ಚಾಮರಾಜನಗರ

ಸಾಲ ಕಟ್ಟಿಲ್ಲ ಎಂದು ರೈತನ ಮನೆ ಜಪ್ತಿ ಮಾಡಿದ ಖಾಸಗಿ ಬ್ಯಾಂಕ್

ಗುಂಡ್ಲುಪೇಟೆ : ಸಾಲ ಕಟ್ಟಿಲ್ಲ ಎಂದು ರೈತನ ಮನೆ ಜಪ್ತಿ ಮಾಡಿರುವ ಘಟನೆ ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಹುರ್ ಅಹಮದ್ ಎಂಬವರು ೪.೫೦ ಲಕ್ಷ ರೂ.ಗಳನ್ನು ಜನ ಬ್ಯಾಂಕ್ ಎಂಬ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ೭೨ ತಿಂಗಳ ಅವಧಿಯಲ್ಲಿ ತಿಂಗಳಿಗೆ ೧೧,೨೦೦ ರೂ. ಕಟ್ಟಲು ಒಪ್ಪಿ ಸಾಲ ಪಡೆದಿದ್ದರು.

ಆದರೆ ರೈತ ಜಹುರ್ ಅವರು ೩೦ ತಿಂಗಳು ಮಾಸಿಕ ಕಂತುಗಳನ್ನು ಕಟ್ಟಿದ್ದರು. ಆದರೆ ಅವರ ಅಣ್ಣನಿಗೆ ಅಪಘಾತವಾಗಿದ್ದರಿಂದ ಆಸ್ಪತ್ರೆಗೆ ಹಣ ಖರ್ಚಾಗಿತ್ತು. ಹೀಗಾಗಿ ಎಂಟು ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.

ಆದರೆ ಜನ ಬ್ಯಾಂಕ್‌ನವರು ಇನ್ನೂ ಕೂಡ ೭೨ ತಿಂಗಳು ಅವಧಿ ಮುಗಿಯದೇ ಇದ್ದರೂ ಕೂಡ ಕೇವಲ ಎಂಟು ತಿಂಗಳ ಕಂತು ಬಾಕಿ ಇದ್ದದ್ದನ್ನೇ ಗುರಿಯಾಗಿಸಿ, ಕೋರ್ಟಿಗೆ ಹೋಗಿ ಅನುಮತಿಯನ್ನು ಪಡೆದುಕೊಂಡು ಪೊಲೀಸರ ಭದ್ರತೆಯೊಂದಿಗೆ ರೈತನ ವಾಸದ ಮನೆಗೆ ಬೀಗ ಜಡಿದಿದ್ದಾರೆ.

ಏಕಾಏಕಿ ಮನೆಗೆ ಬೀಗ ಜಡಿದಿರುವುದು ಸರಿಯಲ್ಲ. ರೈತನಿಗೆ ಕಾಲಾವಕಾಶ ನೀಡಬೇಕಿತ್ತು ಎಂದು ರೈತ ಮುಖಂಡ ಕಡಬೂರು ಮಂಜುನಾಥ್ ತಿಳಿಸಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ ರೈತನಿಗೆ ಇವತ್ತಿನವರೆಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ. ನೋಟಿಸ್ ಕೊಟ್ಟಿಲ್ಲವೆಂದು ಕೇಳಿದರೆ ಪತ್ರಿಕೆಯಲ್ಲಿ ಹಾಕಿಸಿದ್ದೇವೆ ಎಂದು ಹೇಳುತ್ತಾರೆ ಎನ್ನುವುದು ರೈತರ ಅಳಲು.

ಕಾನೂನಿನಲ್ಲಿ ಅವಧಿಗೂ ಮೊದಲು ಕಂತು ಕಟ್ಟುವ ವ್ಯವಸ್ಥೆ ಎಲ್ಲಿದೆ? ಅವಧಿಗೂ ಮುನ್ನ ೭೨ ತಿಂಗಳು ಮುಗಿಯದೆ ಮನೆಗೆ ಬೀಗ ಜಡಿಯಲು ಯಾವ ಕಾನೂನು ಇದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅನ್ಯಾಯದ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಯಾರೇ ಹೋರಾಟ ಮಾಡುವಂತಹ ಸಂದರ್ಭದಲ್ಲಿ ನಮ್ಮೊಂದಿಗೆ ನ್ಯಾಯಾಲಯವಿದೆ ಎಂಬ ನಂಬಿಕೆ ಅಗಾಧವಾಗಿರುತ್ತದೆ, ಆದರೆ ನ್ಯಾಯಾಲಯ ೭೨ ತಿಂಗಳವರೆಗೆ ಕಾಯದೆ, ಇನ್ನೂ ೪೦ ಕಂತು ಬಾಕಿ ಇದ್ದರೂ ಜನ ಬ್ಯಾಂಕ್ ಪರವಾಗಿ ನಿಂತು, ಮನೆಗೆ ಬೀಗ ಜಡಿಸಿರುವುದು ಸರಿಯಲ್ಲ. – ಕಡಬೂರು ಮಂಜುನಾಥ್, ರೈತ ಮುಖಂಡ

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು,…

2 hours ago

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ…

4 hours ago

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ : ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೆಟ್ಸ್‌

ಬೆಂಗಳೂರು : ಹೈಕಮಾಂಡ್‌ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…

5 hours ago

ಯಾರೇ ಸಿಎಂ ಆದರೂ ಕರ್ನಾಟಕ ಅಭಿವೃದ್ಧಿಯಾಗಲ್ಲ: ವಿಜಯೇಂದ್ರ

ಕೊಪ್ಪಳ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ…

7 hours ago

ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್‌ ನಿರ್ಧಾರ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ…

8 hours ago

ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ. ಸಿಎಂ ಹುದ್ದೆಗೆ ಇಂದು ಸಿದ್ದರಾಮಯ್ಯ ರಾಜೀನಾಮೆ…

9 hours ago