ಮೈಸೂರಿನಲ್ಲಿ ಮತ್ತೊಂದು ಅಮಾನುಷ ಘಟನೆ: ಮೂವರ ಸ್ಥಿತಿ ಗಂಭೀರ, ಚಾಲಕ ಬಂಧನ
ಮೈಸೂರು: ನಿಯಮಬಾಹಿರವಾಗಿ ಕಟ್ಟಡ ಕಟ್ಟುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ದ್ವೇಷ ಸಾಧಿಸಿ ಇ.ಡಿ. ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರನ್ನು ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ, ಬೇಕಾಬಿಟ್ಟಿ ಕಾರು ಚಾಲನೆ ಸಂಬಂಧ ಬುದ್ಧಿ ಹೇಳಿದ ಮೂವರ ಮೇಲೆ ಕಾರು ಹರಿಸಿ, ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ತಡರಾತ್ರಿ ನಗರದಲ್ಲಿ ನಡೆದಿದೆ.
ಪೋಷಕರು ಕಾರಿನಲ್ಲಿದ್ದಾಗಲೇ ಈ ಕೃತ್ಯ ಎಸಗಿದ ಟಿ.ಕೆ.ಲೇಔಟ್ ನಿವಾಸಿ ವಾಸುದೇವ್ ಎಂಬವರ ಮಗ ದರ್ಶನ್ (೨೪) ಎಂಬಾತನನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ಧಾರೆ. ಘಟನೆಯಲ್ಲಿ ಬೆಮೆಲ್ ಲೇಔಟ್ ನಿವಾಸಿ ಪ್ರಜ್ವಲ್(೨೪), ಶಾರದಾದೇವಿ ನಗರ ನಿವಾಸಿ ರಾಹುಲ್(೨೬), ಬೋಗಾದಿ ೨ನೇ ಹಂತದ ನಿವಾಸಿ ಆನಂದ್(೨೪) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ: ಭಾನುವಾರ ರಾತ್ರಿ ಪ್ರಜ್ವಲ್ ಮತ್ತು ರಾಹುಲ್ ಎಂಬವರು ಟೀ ಕುಡಿಯುವ ಸಲುವಾಗಿ ಕಾರಿನಲ್ಲಿ ರೈಲ್ವೆ ನಿಲ್ದಾಣದ ಬಳಿ ಹೊರಟಿದ್ದರು. ಶಾರದಾದೇವಿ ನಗರದ ಸ್ಟೋನ್ ಬಿಲ್ಡಿಂಗ್ ಬಳಿಯಿಂದ ಜನತಾನಗರ ಟೆಂಟ್ ಸರ್ಕಲ್ ಕಡೆ ತೆರಳಿ ಅಲ್ಲಿಂದ ಸುಮಾರು ೧೨.೩೦ಕ್ಕೆ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿದಾಗ ಅದೇ ಮಾರ್ಗವಾಗಿ ಬಂದ ಅವರ ಸ್ನೇಹಿತ ಆನಂದ ಮತ್ತು ಅವನ ಸ್ನೇಹಿತರು ಕಾರಿನ ಬಳಿ ಬಂದು ಮಾತನಾಡಿಸುತ್ತಿದ್ದು, ಈ ವೇಳೆ ಫಾರ್ಚುನರ್ ಬಿಳಿ ಬಣ್ಣದ ಕಾರಿನಲ್ಲಿ ಎದುರಿನಿಂದ ಬಂದ ದರ್ಶನ್ ಅತೀ ವೇಗವಾಗಿ ಭಾರೀ ಶಬ್ಧ ಮಾಡುತ್ತಾ, ನಮ್ಮ ಕಾರಿಗೆ ತಾಕುವಂತೆ ಹತ್ತಿರ ಬಂದಿದ್ದಾನೆ. ಇವರುಗಳು ಹತ್ತಿರ ಹೋಗಿ ‘ಯಾಕೆ ಬ್ರೋ, ಏಕೆ ಹೀಗೆ ನಮ್ಮ ಮೇಲೆ ಕಾರು ಹತ್ತಿಸುವಂತೆ ಬಂದಿದ್ದೀಯಾ’ ಎಂದಾಗ ಡ್ರೈವರ್ ಸೀಟಿನಿಂದ ಎದ್ದು ಬಂದ ದರ್ಶನ್ ರಾಹುಲ್ ಮೇಲೆ ಹಲ್ಲೆ ಮಾಡಲು ಬಂದಿದ್ದು, ಆತನ ಕಾರಿನಿಂದ ಇಳಿದ ಅವರ ತಂದೆ-ತಾಯಿ ನಮ್ಮದೇ ತಪ್ಪಾಗಿದೆ ಕ್ಷಮಿಸಿ ಎಂದು ಎಲ್ಲರನ್ನೂ ಸಮಾಧಾನ ಮಾಡಿದ್ದು, ಬಳಿಕ ದರ್ಶನ ಮತ್ತು ತಂದೆ-ತಾಯಿ ಕಾರಿನ ಒಳಗೆ ಕುಳಿತಿದ್ದಾರೆ.
