭ್ಯ ಪಡೆದು ಉದ್ಯಮ ನಡೆಸಬಹುದು. ಕೈದಿಗಳ ಮನಃಪರಿವರ್ತನೆ ಜೊತೆಗೆ ಕ್ರಿಯಾಶೀಲವಾಗಿಟ್ಟು, ಅವರ ಜೀವನೋಪಾಯಕ್ಕೂ ನೆರವಾಗುವ ಕೌಶಲ ತರಬೇತಿ ನೀಡಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ನೆರವು ನೀಡಲಾಗುತ್ತಿದೆ. – ದಿವ್ಯಶ್ರೀ, ಮುಖ್ಯ ಅಧೀಕ್ಷಕರು, ಮೈಸೂರು ಕೇಂದ್ರ ಕಾರಾಗೃಹ

 

 

andolana

Recent Posts

ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಸಾವು

ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

6 hours ago

ಬಸ್-ಲಾರಿ ನಡುವೆ ಡಿಕ್ಕಿ; ಹಲವರಿಗೆ ಗಾಯ

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್…

6 hours ago

ಸಿಡಿಲು ಬಡಿದು ರೈತ ಸಾವು

ಬೆಟ್ಟದಪುರ: ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಎಸ್.ಟಿ.ಆನಂದ್ (೬೦)…

7 hours ago

ಟಾಟಾ ಏಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ…

7 hours ago

ಒಂದು ವಾರ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ: ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…

8 hours ago

ಉಡುಪಿ ಶ್ರೀಕೃಷ್ಣಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…

9 hours ago