ಬಳಿಕ ಪ್ರಜ್ವಲ್, ರಾಹುಲ್, ಆನಂದ ಅವರು ತಮ್ಮ ಕಾರಿನ ಬಳಿಗೆ ಹೋಗುವಾಗ ದರ್ಶನ್ ಅವಾಚ್ಯವಾಗಿ ನಿಂದಿಸುತ್ತಾ, ಏಕಾಏಕಿ ಕಾರು ಚಾಲನೆ ಮಾಡಿಕೊಂಡು ಬಂದು ಅವರನ್ನು ಬೀಳಿಸಿ, ಅವರ ಮೇಲೆ ಹಿಂದೆ-ಮುಂದೆ ಕಾರು ಚಲಾಯಿಸಿದ್ದಾರೆ. ಇದರಿಂದಾಗಿ, ಪ್ರಜ್ವಲ್ನ ಎಡ ತೊಡೆ, ಎಡ ತಲೆ, ಎಡ ಕೆನ್ನೆ, ಹೊಟ್ಟೆ, ಬಲ ಭುಜದ ಭಾಗಗಳು, ರಾಹುಲ್ ಎಂಬುವರಿಗೆ ತಲೆ, ಬಲ ಭುಜ, ಎಡ ಕಾಲಿನ ಭಾಗಗಳು ಪೆಟ್ಟಾಗಿದ್ದು, ಆನಂದನಿಗೂ ಸಹ ತೀವ್ರ ಗಾಯವಾಗಿದೆ. ಮೂವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಗರದ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಡ್ಡಾಗಳ ಮೇಲೆ ಪೊಲೀಸರು ನಿಗಾ ವಹಿಸಲಿ
ನಗರದ ಹಲವೆಡೆ ರಾತ್ರಿ ೧೧ರ ನಂತರವೂ ಸಣ್ಣ ಚಹಾ, ಸಿಗರೇಟ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ವಿದ್ಯಾರ್ಥಿಗಳು, ಯುವ ಸಮೂಹ ಅಡ್ಡಾ ಮಾಡಿಕೊಂಡಿದ್ದು, ಆಗಾಗ ಗಲಾಟೆ ನಡೆಯುತ್ತಲೇ ಇದೆ. ಕೆಲವಷ್ಟು ಬೆಳಕಿಗೆ ಬಂದರೆ ಇನ್ನಷ್ಟು ಪೊಲೀಸರಿಗೆ ತಿಳಿಯುತ್ತದೆ. ಪೊಲೀಸ್ ಗಸ್ತು ಹೆಚ್ಚಿಸಿ ಇಂತಹ ಅಡ್ಡಾಗಳನ್ನು ನಿಯಂತ್ರಿಸಿ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎನ್ನುವುದು ನಾಗರೀಕರ ಸಲಹೆಯಾಗಿದೆ.
ಕಾರು ರಸ್ತೆಯಲ್ಲಿ ನಿಲ್ಲಿಸಿದ್ದರೆಂದು ಶುರುವಾದ ಜಗಳ ಈ ರೀತಿ ಆಗಿದೆ. ಇದರ ಹಿಂದೆ ಬೇರೆ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಆದರೂ ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನಡೆದಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ಧಾರೆ . -ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ.
ಮೂವರಿಗೂ ತೀವ್ರವಾಗಿ ಗಾಯಗಳಾಗಿವೆ. ರಾಹುಲ್ ಮತ್ತು ಆನಂದ್ ಇಬ್ಬರಿಗೂ ಸರ್ಜರಿಯಾಗಿ ಐಸಿಯುನಲ್ಲಿ ಇದ್ದಾರೆ. ಪ್ರಜ್ವಲ್ಗೆ ಹಾರ್ಟ್ ಬೀಟ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ, ಇನ್ನು ಸರ್ಜರಿಯಾಗಿಲ್ಲ. ಐಸಿಯುನಲ್ಲಿಯೇ ಇದ್ದಾರೆ. – ನಾಗರಾಜ್, (ಗಾಯಾಳು ಪ್ರಜ್ವಲ್ ತಂದೆ)
ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…
ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…